ಕ್ಯಾಲಿಕಟ್: ಶಾಲಾ ಆವರಣದಲ್ಲೇ ವಿದ್ಯಾರ್ಥಿಯ ಕಗ್ಗೊಲೆ

Update: 2017-07-14 11:18 GMT

ಕಲ್ಲಿಕೋಟೆ,ಜು.14: ಕುಂದಮಂಗಲಂನಲ್ಲಿ ಒಂಬತ್ತನೆ ತರಗತಿ ವಿದ್ಯಾರ್ಥಿಯನ್ನು ತಿವಿದು ಕೊಲೆಗೈಯ್ಯಲಾಗಿದೆ. ವಯನಾಡ್ ನಿವಾಸಿಯಾದ ಮಡವೂರ್ ಸಿ.ಎಂ.ಸ್ಕೂಲ್ ವಿದ್ಯಾರ್ಥಿ ಅಬ್ದುಲ್ ಮಜೀದ್(13) ಕೊಲೆಗೀಡಾದ ವಿದ್ಯಾರ್ಥಿಯಾಗಿದ್ದಾನೆ.

ಕಾಸರಗೋಡಿನ ಶಂಸುದ್ದೀನ್ ಎಂಬಾತ ಬಾಲಕನಿಗೆ ಇರಿದಿದ್ದಾನೆ. ಈತ ಮಾನಸಿಕ ರೋಗಿ ಎಂದು ಪೊಲೀಸರು ತಿಳಿಸಿದ್ದಾರೆ. ಶಾಲೆಯ ಬಳಿ ಘಟನೆ ನಡೆದಿದೆ. ತರಗತಿಯ ಮಧ್ಯಾಂತರ ವಿರಾಮದ ವೇಳೆ ಶಾಲೆಯ ಪರಿಸರದಲ್ಲಿ ನಿಂತಿದ್ದ ವಿದ್ಯಾರ್ಥಿಯನ್ನು ಈತ ತಿವಿದಿದ್ದಾನೆ.

ಘಟನೆಯನ್ನು ನೋಡಿದ ಇತರ ಮಕ್ಕಳು ಬೊಬ್ಬೆಹೊಡೆದಾಗ ಜನರು ಓಡಿ ಬಂದಿದ್ದಾರೆ. ಬಾಲಕನನ್ನು ಕೂಡಲೇ ಕ್ಯಾಲಿಕಟ್ ಮೆಡಿಕಲ್‍ಕಾಲೇಜು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಆತ ಕೊನೆಯುಸಿರೆಳೆದಿದ್ದಾನೆ.

ಬಾಲಕನಿಗೆ ತಿವಿದು ಓಡಿ ಹೋದ ಆರೋಪಿಯನ್ನು ಊರವರು ಹಿಂಬಾಲಿಸಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮೃತ ಬಾಲಕನ ಪಾರ್ಥಿವ ಶರೀರ ಕ್ಯಾಲಿಕಟ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News