×
Ad

ಮಹಾದಾಯಿ ಸಭೆಗೆ ಕೈಕೊಟ್ಟ ಗೋವಾದ ಸಿಎಂ ಪರ್ಸೆಕರ್‌; ಮೂರು ರಾಜ್ಯಗಳ ಮುಖ್ಯ ಮಂತ್ರಿಗಳ ಸಭೆ ರದ್ಧು

Update: 2016-10-19 23:22 IST

ಮುಂಬೈ, ಅ.19: ಮಹಾದಾಯಿ ಸಮಸ್ಯೆ ಪರಿಹಾರಕ್ಕೆ  ಅ.21ರಂದು ಮುಂಬೈನಲ್ಲಿ ಕರೆಯಲಾಗಿದ್ದ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಮಾಲೋಚನಾ ಸಭೆ ರದ್ದಾಗಿದೆ.

 ಗೋವಾ ಮುಖ್ಯ ಮಂತ್ರಿ  ಲಕ್ಷ್ಮೀಕಾಂತ್ ಪರ್ಸೆಕರ್‌ , ಮಹಾರಾಷ್ಟ್ರದ ಮುಖ್ಯ ಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಕರ್ನಾಟಕದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಈ ಸಭೆಯಲ್ಲಿ ಭಾಗವಹಿಸುವುದಾಗಿ ನಿರ್ಧಾರವಾಗಿತ್ತು. ಆದರೆ ಗೋವಾ ಮುಖ್ಯ ಮಂತ್ರಿ  ಲಕ್ಷ್ಮೀಕಾಂತ್ ಪರ್ಸೆಕರ್‌  ಸಭೆಗೆ ಆಗಮಿಸಲು ರಾಜಕೀಯ ಕಾರಣಕ್ಕಾಗಿ ಹಿಂದೇಟು ಹಾಕಿ ಇರುವ ಹಿನ್ನೆಲೆಯಲ್ಲಿ ಸಭೆ ರದ್ಧಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News