ಗೋರಕ್ಷಕರ ವಿರುದ್ಧ ಕಠಿಣ ಕ್ರಮ: ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್

Update: 2017-06-15 16:53 GMT

ಹೊಸದಿಲ್ಲಿ, ಜೂ.15: ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರದಲ್ಲಿ ತೊಡಗುವ ಗೋರಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

“ಗೋರಕ್ಷಣೆ ನಮ್ಮ ನಿರ್ದೇಶನ ತತ್ವಗಳ ಭಾಗ ಎನ್ನುವುದನ್ನು ಮರೆಯುವುದಿಲ್ಲ. ಹಾಗೆಯೇ, ಯಾರೊಬ್ಬರ ಆಹಾರಪದ್ಧತಿಯ ಮೇಲೆ ನಿಯಂತ್ರಣ ಹೇರುವುದಿಲ್ಲ. ದೇಶದ ಬಹುಸಂಖ್ಯಾತ ವರ್ಗ ಗೋವನ್ನು ಗೌರವಿಸುತ್ತದೆ ಎನ್ನುವುದೂ ವಾಸ್ತವ. ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟು ಸರಕಾರ ಕ್ರಮ ಕೈಗೊಳ್ಳಲಿದೆ” ಎಂದರು. 

ಇದೇ ಸಂದರ್ಭ ಗೋರಕ್ಷಕರ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಗೋರಕ್ಷಣೆ ಹೆಸರಿನಲ್ಲಿ ನಡೆಯುವ ಹಿಂಸಾಚಾರದ ವಿರುದ್ಧ ಪ್ರಧಾನಿ ಮೋದಿಯವರೂ ಮಾತನಾಡಿದ್ದಾರೆ. ಕಾನೂನು ಪಾಲಿಸದೆ ಹಿಂಸಾಚಾರ ನಡೆಸುವ ಗೋರಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News