ಶೌಚಾಲಯ ಕಟ್ಟಿಸಲು ಮಂಗಳಸೂತ್ರ ಮಾರಿದ ಮಹಿಳೆ...!

Update: 2016-10-14 07:06 GMT

ಕಾನ್ಪುರ, ಅ.14: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಅಭಿಯಾನದಿಂದ  ಪ್ರೇರಿತ ಮಹಿಳೆಯೊಬ್ಬಳು ತನ್ನ ಮಾಂಗಲ್ಯವನ್ನು ಮರಿದ ಘಟನೆ ಕಾನ್ಪುರದ ವಿಧ್ನು ಗ್ರಾಮದಲ್ಲಿ ನಡೆದಿದೆ.ಲತಾ ದಿವಾಕರ್‌  ಶೌಚಾಲಯ ಕಟ್ಟಿಸಲು ಮಾಂಗಲ್ಯವನ್ನು 17,000 ರೂ.ಗಳಿಗೆ ಮಾರಾಟ ಮಾಡಿರುವ ಮಹಿಳೆ.
ಮಹಿಳೆ ಲತಾ ಶೌಚಾಲಯ ಕಟ್ಟಿಸಲು ತನ್ನ ಪತಿ  ದಿವಾಕರ್‌ಗೆ ಹೇಳಿದ್ದಾರೆ. ಇವರ ನಡುವೆ ಈ ವಿಚಾರಕ್ಕೆ ಸಂಬಂಧಿಸಿ ಜಗಳವಾಗಿದೆ. ಆದರೆ  ಇದರಿಂದಾಗಿ ತನ್ನ ನಿರ್ಧಾರದಿಂದ ಹಿಂದೆ ಸರಿಯದ ಲತಾ  ಶೌಚಾಲಯ ಕಟ್ಟಿಸಲು ತನ್ನ ಮಾಂಗಲ್ಯವನ್ನೇ  17,000 ರೂ.ಗಳಿಗೆ ಮಾರಾಟ ಮಾಡಿದ್ದಾರೆ. 
ಶೌಚಾಲಯ ನಿರ್ಮಿಸುವುದಕ್ಕಿಂತ ಮಗಳ ಮದುವೆ ಮಾಡುವುದು ಮುಖ್ಯ ಎನ್ನುವುದು ದಿವಾಕರ್‌ ನಿಲುವಾಗಿತ್ತು. ಆದರೆ ಲತಾ ಶೌಚಾಲಯ ನಿರ್ಮಿಸುವ ಯೋಜನೆ ಹೊಂದಿದ್ದರು. ಲತಾ ತನ್ನ ನಿರ್ಧಾರವನ್ನು ಬದಲಿಸಲಿಲ್ಲ  17,000 ರೂ.ಗಳಿಗೆ ತನ್ನ ಮಾಂಗಲ್ಯವನ್ನು ಮಾರಿದಳು. ಆದರೆ ಟಾಯ್ಲೆಟ್ ನಿರ್ಮಾಣಕ್ಕೆ ಮೊತ್ತ ಸಾಕಾಗಲಿಲ್ಲ. ಟಾಯ್ಲೆಟ್‌ ನಿರ್ಮಾಣಕ್ಕೆ 25,000 ರೂ.ಬೇಕಾಗಿತ್ತು. ಉಳಿದ ಹಣಕ್ಕಾಗಿ ಲತಾ ತನ್ನ ಮನೆಯಲ್ಲಿದ್ದ ದನದ ಕರುಗಳನ್ನು ಮಾರಿದ್ದಾರೆ. ಅಂತಿಮವಾಗಿ ಪತಿ ದಿವಾಕರ್‌ ಅವರು ಇದೀಗ ಪತ್ನಿಯ ಬೆಂಬಲಕ್ಕೆ ನಿಂತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News