ಉದ್ಧಟ ಸವಾರನನ್ನು ಬೈಕ್ ಜೊತೆಗೇ ಎಳೆದೊಯ್ದ ಕಾನ್ಪುರ ಪೊಲೀಸರು!

Update: 2017-03-09 11:16 GMT

 ಸಂಚಾರ ನಿಯಮಗಳನ್ನು ಉಲ್ಲಂಘಿಸಿದವರು ದಂಡ ಕಟ್ಟುವುದಿಲ್ಲ ಎಂದರೆ ಪೊಲೀಸರು ಕೇಸ್ ಜಡಿಯುತ್ತಾರೆ. ವಾಹನವನ್ನು ಠಾಣೆಗೆ ಎಳೆದೊಯ್ಯುತ್ತಾರೆ. ಚಾಲಕ ದಂಡ ಕಟ್ಟಿ ವಾಹನ ಬಿಡಿಸಿಕೊಳ್ಳಬೇಕು.

ಆದರೆ ಇಲ್ಲೊಬ್ಬ ಬೈಕ್ ಸವಾರನಿದ್ದಾನೆ,ನೋಡಿ...ಕಾನ್ಪುರದ ಬಡಾ ಚೌರಾಹಾ ಪ್ರದೇಶದಲ್ಲಿ ನೋ ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ನಿಲ್ಲಿಸಿಕೊಂಡು ಕುಳಿತಿದ್ದ್ದ ಈತ ಟ್ರಾಫಿಕ್ ಪೊಲೀಸರು ಬಂದು ಕೇಳಿದಾಗ ಉದ್ಧಟತನದಿಂದ ವರ್ತಿಸಿದ್ದ. ದಂಡವನ್ನೂ ಕಟ್ಟುವುದಿಲ್ಲ,ಬೈಕ್‌ನಿಂದ ಇಳಿಯುವುದೂ ಇಲ್ಲ...ಏನು ಬೇಕಾದೆರೂ ಮಾಡಿ ಎಂದು ಅವರಿಗೆ ಸವಾಲೆಸೆದಿದ್ದ.

 ತಕ್ಷಣ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ ಪೊಲೀಸರು ವಾಹನಗಳನ್ನು ಸಾಗಿಸುವ ‘ಟೈಗರ್ ’ನ್ನು ಕರೆಸಿ ಸವಾರನ ಸಹಿತ ಬೈಕ್‌ನ್ನು ಟೋ ಮಾಡಿ ಠಾಣೆಗೆ ಸಾಗಿಸಿದ್ದಾರೆ. ಈ ದೃಶ್ಯ ದಾರಿಯುದ್ದಕ್ಕೂ ಜನರಿಗೆ ಪುಕ್ಕಟೆ ಮನೋರಂಜನೆ ನೀಡಿದ್ದು ಸುಳ್ಳಲ್ಲ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News