ಏಳುಬೀಳುಗಳ ನಡುವೆ ಸರಿದು ಹೋದ 2017

Update: 2018-01-01 10:38 GMT

2017 ಭಾರತದ ಪಾಲಿಗೆ ಸಿಹಿಗಿಂತ ಕಹಿಯ ಅನುಭವವೇ ಅಧಿಕ ಎನ್ನುವಂತಿದೆ. ಹಲವೆಡೆ ಸಂಭವಿಸಿದ ಭೀಕರ ಪ್ರವಾಹ ಹಾಗೂ ವರ್ಷಾಂತ್ಯದ ವೇಳೆಗೆ ಅಪ್ಪಳಿಸಿದ ಓಖಿ ಚಂಡಮಾರುತ ನೂರಾರು ಮಂದಿಯನ್ನು ಬಲಿತೆಗೆದುಕೊಂಡಿದೆ. ಗೋರಖ್ ಪುರದಲ್ಲಿದ ಸರಕಾರ ಆಸ್ಪತ್ರೆಯಲ್ಲಿ 290ಕ್ಕೂ ಅಧಿಕ ಕಂದಮ್ಮಗಳು ಸಾವನ್ನಪ್ಪಿದ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತು. ಇತ್ತ ಆರ್ಥಿಕ ಕ್ಷೇತ್ರ ನಿರುತ್ಸಾಹದಾಯಕವಾಗಿತ್ತು. ಕಳೆದ ವರ್ಷದ ಅಂತ್ಯದಲ್ಲಿ ಜಾರಿಗೆ ಬಂದ ನೋಟು ನಿಷೇಧದ ಬಿಸಿ ಈ ವರ್ಷಾ ರಂಭದಲ್ಲಿ ಸ್ಪಷ್ಟವಾಗಿ ಗೋಚರಿಸಿತು. ದೇಶದ ಮೊದಲ ತ್ರೈಮಾಸಿಕದಲ್ಲಿ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಶೇ.5.7ಕುಸಿದು ಕಳವಳ ಮೂಡಿಸಿತು. ಜೂನ್‌ನಲ್ಲಿ ಜಾರಿಗೆ ಬಂದ ಜಿಎಸ್‌ಟಿ ಕೂಡಾ ಆರಂಭದಲ್ಲಿ ಆರ್ಥಿಕ ರಂಗದಲ್ಲಿ ಬಿಕ್ಕಟ್ಟನ್ನು ಸೃಷ್ಟಿಸಿತು. ಉತ್ತರಪ್ರದೇಶದಲ್ಲಿ 17 ವರ್ಷಗಳ ಬಳಿಕ ಬಿಜೆಪಿ ಸರಕಾರದ ಅಸ್ತಿತ್ವಕ್ಕೆ ಬಂದರೆ, ಹತ್ತು ವರ್ಷಗಳ ನಂತರ ಪಂಜಾಬ್‌ನಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಿತು. ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಸರಳ ಬಹುಮತದೊಂದಿಗೆ ಅಧಿಕಾರಕ್ಕೇರಿದರೂ, ಪ್ರತಿಪಕ್ಷ ಕಾಂಗ್ರೆಸ್ ಪ್ರಬಲವಾದ ಸ್ಪರ್ಧೆ ನೀಡುವ ಮೂಲಕ ಎಲ್ಲರ ಗಮನಸೆಳೆಯಿತು. ಈ ಮಧ್ಯೆ ಕೋಮುಹಿಂಸೆ, ದಲಿತರ ಮೇಲಿನ ದೌರ್ಜನ್ಯದ ಘಟನೆಗಳು ಈ ವರ್ಷವೂ ದೇಶವನ್ನು ಬಹುವಾಗಿ ಕಾಡಿದವು. ಸರಿದುಹೋದ ವರ್ಷದಲ್ಲಿ ಭಾರತ ಕಂಡ ಕೆಲವು ಮಹತ್ವದ ವಿದ್ಯಮಾನಗಳ ಸಂಕ್ಷಿಪ್ತ ಒಳನೋಟ ಇಲ್ಲಿದೆ...

