ನೀವೊಬ್ಬರೇ ಇರುವಾಗ ಹೃದಯಾಘಾತ ಆದರೆ ಏನು ಮಾಡಬೇಕು? ಏನು ಮಾಡಬಾರದು?

Update: 2016-09-24 09:38 GMT

ಹೃದಯಾಘಾತ ಹಲವಾರು ಬಾರಿ ಮನುಷ್ಯನನ್ನು ಸೈಲೆಂಟ್ ಆಗಿ ಕೊಂದು ಬಿಡುತ್ತದೆ. ಎಷ್ಟೋ ಬಾರಿ ಹತ್ತಿರದಲ್ಲಿ ಯಾರೂ ಇಲ್ಲದೇ ಇದ್ದಾಗ ಹೃದಯಾಘಾತ ಸಂಭವಿಸಿ ಬಿಡುತ್ತದೆ. ಈ ಸಂದರ್ಭ ಸರಿಯಾದಕ್ರಮಗಳನ್ನು ಕೈಗೊಳ್ಳುವ ಮೂಲಕ ಸಾವಿನ ದವಡೆಯಿಂದ ಪಾರಾಗಬಹುದು.

ಮೊದಲಾಗಿ ಹೃದಯಾಘಾತದ ಲಕ್ಷಣಗಳನ್ನು ನೀವು ತಿಳಿದುಕೊಳ್ಳಲೇಬೇಕು.

1. ಎದೆಯಲ್ಲಿ ಅಸ್ವಸ್ಥತೆಯ ಅನುಭವ
ಎದೆಯ ಮಧ್ಯ ಭಾಗದಲ್ಲಿ ಭಾರವಾದ ಅನುಭವ, ಒತ್ತಡ,ನೋವು ಹಾಗೂ ಕಿವುಚಿದಂತಹ ಅನುಭವವಾಗುತ್ತದೆ. ಈ ರೀತಿ ಹಲವಾರು ನಿಮಿಷಗಳ ತನಕ ಆಗಿಮತ್ತೆ ಸಹಜ ಸ್ಥಿತಿಗೆ ಬಂದರೂನಂತರ ಮತ್ತೊಮ್ಮೆ ಇಂತಹ ಅನುಭವವಾಗಬಹುದು.
* ಹಲವರು ಎಡ ಭುಜ, ಬೆನ್ನು, ಕುತ್ತಿಗೆ, ದವಡೆ, ಕೈ ಹಾಗೂ ಹೊಟ್ಟೆಯಲ್ಲಿ ನೋವನ್ನನುಭವಿಸಬಹುದು.
* ಕೆಲವರಿಗೆ ಉಸಿರಾಟದ ತೊಂದರೆ ಎದುರಾಗಬಹುದು, ಅತಿಯಾಗಿ ಬೆವರಬಹುದು, ಎದೆಯಲ್ಲಿ ಏನೋ ಗಟ್ಡಿಯಾಗಿ ಹಿಡಿದಂತಹ ಅನುಭವವಾಗಬಹುದು.
* ಎದೆ ಬಡಿತ ಹೆಚ್ಚಾಗಬಹುದು ಯಾ ಎದೆ ಅನಿಯಂತ್ರಿತವಾಗಿ ಹೊಡೆದುಕೊಳ್ಳಬಹುದು.

ಮಹಿಳೆಯರಲ್ಲಿ ಹೃದಯಾಘಾತಕ್ಕಿಂತ ಮೊದಲು ಕೆಲವರು ಬೆನ್ನಿನ ಮೇಲ್ಭಾಗದಲ್ಲಿ, ದವಡೆಯಲ್ಲಿ ನೋವನ್ನನುಭವಿಸಬಹದು, ಅವರಿಗೆ ಬೇಗನೇ ದಣಿವಾಗಬಹುದು ಯಾ ನಿದ್ದೆ ಮಾಡಲು ತೊಂದರೆಯಾಗಬಹುದು.

ಹೃದಯಾಘಾತದ ಚಿಹ್ನೆಗಳನ್ನು ಯವತ್ತೂ ನಿರ್ಲಕ್ಷ್ಯಿಸಬೇಡಿ

ಮೇಲೆ ತಿಳಿಸಿದ ಯಾವುದಾದರೂ ತೊಂದರೆಯ ಅನುಭವ ನಿಮಗಾಗಿದ್ದಲ್ಲಿ ಚಿಕಿತ್ಸೆ ಪಡೆಯಲು ತಡಮಾಡಬೇಡಿ. ಇಲ್ಲದೇ ಹೋದಲ್ಲಿ ನಿಮ್ಮ ಹೃದಯಕ್ಕಾದ ಹಾನಿಯನ್ನು ಸರಿಪಡಿಸಲು ಅಸಾಧ್ಯವಾಗಬಹುದು.

