ಕನ್ನಡಿಗರ ಕ್ಷಮೆ ಯಾಚಿಸಿದ ಕಟ್ಟಪ್ಪ

Update: 2017-04-21 07:16 GMT

 ಹೊಸದಿಲ್ಲಿ. ಎ.21:ಬಾಹುಬಲಿ ಚಿತ್ರದಲ್ಲಿ 'ಕಟ್ಟಪ್ಪ' ಪಾತ್ರ ವಹಸಿದ್ದ ತಮಿಳು ನಟ ಸತ್ಯರಾಜ್ ಇಂದು ಕನ್ನಡಿಗರಲ್ಲಿ ಕ್ಷಮೆ ಯಾಚಿಸಿದ್ದಾರೆ.

9 ವರ್ಷಗಳ ಹಿಂದೆ ಕಾವೇರಿ ಜಲ ವಿವಾದದ ಹಿನ್ನಲೆಯಲ್ಲಿ ಹೇಳಿಕೆ ನೀಡಿದ್ದ ಸತ್ಯರಾಜ್ "ಕನ್ನಡಿಗರಿಗೆ ನನ್ನಿಂದ ನೋವಾಗಿದ್ದರೆ ಕ್ಷಮೆ ಇರಲಿ'' ಎಂದು ಹೇಳಿದರು.

"ನಾನು ಕನ್ನಡ ವಿರೋಧಿ ಅಲ್ಲ. ನಾನು ಯಾವತ್ತೂ ಕನ್ನಡಿಗರ ವಿರುದ್ಧ ಅಲ್ಲ. ಬಾಹುಬಲಿ -2 ಚಿತ್ರದ ಬಿಡುಗಡೆಗೆ ಅವಕಾಶ ನೀಡಿ '' ಎಂದು ಸತ್ಯರಾಜ್ ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News