ನೋಟು ನಿಷೇಧ; 3 ರಿಂದ 5 ಲಕ್ಷ ಕೋಟಿ ರೂ. ಹಗರಣ : ರಾಮ್ದೇವ್
Update: 2016-12-16 10:07 GMT
ಹೊಸದಿಲ್ಲಿ, ಡಿ.16: ಪ್ರಧಾನ ಮಂತ್ರಿ ನರೇಂದ್ರ ಮೋದಿ ನ.8 ರಂದು ರಾತ್ರಿ ದಿಢೀರನೆ ಗರಿಷ್ಠ ಮುಖ ಬೆಲೆಯ ನೋಟು ನಿಷೇಧ ಮಾಡಿರುವುದಕ್ಕೆ ಅವರ ಆಪ್ತ ಬಾಬಾ ರಾಮ್ದೇವ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘‘ಪ್ರಧಾನಮಂತ್ರಿ ಅವರನ್ನು ಭ್ರಷ್ಟ ಬ್ಯಾಂಕ್ ಅಧಿಕಾರಿಗಳು ದಾರಿ ತಪ್ಪಿಸಿದ್ದಾರೆ. ನೋಟು ಅಮಾನ್ಯ ಕ್ರಮವು ದೇಶದ ಆರ್ಥಿಕತೆಯಲ್ಲಿ 3 ರಿಂದ 5 ಲಕ್ಷ ಕೋಟಿ ರೂ. ಹಗರಣಕ್ಕೆ ದಾರಿ ಮಾಡಿಕೊಟ್ಟಿದೆ’’ ಎಂದು ‘ದಿ ಕ್ವಿಂಟ್’ಗೆ ನೀಡಿರುವ ಸಂದರ್ಶನವೊಂದರಲ್ಲಿ ರಾಮ್ದೇವ್ ಹೇಳಿದ್ದಾರೆ.
‘ದೈನಿಕ್ ಭಾಸ್ಕರ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ ರಾಮ್ದೇವ್, ಯೋಜನೆಯ ಅನುಷ್ಠಾನ ಅತ್ಯಂತ ಕಳಪೆಯಾಗಿದೆ ಎಂದು ಹೇಳಿದ್ದಾರೆ.