ಮಾದಕವಸ್ತು ಸೇವನೆಯ ಚಟ ಹೊಂದಿದ್ದ ಪುತ್ರನ ಕೊಲೆಗೈದು ಆತ್ಮಹತ್ಯೆಗೆ ಶರಣಾದ ತಂದೆ

Update: 2017-10-19 07:58 GMT
ಪವನನ್                       ಮನೋಜ್

ಪರವೂರ್(ಕೇರಳ), ಅ.19: ಮಾದಕವಸ್ತು ಸೇವನೆಯ ಚಟಕ್ಕೆ ದಾಸನಾದ ಪುತ್ರನ ಕತ್ತು ಕೊಯ್ದ ತಂದೆಯೊಬ್ಬ ನೇಣುಹಾಕಿಕೊಂಡು ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪರವೂರಿನ ಚಿಟ್ಟಾಟ್ಟುಕರ ಎಂಬಲ್ಲಿ ನಡೆದಿದೆ.

ಪರವೂರಿನ ಚಿಟ್ಟಾಟ್ಟುಕರ ಎಂಬಲ್ಲಿನ ನಿವಾಸಿ ಕೆ.ಆರ್. ಪವನನ್(58) ಎಂಬವರು ತಮ್ಮ ಪುತ್ರ ಮನೋಜ್(26) ಎಂಬಾತನ ಕತ್ತು ಕೊಯ್ದು ಕೊಲೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಮಾದಕವಸ್ತು ಸೇವನೆಯ ಚಟಕ್ಕೆ ದಾಸನಾಗಿದ್ದ ಪುತ್ರನ ಬದುಕು ಹಾಗು ಆತ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ತಾನು ಈ ಕೃತ್ಯ ಎಸಗುತ್ತಿರುವುದಾಗಿ ಪವನನ್ ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾರೆ. 

ಸೇನೆಯಲ್ಲಿದ್ದ ಪವನನ್ ನಿವೃತ್ತಿಯ ಬಳಿಕ ಪರವೂರ್ ತಾಲೂಕು ಕಚೇರಿಯಲ್ಲಿ 15 ವರ್ಷ ಸೇವೆ ಸಲ್ಲಿಸಿದ್ದರು. ಪವನನ್‍ರ ಪತ್ನಿ ಸರಕಾರಿ ಶಾಲೆಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು. ಅವರು ತಮ್ಮ ಮತ್ತೋರ್ವ ಪುತ್ರನೊಂದಿಗೆ ಆಲುವದ ಸಂಬಂಧಿಕರ ಮನೆಗೆ ಹೋಗಿದ್ದಾಗ ಘಟನೆ ನಡೆದಿತ್ತು.

ಬೆಳಗ್ಗೆ ಲತಿಕಾ ಫೋನ್ ಮಾಡಿದ್ದರೂ ಪವನನ್ ಕರೆ ಸ್ವೀಕರಿಸಿರಲಿಲ್ಲ. ನಂತರ ಗಾಬರಿಗೊಂಡ ಅವರು ಪವನನ್‍ರ ಸಹೋದರ ವಿನಯನ್‍ರಿಗೆ  ವಿಷಯ ತಿಳಿಸಿದ್ದರು. ಅವರು ಮನೆಗೆ ಬಂದು ನೋಡಿದಾಗ ತಂದೆ ಹಾಗು ಪುತ್ರ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ವಡಕ್ಕೇಕರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News