ಕೋಟ್ಟಯಂನಲ್ಲಿ ಆರೆಸ್ಸೆಸ್ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ

Update: 2017-07-31 07:40 GMT

ಕೋಟ್ಟಯಂ,ಜು.31: ತಿರುವನಂತಪುರಂನಲ್ಲಿ ಶನಿವಾರ ಆರೆಸ್ಸೆಸ್ ಕಾರ್ಯಕರ್ತನ ಕೊಲೆ ನಡೆದ ನಂತರ ಕೇರಳದಲ್ಲಿ ವ್ಯಾಪಕ ಅಹಿತಕರ ಘಟನೆಗಳು ನಡೆದಿದ್ದು, ಇಂದು ಕೂಡಾ ಮುಂದುವರಿದಿದೆ. ರವಿವಾರ ಮಧ್ಯ ರಾತ್ರಿ   ಕೋಟ್ಟಯಂ ತಿರುನಕ್ಕರೆಯ ಆರೆಸ್ಸೆಸ್ ಕಾರ್ಯಾಲಯಕ್ಕೆ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಕಮ್ಯುನಿಸ್ಟ್ ಕಾರ್ಯಕರ್ತರು ಈ ಕೃತ್ಯವೆಸಗಿದ್ದಾರೆಂದು ಬಿಜೆಪಿ ಆರೋಪಿಸಿದೆ.

  ಆರೆಸ್ಸೆಸ್ ಕಚೇರಿಗೆ ಬಾಂಬೆಸತವಾದ ಬಳಿಕ ಬೆಳಗ್ಗೆ ಮೂರು ಗಂಟೆಗೆ ಈ ಕಚೇರಿಯ ಸಮೀಪದಲ್ಲಿರುವ ಸಿಐಟಿಯು, ಡಿವೈಎಫ್‌ಐ ಕಚೇರಿಗಳಿಗೂ ದುಷ್ಕರ್ಮಿಗಳು ಕಲ್ಲೆಸೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News