ಭಾರತ ಪ್ರವಾಸಕ್ಕೆ ಮೆಂಡಿಸ್, ಸಿಲ್ವ ಇಲ್ಲ

Update: 2017-11-05 18:32 GMT

ಕೊಲಂಬೊ, ನ.5: ಭಾರತ ಪ್ರವಾಸ ಕೈಗೊಳ್ಳಲಿರುವ ಶ್ರೀಲಂಕಾ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದ್ದು, ಫಾರ್ಮ್ ಕಳೆದುಕೊಂಡಿರುವ ಕುಶಾಲ್ ಮೆಂಡಿಸ್ ಮತ್ತು ಕೌಶಾಲ್ ಸಿಲ್ವ ಅವರನ್ನು ತಂಡದಿಂದ ಕೈ ಬಿಡಲಾಗಿದೆ.

ಭಾರತ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳ ಸರಣಿಗೆ 15 ಮಂದಿ ಆಟಗಾರರ ತಂಡವನ್ನು ಆಯ್ಕೆ ಮಾಡಲಾಗಿದೆ. ಆಲ್‌ರೌಂಡರ್ ದಾಸುನ್ ಶನಕಾ ಮತ್ತು ಧನಂಜ ಡಿ ಸಿಲ್ವ ತಂಡಕ್ಕೆ ವಾಪಸಾಗಿದ್ದಾರೆ.

ದಿನೇಶ್ ಚಾಂಡಿಮಾಲ್ ನಾಯಕತ್ವದ ತಂಡದಲ್ಲಿ ಮಾಜಿ ನಾಯಕ ಹಾಗೂ ಆಲ್‌ರೌಂಡರ್ ಆ್ಯಂಜೆಲೊ ಮ್ಯಾಥ್ಯೂಸ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅವರು ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದಾರೆ.

ಕಳೆದ ತವರಿನ ಸರಣಿಯಲ್ಲಿ ಭಾರತದ ವಿರುದ್ಧ ಶ್ರೀಲಂಕಾ ತಂಂಡ ಎಲ್ಲ 9 ಪಂದ್ಯಗಳಲ್ಲೂ ಸೋಲು ಅನುಭವಿಸಿತ್ತು. ಮೂರು ಟೆಸ್ಟ್, 5 ಏಕದಿನ ಮತ್ತು ಏಕೈಕ ಟ್ವೆಂಟಿ-20 ಪಂದ್ಯದಲ್ಲಿ ಭಾರತ ಕ್ಲೀನ್ ಸ್ವೀಪ್ ಸಾಧಿಸಿತ್ತು. ಶ್ರೀಲಂಕಾ-ಭಾರತ ಮೊದಲ ಟೆಸ್ಟ್ ಕೋಲ್ಕತಾದಲ್ಲಿ ನ.16ರಿಂದ 20ರ ತನಕ ನಡೆಯಲಿದೆ. ಎರಡನೆ ಟೆಸ್ಟ್ ನಾಗ್ಪುರದಲ್ಲಿ ನ.24ರಿಂದ 28ರ ತನಕ ಮತ್ತು ಮೂರನೆ ಟೆಸ್ಟ್ ಡಿ.2ರಿಂದ 6ರ ತನಕ ಹೊಸದಿಲ್ಲಿಯಲ್ಲಿ ನಡೆಯಲಿದೆ.

ಶ್ರೀಲಂಕಾ ತಂಡ: ದಿನೇಶ್ ಚಾಂಡಿಮಾಲ್, ದಿಮಿತ್ ಕರುಣರತ್ನೆ, ಧನಂಜಯ ಡಿ ಸಿಲ್ವ, ಸಾದೀರ್ ಸಮರವಿಕ್ರಮ, ಆ್ಯಂಜೆಲೊ ಮ್ಯಾಥ್ಯೂಸ್, ಲಹಿರು ತಿರಿಮನ್ನೆ, ರಂಗನಾ ಹೆರಾತ್, ಸುರಂಗ ಲಕ್ಮಲ್, ದಿಲ್ರುವಾನ್ ಪೆರೆರಾ, ಲಹಿರು ಗಾಮಗೆ, ಲಕ್ಷನ್ ಸಂಡಕನ್, ವಿಶ್ವ ಫೆರ್ನಾಂಡೊ, ದಾಸುನ್ ಶನಕ, ನಿರೊಶಾನ್ ದಿಕ್ವೆಲ್ಲಾ, ರೋಶೆನ್ ಸಿಲ್ವಾ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News