ಕೆ.ಪಿ.ನಂಜುಂಡಿಗೆ ತಪ್ಪಿದ ವಿಧಾನ ಪರಿಷತ್‌ ಸದಸ್ಯರಾಗುವ ಅವಕಾಶ

Update: 2017-04-25 06:10 GMT

ಬೆಂಗಳೂರು, ಎ.25: ವಿಧಾನ ಪರಿಷತ್ ಗೆ ಮೂವರ ಹೆಸರನ್ನು ರಾಜ್ಯ ಸರಕಾರ ಶಿಫಾರಸ್ಸು ಮಾಡಿದ್ದು, ಇದರಲ್ಲಿ ಕೆ.ಪಿ. ನಂಜುಂಡಿಯ ಹೆಸರನ್ನು ಕೈ ಬಿಡಲಾಗಿದೆ. .
ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರಿಗೆ ಸಲ್ಲಿಸಿರುವ ನಾಮನಿರ್ದೇಶನ ಪಟ್ಟಿಯಲ್ಲಿ ಪಿ.ಆರ‍್.ರಮೇಶ್‌, ಮೋಹನ್‌ ಕೊಂಡಜ್ಜಿ ಮತ್ತು ಸಿ.ಎಂ.ಲಿಂಗಪ್ಪ ಸ್ಥಾನ ಪಡೆದಿದ್ದಾರೆ. ಆದರೆ ಕೆ.ಪಿ. ನಂಜುಂಡಿಗೆ ಮತ್ತೊಮ್ಮೆ ಅವಕಾಶ ಕೈತಪ್ಪಿದೆ ಎಂದು ತಿಳಿದು ಬಂದಿದೆ
ಕೆ.ಪಿ. ನಂಜುಂಡಿಗೆ ವಿಧಾನಪರಿಷತ್ ಸದಸ್ಯರಾಗಿ ನೇಮಕಗೊಳ್ಳುವ ಅವಕಾಶ ಮೂರನೇ ಬಾರಿ ಕೈ ತಪ್ಪಿದೆ. ಆಸ್ಕರ್ ಫೆರ್ನಾಂಡಿಸ್‌ ವಿರೋಧದ ಹಿನ್ನೆಲೆಯಲ್ಲಿ ಅವರ ಹೆಸರನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯ ಕೈ ಬಿಟ್ಟಿದ್ದಾರೆ ಎಂದು  ಮೂಲಗಳು ತಿಳಿಸಿವೆ. 
,,,,,,,,,,,,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News