ಜೆಡಿಯು ಚಿಹ್ನೆ: ಚುನಾವಣಾ ಆಯೋಗಕ್ಕೆ ಶರದ್ ಯಾದವ್ ಮತ್ತೆ ಅರ್ಜಿ

Update: 2017-09-14 15:19 GMT

ಹೊಸದಿಲ್ಲಿ, ಸೆ.14: ಪಕ್ಷದ ಅಧಿಕೃತ ಚಿಹ್ನೆಯನ್ನು ತಮಗೆ ನೀಡಬೇಕೆಂದು ಒತ್ತಾಯಿಸಿ ಶರದ್ ಯಾದವ್ ನೇತೃತ್ವದ ಜೆಡಿಯು ಬಣ ಚುನಾವಣಾ ಆಯೋಗಕ್ಕೆ ಹೊಸದಾಗಿ ಅರ್ಜಿ ಸಲ್ಲಿಸಿದ್ದು ಇದಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಒದಗಿಸಲು 2 ವಾರದ ಕಾಲಾವಕಾಶ ನೀಡುವಂತೆ ಕೋರಿದೆ.

ಪೂರಕ ದಾಖಲೆಪತ್ರ ಲಗತ್ತಿಸದ ಕಾರಣ ಶರದ್ ಬಣ ಈ ಹಿಂದೆ ಸಲ್ಲಿಸಿದ್ದ ಕೋರಿಕೆಯನ್ನು ಆಯೋಗ ತಳ್ಳಿಹಾಕಿತ್ತು. ಸೆ.17ರಂದು ದಿಲ್ಲಿಯಲ್ಲಿ ಶರದ್ ಬಣದ ರಾಷ್ಟ್ರೀಯ ಪದಾಧಿಕಾರಿಗಳ ಸಭೆ ನಡೆಯಲಿದ್ದು ಸಭೆಯಲ್ಲಿ ಶರದ್ ಬಣದ ಶಕ್ತಿಪ್ರದರ್ಶನ ವಾಗಲಿದೆ. ಅಲ್ಲದೆ ಅಕ್ಟೋಬರ್ 8ರಂದು ರಾಷ್ಟ್ರೀಯ ಸಮಿತಿ ಸಭೆ ನಡೆಯಲಿದೆ ಎಂದು ಶರದ್ ಯಾದವ್ ನಿಕಟವರ್ತಿ ಅರುಣ್‌ಕುಮಾರ್ ಶ್ರೀವಾಸ್ತವ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News