ಮಂಕಾದ ಜಿಡಿಪಿ

 ಕಳೆದ ವರ್ಷದ ಅಂತ್ಯದ ವೇಳೆಗೆ ಜಾರಿಗೆ ಬಂದ ನೋಟು ನಿಷೇಧದ ದುಷ್ಪರಿಣಾಮ ಈ ವರ್ಷ ಸ್ಪಷ್ಟವಾಗಿ ಗೋಚರವಾಗಿತ್ತು. ಈ ವರ್ಷದ ಆರಂಭದ ತಿಂಗಳುಗಳಲ್ಲಿ ದೇಶದ ಉದ್ಯಮ ವಲಯ ತೀವ್ರ ಹಿನ್ನಡೆ ಕಂಡಿತ್ತು. ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ)ವು ಮೊದಲ ತ್ರೈಮಾಸಿಕದಲ್ಲಿ 5.7ಕ್ಕೆ ಕುಸಿದಿದೆ. ಆದರೆ ಎರಡನೆ ತ್ರೈಮಾಸಿಕದಲ್ಲಿ 6.3್ಕೆ ಏರಿ, ತುಸು ಚೇತರಿಕೆ ಕಂಡಿತು.

ಜಿಎಸ್‌ಟಿ: ಒಂದೇ ದೇಶ ಒಂದೇ ತೆರಿಗೆ 

ಸ್ವಾತಂತ್ರಾನಂತರದ ಭಾರತದ ಅತೀ ದೊಡ್ಡ ತೆರಿಗೆ ಸುಧಾರಣೆಯೆಂದು ಬಣ್ಣಿಸಲಾದ ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಗೆ ಜೂನ್ 30ರ ಮಧ್ಯರಾತ್ರಿಯಂದು ಸಂಸತ್ ಭವನದಲ್ಲಿ ನಡೆದ ವಿಶೇಷ ಅಧಿವೇಶನದಲ್ಲಿ ಚಾಲನೆ ನೀಡಲಾಯಿತು. ಒಂದೇ ದೇಶ, ಒಂದೇ ತೆರಿಗೆ ಎಂಬ ಘೋಷಣೆಯೊಂದಿಗೆ ಜಾರಿಗೆ ಬಂದ ಜಿಎಸ್‌ಟಿ ಈ ಮೊದಲು ಚಾಲ್ತಿಯಲ್ಲಿದ್ದ 16ಕ್ಕೂ ಅಧಿಕ ತೆರಿಗೆಗಳನ್ನು ರದ್ದುಪಡಿಸಿದೆ. ಆದರೆ ಪೆಟ್ರೋಲಿಯಂ ಸೇರಿದಂತೆ ಕೆಲವು ಉತ್ಪನ್ನಗಳನ್ನು ಜಿಎಸ್‌ಟಿಯಿಂದ ಹೊರಗಿಡಲಾಗಿದೆ. ಶೇ.5. ಶೇ.12, ಶೇ.18 ಹಾಗೂ ಶೇ.28 ಹೀಗೆ ನಾಲ್ಕು ಸ್ಲಾಬ್‌ಗಳಲ್ಲಿ ವಿವಿಧ ಉತ್ಪನ್ನಗಳು ಹಾಗೂ ಸೇವೆಗಳಿಗೆ ತೆರಿಗೆ ವಿಧಿಸಲಾಗಿದೆ.