1. ಮೊತ್ತಮೊದಲಾಗಿ ಒಂದು ಆಂಬ್ಯುಲೆನ್ಸಿಗೆ ಕರೆ ಮಾಡಿ

2. ನೀವು ಒಬ್ಬರೇ ಇದ್ದರೆ, ನಿಮ್ಮ ನೆರೆಮನೆಯವರನ್ನು ಯಾ ಹತ್ತಿರದಲ್ಲೇ ವಾಸಿಸುವ ಸಂಬಂಧಿಕರಿಗೆ ಕೂಡಲೇ ತಿಳಿಸಿ.
3. 325 ಎಂಜಿ ಡೋಸ್ ಆಸ್ಪಿರಿನ್ ಅನ್ನು ಬಾಯಿಗೆ ಹಾಕಿ.ಇದು ಹೃದಯಾಘಾತದ ಲಕ್ಷಣ ಕಾಣಿಸಿಕೊಂಡ ಮೊದಲ 30 ನಿಮಿಷಗಳಲ್ಲಿ ಬಹಳಷ್ಟು ಉಪಯುಕ್ತ.
4.ವಾಹನ ಅಥವಾ ಯಾವುದೇ ಯಂತ್ರ ಚಲಾಯಿಸಲು ಯತ್ನಿಸಬೇಡಿ.
5.ಶಾಂತವಾಗಿರಿ. ನಿಮಗೆ ಹೃದಯಾಘಾತವಾಗಿದೆಯೆಂದು ಗೊತ್ತಾದರೂ ಆಘಾತಗೊಳ್ಳಬೇಡಿ. ಇದು ನಿಮ್ಮ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಬಹುದು.

6.ಹಾಸಿಗೆಯಲ್ಲಿ ಮಲಗಿ. ನಿಮ್ಮ ಕಾಲುಗಳನ್ನು ಮೇಲೆತ್ತಿ ಆರಾಮವಾಗಿ ಮಲಗಲು ಯತ್ನಿಸಿ. ಹೀಗೆ ಮಾಡುವುದರಿಂದ ಅತ್ಯಗತ್ಯ ಆಮ್ಲಜನಕ ನಿಮ್ಮ ರಕ್ತಕ್ಕೆ ಪೂರೈಕೆಯಾಗುತ್ತದೆ.
7. ನಿಧಾನವಾಗಿ ಉಸಿರಾಡಿ: ಹೃದಯಾಘಾತವಾದಾಗ ಸಹಜವಾಗಿ ರೋಗಿ ಏದುಸಿರು ಬಿಡಬಹುದು. ಆಧರೆ ನಿಧಾನವಾಗಿ ಉಸಿರಾಟ ಮಾಡಿದರೆ ಅದು ರಕ್ತಕ್ಕೆ ಆಮ್ಲಜನಕ ಸರಬರಾಜು ಮಾಡಲು ಸಹಕಾರಿ.
8. ಯಾವತ್ತೂ ಕೆಮ್ಮಲು ಯತ್ನಿಸಬೇಡಿ: ಒಂದು ವಿಧದಲ್ಲಿ ಕೆಮ್ಮಿದರೆ ಹೃದಯಾಘಾತದಿಂದ ನಮ್ಮನ್ನು ರಕ್ಷಿಸಿಕೊಳ್ಳಬಹುದೆಂದು ಕೆಲವರು ಹೇಳುತ್ತಾರೆ. ಆದರೆ ಸಿಪಿಆರ್ ತಂತ್ರದ ಮೂಲಕ ಕೆಮ್ಮಿದರೆ ಅದು ಸಮಸೆ್ಯಯನ್ನು ಮತ್ತಷ್ಟು ಉಲ್ಬಣಗೊಳಿಸಬಹುದು.

9. ಏನನ್ನೂ ತಿನ್ನಲು, ಕುಡಿಯಲು ಪ್ರಯತ್ನಿಸಬೇಡಿ

ಹೃದಯಾಘಾತವಾದ ಸಂದರ್ಭ ಆಹಾರ ಯಾ ಪಾನೀಯ ಸೇವನೆ ನಿಲ್ಲಿಸಬೇಕು. ಆ ಸಂದರ್ಭ ಆಸ್ಪಿರಿನ್ ಅಲ್ಲದೆ ಬೇರೇನನ್ನೂ ಸೇವಿಸಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News