ತಮಿಳುನಾಡು ಬಂದ್‌ಗೆ ಉತ್ತಮ ಪ್ರತಿಕ್ರಿಯೆ

Update: 2017-04-25 05:06 GMT

ಚೆನ್ನೈ, ಎ.25: ರೈತರ ವಿವಿಧ ಬೇಡಿಕೆಗಳ ಆಗ್ರಹಿಸಿ ಮಂಗಳವಾರ  ವಿಪಕ್ಷ ಡಿಎಂಕೆ ಕರೆ ನೀಡಿದ ತಮಿಳುನಾಡು ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ರೈತರ ಸಾಲ ಮನ್ನಾ, ಬೆಳೆ ವಿಮೆ , ಪರಿಹಾರ  ಆಗ್ರಹಿಸಿ ನೀಡಲಾದ   ತಮಿಳುನಾಡು ಬಂದ್  ಕರೆಗೆ ಕಾಂಗ್ರೆಸ್ ,ಎಡಪಕ್ಷಗಳು, ಬಿಜೆಪಿ ಸೇರಿದಂತೆ  ವಿವಿಧ ಪಕ್ಷಗಳು  ಬೆಂಬಲ ವ್ಯಕ್ತಪಡಿಸಿವೆ.

ತಮಿಳುನಾಡಿನಾದ್ಯಂತ ಜನಜೀವನ ಅಸ್ತವ್ಯಸ್ಥಗೊಂಡಿದೆ. ರೈಲು, ಲಾರಿ, ಆಟೋ , ಖಾಸಗಿ ಬಸ್ ಗಳ ಓಡಾಟ ಸ್ಥಗಿಗೊಂಡಿದೆ.
 ಕೆಲವು ಸರಕಾರಿ ಬಸ್‌ ಗಳು ಓಡಾಟ ನಡೆಸುತ್ತಿದೆ. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ಔಷಧಿ ಅಂಗಡಿಗಳು ತೆರೆದಿಲ್ಲ, ಚಿತ್ರ ಮಂದಿರಗಳು ಎರಡು ಪ್ರದರ್ಶನವನ್ನು ಸ್ಥಗಿತಗೊಳಿಸಿವೆ. ಚಿತ್ರೀಕರಣ ಬಂದ್ ಮಾಡಿ ಚಿತ್ರೋದ್ಯಮ ಬೆಂಬಲ ವ್ಯಕ್ತಪಡಿಸಿದೆ.ಸರಕಾರಿ ಕಚೇರಿಗಳಲ್ಲಿ ಹಾಜರಾತಿ ಕಡಿಮೆ ಇದೆ.

ತಿರುವಾರೂರು ಬಸ್ ನಿಲ್ದಾಣದಲ್ಲಿ ರೈತರ  ಜತೆ ಪ್ರತಿಭಟನೆ ನಿರತ ಡಿಎಂಕೆ ಕಾರ್ಯಾಧ್ಯಕ್ಷ ಸ್ಟಾಲಿನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.ಮೆರವಣಿಗೆಗೆ ಯತ್ನಿಸಿದ ಐದು ಸಾವಿರ ಪ್ರತಿಭಟನೆಕಾರರನ್ನು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News