ಇತಿಹಾಸ ನಿರ್ಮಿಸಿದ ಇಸ್ರೋ

ಇಸ್ರೋ ಈ ವರ್ಷ ಇನ್ನೊಂದು ಇತಿಹಾಸ ನಿರ್ಮಿಸಿದೆ. ಪಿಎಸ್‌ಎಲ್‌ವಿ ರಾಕೆಟ್ ಮೂಲಕ ಒಂದೇ ಬಾರಿಗೆ 104 ಉಪಗ್ರಹಗಳನ್ನು ಅಂತರಿಕ್ಷಕ್ಕೆ ಉಡಾವಣೆಗೊಳಿಸುವ ಮೂಲಕ ಅದು ವಿಶ್ವದಾಖಲೆ ಸ್ಥಾಪಿಸಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಲ್ಲಿ ನಡೆದ ಈ ಉಡಾವಣೆಯಲ್ಲಿ ಎಲ್ಲಾ 104 ರಾಕೆಟ್‌ಗಳನ್ನು ಅಂತರಿಕ್ಷ ಕಕ್ಷೆಯಲ್ಲಿ ಯಶಸ್ವಿಯಾಗಿ ಸ್ಥಾಪಿಸುವಲ್ಲಿ ಇಸ್ರೋ ಯಶಸ್ವಿಯಾಯಿತು.

ದಕ್ಕದ ಸಿಎಂ ಪಟ್ಟ; ಜೈಲು ಪಾಲಾದ ಚಿನ್ನಮ್ಮ

ಕಳೆದ ವರ್ಷ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ನಿಧನರಾದ ಬಳಿಕ ಅವರ ಉತ್ತರಾಧಿಕಾರಿಯಾಗಿ ಶಶಿಕಲಾರನ್ನು ಎಡಿಎಂಕೆ ಶಾಸಕಾಂಗ ಪಕ್ಷ ಆಯ್ಕೆ ಮಾಡಿತ್ತು. ಇದಾದ ಬೆನ್ನಲ್ಲೇ ಆಡಳಿತಾರೂಢ ಎಡಿಎಂಕೆ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿತು. ಜಯಲಲಿತಾ ಅವರ ಪರಮಾಪ್ತ, ಹಂಗಾಮಿ ಮುಖ್ಯಮಂತ್ರಿ ಪನೀರ್‌ಸೆಲ್ವಂ, ಶಶಿಕಲಾ ಬಣದ ವಿರುದ್ಧ ಬಂಡಾಯವೇಳುತ್ತಿದ್ದಂತೆ, ರಿಸಾರ್ಟ್ ರಾಜಕೀಯ ಆರಂಭ ಗೊಂಡಿತು. ಆನಂತರ ಶಶಿಕಲಾ ಮುಖ್ಯಮಂತ್ರಿಯಾಗಿ ಸರಕಾರ ರಚಿಸಲು ರಾಜ್ಯಪಾಲರ ಆಹ್ವಾನವೂ ದೊರೆತಿತ್ತು. ಆದರೆ ಆನಂತರದ ಬೆಳವಣಿಗೆಯಲ್ಲಿ 20 ವರ್ಷಗಳಷ್ಟು ಹಳೆಯದಾದ ಗಳಿಕೆಗೆ ಮೀರಿದ ಆಸ್ತಿ ಪ್ರಕರಣದಲ್ಲಿ ಶಶಿಕಲಾರನ್ನು ದೋಷಿಯೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿ, ಆಕೆಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದರಿಂದ ಆಕೆ ಜೈಲು ಪಾಲಾಗಬೇಕಾಯಿತು.

ಡೋಕಾ ಲಾ ಬಿಕ್ಕಟ್ಟು

ಡೋಕಾ ಲಾದಲ್ಲಿ ರಸ್ತೆ ನಿರ್ಮಿಸುತ್ತಿರುವ ಹಿನ್ನೆಲೆಯಲ್ಲಿ ಚೀನದ ಪೀಪಲ್ ಲಿಬರೇಶನ್ ಆರ್ಮಿ ಹಾಗೂ ಭಾರತದ ಸಶಸ್ತ್ರ ಪಡೆ ನಡುವೆ ಬಿಕ್ಕಟ್ಟು ಉಂಟಾಯಿತು. ಡೋಕಾ ಲಾದಲ್ಲಿ ದಕ್ಷಿಣಾಭಿಮುಖವಾಗಿ ಇದ್ದ ರಸ್ತೆಯನ್ನು ವಿಸ್ತರಿಸಲು 2017 ಜೂನ್ 16ರಂದು ಚೀನಾ ಸೇನೆ ನಿರ್ಮಾಣ ವಾಹನ, ರಸ್ತೆ ನಿರ್ಮಾಣ ಸಲಕರಣೆ ಗಳನ್ನು ತಂದಿತ್ತು. 2017 ಜೂನ್ 18ರಂದು ಭಾರತೀಯ ಸೇನಾ ಪಡೆ ಶಸ್ತ್ರಾಸ್ತ್ರಗಳು ಹಾಗೂ ಎರಡು ಬುಲ್ಡೋಝರ್‌ನೊಂದಿಗೆ ಡೋಕಾ ಲಾ ಪ್ರದೇಶಕ್ಕೆ ಪ್ರವೇಶಿಸಿ ಚೀನಾ ಪಡೆ ರಸ್ತೆ ನಿರ್ಮಿಸುವುದನ್ನು ತಡೆಯಿತು. 

