ಎಂಎನ್‌ಎಸ್‌ನ್ನು ಟೀಕಿಸಿದ ಕಾಟ್ಜು

Update: 2016-09-25 18:52 GMT

ಹೊಸದಿಲ್ಲಿ, ಸೆ.25: ಭಾರತಕ್ಕೆ ಭೇಟಿಯಾಗಲು ಉದ್ದೇಶಿಸಿರುವ ಪಾಕಿಸ್ತಾನ ಕಲಾವಿದರಿಗೆ ಬೆದರಿಕೆ ಹಾಕಿದ ರಾಜ್ ಠಾಕ್ರೆ ನೇತೃತ್ವದ ಎಂಎನ್‌ಎಸ್‌ಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಛೀಮಾರಿ ಹಾಕಿದ್ದಾರೆ. ಕಾಟ್ಜುರವರು ತಮ್ಮ ಫೇಸ್‌ಬುಕ್‌ನಲ್ಲಿ ಪಾಕಿಸ್ತಾನದ ಕಲಾವಿದರಿಗೆ ಬೆದರಿಕೆ ಹಾಕಿದವರು. ದೇಶಕ್ಕೆ ಅಗೌರವ ತಂದಿದ್ದಾರೆ. ಮುಂಬೈನಲ್ಲಿ ಬಿಹಾರಿ ಹಾಗೂ ಉತ್ತರ ಪ್ರದೇಶದವರಿಗೆ ಬೆದರಿಕೆ ಹಾಕಿದ್ದರು. ಕೇವಲ ವೋಟ್‌ಬ್ಯಾಂಕ್ ಸೃಷ್ಟಿಸುವ ಸಲುವಾಗಿ ಈ ಹುನ್ನಾರ ಎಸಗಿರುವುದರಿಂದ ಪಾಕಿಸ್ತಾನದ ಕಲಾವಿದ ಫವಾದ್ ಖಾನ್‌ರವರಂತವರು ದೇಶ ಬಿಡಬೇಕೆಂದು ಎಂಎನ್‌ಎಸ್ ತಿಳಿಸಿದ್ದರು.
ಮಹಿರಾ ಖಾನ್ ಹಾಗೂ ಫವಾದ್ ಖಾನ್ ಭಾರತೀಯ ಕಲಾವಿದರ ಅವಕಾಶಗಳನ್ನು ಅಪಹರಿಸುತ್ತಿದ್ದಾರೆಂದು ರಾಜ್ ಠಾಕ್ರೆಯವರ ಪತ್ನಿ ಶಾಲಿನಿ ಠಾಕ್ರೆ ಪತ್ರಿಕಾಗೋಷ್ಠಿಯಲ್ಲಿ ದೂರಿದ್ದರು. ಇವರನ್ನು ದೇಶ ಬಿಡುವಂತೆ ಸೂಚಿಸಬೇಕು ಎಂದು ಆಗ್ರಹಿಸಿದ್ದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News