ಉಗಾಂಡ ಮೂಲದ ಯುವತಿಯ ಕೊಲೆ

Update: 2017-02-02 05:38 GMT

ಬೆಂಗಳೂರು, ಫೆ.2:ಉಗಾಂಡ ಮೂಲದ ಯುವತಿಯೊಬ್ಬಳನ್ನು  ಚಾಕುವಿನಿಂದ  ಇರಿದು ಕೊಲೆಗೈದ ಘಟನೆ  ನಿನ್ನೆ ತಡರಾತ್ರಿ ಕೊತ್ತನೂರು ಪೊಲೀಸ್‌ ಠಾಣಾ ವ್ಯಾಪ್ತಿಯ ತಿಮ್ಮೇಗೌಡ ಲೇಔಟ್‌ನಲ್ಲಿ  ನಡೆದಿದೆ.
ನಕಯಾಕಿ ಪ್ಲೋರೆನ್ಸ್‌ ಕೊಲೆಯಾದ ಯುವತಿ. ಹಿಮಾಚಲ ಪ್ರದೇಶ ಮೂಲದ ಇಶಾನ್ ಕೊಲೆ ಆರೋಪಿ ಎಂದು ತಿಳಿದುಬಂದಿದೆ. ಈ ಸಂಬಂಧ ಇಶಾನ್‌ನನ್ನು ಪೊಲೀಸರು ಬಂಧಿಸಿದ್ದಾರೆ. 
ಹಿಮಾಚಲ ಪ್ರದೇಶದ ಇಶಾನ್ ಎಂ. ಟೆಕ್ ಪದವಿಧರನಾಗಿದ್ದು, ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದಿದ್ದ. ಯುವತಿ ಶಿಕ್ಷಣ ಪಡೆಯಲು ಬೆಂಗಳೂರಿಗೆ ಬಂದಿದ್ದಲು. ಕೆಲ ದಿನಗಳ ಹಿಂದೆ ಯುವತಿ ಪ್ಲೋರೆನ್ಸ್‌ ಮತ್ತು ಇಶಾನ್‌ಗೆ ಪರಿಚಯವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ  ಇಬ್ಬರೂ ಎಂ.ಜಿ,ರೋಡಿನಲ್ಲಿ  ಭೇಟಿಯಾಗಿದ್ದರು. ಬಳಿಕ ಇಶಾನ್‌ ಯುವತಿಯ ಮನೆಗೆ ತೆರಳಿದ್ದ  ಈ ವೇಳೆ ಹಣದ ವಿಚಾರದಲ್ಲಿ ಇವರ ನಡುವೆ ಜಗಳವಾಗಿದೆ. ಇಶಾನ್ ಯುವತಿಯನ್ನು ಕೊಲೆಗೈದು ಪರಾರಿಯಾಗಿದ್ದನು. ಪೊಲೀಸರು ಕಾರ್ಯಚರಣೆ ನಡೆಸಿ ಆರೋಪಿಯನ್ನು  ಬಂಧಿಸಿದ್ದಾರೆ.
ಇನ್ಸ್ ಪೆಕ್ಟರ‍್ ಮೇಲೆ ಹಲ್ಲೆ:   ಈ ಸಂಬಂಧ ತನಿಖೆ ನಡೆಸಲು ತೆರಳಿದ ಬಾಗಲೂರು ಪೊಲೀಸ್‌ ಠಾಣೆಯ ಇನ್ಸ್ ಪೆಕ್ಟರ‍್  ಅಂಜನಕುಮಾರ‍್ ಮೇಲೆ ಹಲ್ಲೆ ನಡೆದಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಓರ್ವನನ್ನು ವಶಕ್ಕೆ ಪಡೆಯಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News