ಕೋಮುಹಿಂಸೆಗೆ ಕಡಿವಾಣವಿಲ್ಲ

2017ರಲ್ಲಿ ಭಾರತವು 300ಕ್ಕೂ ಅಧಿಕ ಕೋಮುಘರ್ಷಣೆಯ ಪ್ರಕರಣಗಳಿಗೆ ಸಾಕ್ಷಿಯಾಗಿದೆ. ಸಂಸತ್‌ನ ಗೃಹ ಸಚಿವಾಲಯವು ನವೆಂಬರ್‌ನಲ್ಲಿ ಬಿಡುಗಡೆಗೊಳಿಸಿದ ಅಂಕಿಅಂಶಗಳ ಪ್ರಕಾರ ಆವರೆಗೆ 44 ಮಂದಿ ಕೋಮಹಿಂಸೆಗೆ ಬಲಿಯಾಗಿದ್ದಾರೆ. ಬಿಜೆಪಿ ಆಡಳಿತವಿರುವ ಉತ್ತರಪ್ರದೇಶದಲ್ಲಿ 60 ಕೋಮುಹಿಂಸೆಯ ಘಟನೆಗಳು ನಡೆದಿದ್ದು, ಇದು ದೇಶದಲ್ಲೇ ಅತ್ಯಧಿಕ. ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಬಂಗಾಳ,ಅತ್ಯಧಿಕ ಕೋಮುಹಿಂಸೆ ನಡೆದ ರಾಜ್ಯಗಳ ಪಟ್ಟಿಯಲ್ಲಿ ಮುಂಚೂಣಿಯ ಸ್ಥಾನದಲ್ಲಿವೆ. ಗೋರಕ್ಷಣೆಯ ಹೆಸರಿನಲ್ಲಿ ಅಮಾಯಕ ಗೋವ್ಯಾಪಾರಿಗಳು ಹಾಗೂ ಸಾಗಣೆದಾರರ ಮೇಲೆ ಸಂಘಪರಿವಾರದ ಬೆಂಬಲಿಗರು ಅಮಾನುಷ ದಾಳಿ ನಡೆಸಿರುವುದು ವರದಿಯಾಗಿವೆ. ಇದನ್ನು ಪ್ರಧಾನಿ ಬಹಿರಂಗವಾಗಿ ಖಂಡಿಸಿದರು. ಆದರೆ, ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ಕ್ರಮಗಳನ್ನು ಕೈಗೊಳ್ಳಲಿಲ್ಲ. 

ಚಿತ್ರರಂಗಕ್ಕೂ ತಟ್ಟಿದ ಅಸಹಿಷ್ಣುತೆ, ಕೋಮುವಾದದ ಬಿಸಿ...

