ತಮಿಳುನಾಡಿನ ಮೀನುಗಾರರನ್ನು ಬಂಧಿಸಿದ ಲಂಕಾ ನೌಕಾಪಡೆ
Update: 2017-10-17 12:01 GMT
ಕೊಲಂಬೊ, ಅ.17: ಶ್ರೀಲಂಕಾದ ಸಮುದ್ರ ಸರಹದ್ದನ್ನು ಪ್ರವೇಶಿಸಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಶ್ರೀಲಂಕಾದ ನೌಕಾಪಡೆಯು ತಮಿಳುನಾಡಿನ ಎಂಟು ಮೀನುಗಾರರನ್ನು ಬಂಧಿಸಿದೆ.
ತಲೈಮನ್ನಾರ್ ಬಳಿ ಈ ಮೀನುಗಾರರು ಮೀನುಗಾರಿಕೆ ನಡೆಸುತ್ತಿದ್ದರು ಎಂದು ಆರೋಪಿಸಿರುವ ಲಂಕಾ ನೌಕಾಪಡೆ, ಇವರನ್ನು ಬಂಧಿಸಿ ತಲೈಮನ್ನಾರ್ ನೌಕಾ ಶಿಬಿರಕ್ಕೆ ಕರೆದೊಯ್ದಿದೆ. ಅಲ್ಲದೆ ಮೀನುಗಾರಿಕೆಗೆ ಬಳಸಲಾಗುತ್ತಿದ್ದ ದೋಣಿಯನ್ನೂ ವಶಕ್ಕೆ ಪಡೆದಿದೆ ಎಂದು ವರದಿಯಾಗಿದೆ. ಇವರೆಲ್ಲಾ ರಾಮೇಶ್ವರಂನ ತಂಗಚಿಮದಮ್ ಪ್ರದೇಶದ ನಿವಾಸಿಗಳು ಎನ್ನಲಾಗಿದೆ. ಘಟನೆಯ ಬಗ್ಗೆ ಕೇಂದ್ರ ಸರಕಾರದೊಡನೆ ಮಾತುಕತೆ ನಡೆಸಿ ಬಂಧಿತರ ಬಿಡುಗಡೆಗೆ ಸೂಕ್ತ ಪ್ರಯತ್ನ ನಡೆಸಲಾಗುವುದು ಎಂದು ತಮಿಳುನಾಡಿನ ಮಾಹಿತಿ ತಂತ್ರಜ್ಞಾನ ಸಚಿವ ಎಂ.ಮಣಿಕಂಠನ್ ತಿಳಿಸಿದ್ದಾರೆ.