ಐಎಎಸ್ ಅಧಿಕಾರಿ ತಿವಾರಿ ನಿಗೂಢ ಸಾವು ಪ್ರಕರಣ; ತನಿಖೆಗೆ ಎಸ್ಐಟಿ ತಂಡ ಆಗಮನ
Update: 2017-06-01 10:17 IST
ಬೆಂಗಳೂರು, ಜೂ.1: ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ನಿಗೂಢವಾಗಿ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶದ ಎಸ್ಐಟಿ ತಂಡ ಇಂದು ಬೆಂಗಳೂರಿಗೆ ಆಗಮಿಸಿದೆ.
ಅನುರಾಗ್ ತಿವಾರಿ ಅವರ ಸಹೋದರ ಮಯಾಂಕ್ ತಿವಾರಿ ಅವರನ್ನು ಜತೆಗೆ ಕರೆ ತಂದಿರುವ ಎಸ್ಐಟಿ ತಂಡ ಅವರ ಸಮ್ಮುಖದಲ್ಲಿ ತಿವಾರಿ ಮನೆ ಮತ್ತು ಕಚೇರಿಯ ಪರಿಶೀಲನೆ ನಡೆಸಿದೆ. ಈಗಾಗಲೇ ಪ್ರಕರಣ ಸಿಬಿಐಗೆ ವರ್ಗಾವಣೆಯಾಗಿದ್ದರೂ, ಎಸ್ಐಟಿ ಅಧಕಾರಿಗಳು ತನಿಖೆ ಮುಂದುವರಿಸಿದ್ದಾರೆ.