ಕೋಮುವಾದ, ಅಸಹಿಷ್ಣುತೆಯ ಬಿಸಿ ಈ ವರ್ಷ ಚಲನಚಿತ್ರರಂಗಕ್ಕೂ ತಟ್ಟಿದೆ. ಸಂಜಯ್ ಬನ್ಸಾಲಿಯವರ ‘ಪದ್ಮಾವತಿ’ ಚಿತ್ರದ ವಿರುದ್ಧ ರಜಪೂತ ಸಮುದಾಯದ ಕರ್ಣಿ ಸೇನಾ ಹಾಗೂ ಸಂಘಪರಿವಾರದ ಸಂಘಟನೆಗಳು ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟನೆ ನಡೆಸಿದವು. ಇದರಿಂದ ಡಿಸೆಂಬರ್ 1ರಂದು ತೆರೆಕಾಣಬೇಕಾಗಿದ್ದ ಚಿತ್ರದ ಬಿಡುಗಡೆ ಮುಂದೂಡಲಾಯಿತು. ಈ ಮಧ್ಯೆ ಮಧುಭಂಡಾರ್ಕರ್ ನಿರ್ದೇಶನದ ‘ಇಂದು ಸರಕಾರ್’ ಚಿತ್ರದ ವಿರುದ್ಧ ಕಾಂಗ್ರೆಸ್ ಪಕ್ಷ ಆಕ್ಷೇಪ ವ್ಯಕ್ತಪಡಿಸಿತ್ತು. ಹಾಗೆಯೇ ಮಲಯಾಳಂ ಚಿತ್ರ ‘ಎಸ್.ದುರ್ಗಾ’ ಹಾಗೂ ಮರಾಠಿ ಚಿತ್ರ ‘ನ್ಯೂಡ್’ ಚಿತ್ರದ ವಿರುದ್ಧವೂ ಕೇಸರಿ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅವುಗಳ ಪ್ರದರ್ಶನವನ್ನು ರದ್ದುಪಡಿಸಲಾಯಿತು.

ಉತ್ತರಪ್ರದೇಶದಲ್ಲಿ ಯೋಗಿ ಸರಕಾರ ಅಸ್ತಿತ್ವಕ್ಕೆ

ಉತ್ತರಪ್ರದೇಶದ 17ನೇ ವಿಧಾನಸಭೆ ಚುನಾವಣೆ 2017 ಫೆಬ್ರವರಿ 11ರಿಂದ ಮಾರ್ಚ್ 8ರ ವರೆಗೆ 7 ಹಂತಗಳಲ್ಲಿ ನಡೆಯಿತು. ಈ ಚುನಾವಣೆಯಲ್ಲಿ ಶೇ. 61.04 ಮತದಾನವಾಗಿತ್ತು. ಚುನಾವಣೆಯ ಮುನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬಿಂಬಿಸದ ಹೊರತಾಗಿಯೂ ಈ ಚುನಾವಣೆಯಲ್ಲಿ ಬಿಜೆಪಿ 325 ಸ್ಥಾನಗಳನ್ನು ಪಡೆದು ಅಭೂತಪೂರ್ವ ಜಯ ಸಾಧಿಸಿತ್ತು. ಈ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಸಾಮೂಹಿಕ ನಾಯಕತ್ವ ಹಾಗೂ ನರೇಂದ್ರ ಮೋದಿ ಅವರ ವರ್ಚಸ್ಸನ್ನು ಬಳಸಿಕೊಂಡಿತು. 2017 ಮಾರ್ಚ್ 18ರಂದು ಯೋಗಿ ಅದಿತ್ಯನಾಥ ಅವರನ್ನು ಉತ್ತರಪ್ರದೇಶದ ಮುಖ್ಯಮಂತ್ರಿಯನ್ನಾಗಿ ನಿಯೋಜಿಸಲಾಯಿತು.

ನಿರ್ಮಲಾಗೆ ರಕ್ಷಣೆಯ ಹೊಣೆ

 ರಕ್ಷಣಾಸಚಿವೆಯಾಗಿ ನೇಮಕಗೊಳ್ಳುವ ಮೂಲಕ ನಿರ್ಮಲಾ ಸೀತಾರಾಮನ್, ಹೊಸ ದಾಖಲೆ ಸೃಷ್ಟಿಸಿದ್ದಾರೆ. ಮೋದಿ ಸಂಪುಟ ಪುನಾರಚನೆಯ ಬಳಿಕ ಸೆಪ್ಟೆಂಬರ್ 3ರಂದು ರಕ್ಷಣಾ ಸಚಿವೆಯಾಗಿ ನಿರ್ಮಲಾ ಅಧಿಕಾರ ಸ್ವೀಕರಿಸಿದರು. 72 ಗಂಟೆ ಹಿಮಪಾತ: 20 ಸಾವು ಜಮ್ಮ ಹಾಗೂ ಕಾಶ್ಮೀರದಲ್ಲಿ 72 ಗಂಟೆಗಳ ಹಿಮಪಾತದಿಂದ 15 ಮಂದಿ ಯೋಧರು ಸೇರಿದಂತೆ 20 ಮಂದಿ ಮೃತಪಟ್ಟರು. ಗುರೇಜ್ ಕಣಿವೆಯ ನಿರು ಸಮೀಪ ಸಂಭವಿಸಿದ ಹಿಮಪಾತದಲ್ಲಿ ಗಸ್ತು ನಡೆಸುತ್ತಿದ್ದ 11 ಯೋಧರಲ್ಲಿ ಹಲವರು ನಾಪತ್ತೆಯಾಗಿದ್ದರು. ನಕ್ಸಲ್ ದಾಳಿ: 12ಯೋಧರ ಸಾವು ಛತ್ತೀಸ್‌ಗಡದ ಸುಕ್ಮಾದಲ್ಲಿ ನಕ್ಸಲೀಯರು ದಾಳಿ ನಡೆಸಿ ಕೇಂದ್ರ ಮೀಸಲು ಪೊಲೀಸ್ ಪಡೆಯ 12 ಯೋಧರನ್ನು ಹತ್ಯೆಗೈದಿದ್ದರು. ಈ ಘಟನೆಯಲ್ಲಿ 4 ಮಂದಿ ಯೋಧರು ಗಂಭೀರ ಗಾಯಗೊಂಡಿದ್ದರು. ಇದು ಈ ವರ್ಷ ಭದ್ರತಾ ಪಡೆಯ ಮೇಲೆ ನಕ್ಸಲೀಯರು ನಡೆಸಿದಅತಿ ದೊಡ್ಡ ದಾಳಿಯಾಗಿತ್ತು. 

ಆಕ್ಸಿಜನ್ ಕೊರತೆ: ಕಂದಮ್ಮಗಳ ಸಾವು

ಉತ್ತರಪ್ರದೇಶದಲ್ಲಿ ಗೋರಖ್‌ಪುರದ ಬಾಬಾ ರಾಘವದಾಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿದ್ದ 213 ಶಿಶುಗಳು, ಮೆದುಳು ಜ್ವರದ ವಾರ್ಡ್‌ನಲ್ಲಿ 77 ಮಂದಿ ಸೇರಿ ಒಟ್ಟು 290 ಮಂದಿ ಸಾವನ್ನಪ್ಪಿದ್ದರು. ತನಿಖೆ ನಡೆಸಲು ಯೋಗಿ ಆದಿತ್ಯನಾಥ್ ಸಮಿತಿಯೊಂದನ್ನು ರಚಿಸಿದ್ದರು. 

ಸಹಾರಣ್‌ಪುರ ಗಲಭೆ

ದೇಶದ ವಿವಿಧೆಡೆ ದಲಿತರ ಮೇಲಿನ ದೌರ್ಜನ್ಯ ನಡೆದ ಪ್ರಕರಣಗಳೂ ವರದಿಯಾಗಿವೆ. ಯೋಗಿ ಆದಿತ್ಯನಾಥ್ ಉತ್ತರಪ್ರದೇಶದ ಸಹಾರಣ್‌ಪುರ ಜಿಲ್ಲೆಯ ಶಬ್ಬಿಪುರ್ ಗ್ರಾಮದಲ್ಲಿ ದಲಿತರು ಹಾಗೂ ಮೇಲ್ಜಾತಿಯ ಟಾಕೂರ್ ಸಮುದಾಯಗಳ ನಡುವೆ ಭುಗಿಲೆದ್ದ ಘರ್ಷಣೆಯಲ್ಲಿ ಓರ್ವ ಮೃತಪಟ್ಟು 15 ಮಂದಿ ಗಾಯಗೊಂಡಿದ್ದರು.

ಮುಂಬೈ ಬೆಂಕಿ ಅವಘಡದಲ್ಲಿ 14 ಸಾವು

ಮಂಬೈನ ಕಮಲಾ ಮಿಲ್ಸ್ ಕಾಂಪೌಂಡ್‌ನಲ್ಲಿರುವ ಸಂಕೀರ್ಣದಲ್ಲಿ ಬೆಂಕಿ ಅವಘಡ ಸಂಭವಿಸಿ 14 ಮಂದಿ ಮೃತಪಟ್ಟು 21 ಮಂದಿ ಗಾಯಗೊಂಡರು. ಕಟ್ಟಡದ ರೂಫ್‌ಟಾಪ್‌ನಲ್ಲಿದ್ದ ಒನ್ ಅಬೊವ್ ಪಬ್‌ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿತು ಹಾಗೂ ಅದು ಇತರ ಕಡೆಗಳಿಗೆ ಹಬ್ಬಿತು. ಪಬ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳಲು ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಪೊಲೀಸರ ವರದಿ ಹೇಳಿತು. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರವಾಹ, ಭೂಕಂಪ, ಚಂಡಮಾರುತ ಜುಲೈನಲ್ಲಿ ಕುಂಭದ್ರೋಣ ಮಳೆಯಿಂದ ಬ್ರಹ್ಮಪುತ್ರಾ ನದಿ ಉಕ್ಕಿ ಹರಿದ ಪರಿಣಾಮ ಈಶಾನ್ಯದ ರಾಜ್ಯಗಳು ಹಾಗೂ ಮಣಿಪುರ ರಾಜ್ಯಗಳು ಭಾರೀ ಪ್ರವಾಹದಿಂದ ತತ್ತರಿಸಿದವು. ಭೂಕುಸಿತ ಹಾಗೂ ನೆರೆಯಿಂದ ಸಂಭವಿಸಿದ ದುರಂತಗಳಲ್ಲಿ ಕನಿಷ್ಠ 85 ಮಂದಿ ಮೃತಪಟ್ಟರು. ಹಿಮಾಚಲ ಪ್ರದೇಶದ ಮಾಂಡಿ ಜಿಲ್ಲೆಯಲ್ಲಿ ಸಂಭವಿಸಿದ ಭಾರೀ ಮಳೆಯಿಂದಾಗಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಕನಿಷ್ಠ 46 ಮಂದಿ ಭೂಸಮಾಧಿಯಾದರು. ವರ್ಷಾಂತ್ಯದ ವೇಳೆಗೆ ತಮಿಳುನಾಡು,ಕೇರಳ ಮತ್ತು ಲಕ್ಷದ್ವೀಪಗಳಲ್ಲಿ ಓಖಿ ಚಂಡಮಾರುತ 63ಕ್ಕೂ ಅಧಿಕ ಮಂದಿಯನ್ನು ಬಲಿತೆಗೆದುಕೊಂಡಿತು. ನೂರಾರು ಮನೆಗಳು ನಾಶವಾದವು. 1 ಲಕ್ಷ ಕೋ.ರೂ.ಗೂ ಅಧಿಕ ಮೊತ್ತದ ಹಾನಿ ಸಂಭವಿಸಿತು. 

ತ್ರಿವಳಿ ತಲಾಖ್ ಅಸಿಂಧು: ಸುಪ್ರೀಂಕೋರ್ಟ್

 ಮುಸ್ಲಿಂ ಸಮುದಾಯದಲ್ಲಿ ಪ್ರಚಲಿತದಲ್ಲಿರುವ ತ್ರಿವಳಿ ತಲಾಖ್ ಪದ್ಧತಿಯನ್ನು ಕಾನೂನುಬಾಹಿರವೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಐವರು ಸದಸ್ಯರ ನ್ಯಾಯಪೀಠವು 3:2 ಬಹುಮತದೊಂದಿಗೆ ತ್ರಿವಳಿ ತಲಾಕ್ ಪದ್ಧತಿಯನ್ನು ಅಸಾಂವಿಧಾನಿಕವೆಂದು ಘೋಷಿಸಿತು.

 ತ್ರಿವಳಿ ತಲಾಖ್ ಪದ್ಧತಿಯನ್ನು ಅಸಿಂಧುಗೊಳಿಸುವ ಕುರಿತ ಮುಸ್ಲಿಂ ಮಹಿಳಾ (ವಿವಾಹದ ಹಕ್ಕುಗಳ ರಕ್ಷಣೆ) ವಿಧೇಯಕವನ್ನು ಕೇಂದ್ರ ಸರಕಾರವು ಲೋಕಸಭೆಯಲ್ಲಿ ಡಿಸೆಂಬರ್‌ನಲ್ಲಿ ಅಂಗೀಕರಿಸಿತು. ರಾಜ್ಯಸಭೆ ಯಲ್ಲಿ ಈ ವಿಧೇಯಕವು ಮುಂದಿನ ವರ್ಷದ ಆರಂಭದಲ್ಲಿ ಮಂಡನೆಯಾಗುವ ನಿರೀಕ್ಷೆಯಿದೆ. ತ್ರಿವಳಿ ತಲಾಖ್ ಪದ್ಧತಿಯನ್ನು ಪ್ರಶ್ನಿಸಿ ಮುಸ್ಲಿಂ ಮಹಿಳೆ ಶಾಯರಾಬಾನೊ ಮತ್ತಿತರರು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿಗಳ ವಿಚಾರಣೆಯನ್ನು ಒಟ್ಟಾಗಿ ನಡೆಸಿದ ನ್ಯಾಯಪೀಠ ಈ ತೀರ್ಪು ನೀಡಿತ್ತು. ವಿಧೇಯಕ ರಚಿಸುವಾಗ ವಿವಿಧ ಮುಸ್ಲಿಂ ಸಂಘಟನೆಗಳ ಅಭಿಪ್ರಾಯಗಳನ್ನು ಪರಿಗಣನೆಗೆ ತೆಗೆದುಕೊಳ್ಳದಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಅವಘಡ...ದುರಂತ...

14  ಜನವರಿ : ಬಿಹಾರದ ಪಾಟ್ನಾ ಬಳಿ ಮಕರಸಂಕ್ರಾಂತಿ ಹಬ್ಬದ ಆಚರಣೆಯ ಸಂದರ್ಭ ಗಂಗಾನದಿಯಲ್ಲಿ ದೋಣಿ ಮುಳುಗಿ 25 ಮಂದಿ ಜಲಸಮಾಧಿ.

16 ಜುಲೈ: ಜಮ್ಮುಕಾಶ್ಮೀರದಲ್ಲಿ ನಡೆದ ಬಸ್ ಅವಘಡದಲ್ಲಿ 26 ಅಮರನಾಥ ಯಾತ್ರಿಕರ ಸಾವು.
19 ಆಗಸ್ಟ್: ಉತ್ತರಪ್ರದೇಶದ ಮುಝಫ್ಫರ್‌ನಗರ್‌ನ ಹರಿದ್ವಾರದಲ್ಲಿ ಕಳಿಂಗ-ಉತ್ಕಲ್ ಎಕ್ಸ್‌ಪ್ರೆಸ್ ಹಳಿ ತಪ್ಪಿ 23 ಮಂದಿ ಸಾವು ; 100ಕ್ಕೂ ಅಧಿಕ ಮಂದಿಗೆ ಗಾಯ
31 ಆಗಸ್ಟ್: ಮುಂಬೈನಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದು 32 ಮಂದಿ ಸಾವು.
22  ಸೆಪ್ಟಂಬರ್: ಮುಂಬೈನ ಲೋವರ್ ಪರೇಲ್ ಹಾಗೂ ಪ್ರಭಾದೇವಿ ರೈಲು ನಿಲ್ದಾಣಗಳಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 22 ಮಂದಿ ದಾರುಣ ಸಾವು.

 ನಟ ದಿಲೀಪ್ ಬಂಧನ

ತಿರುವನಂತಪುರ: ನಟಿಯ ಅಪಹರಣ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಮಲೆಯಾಳದ ಖ್ಯಾತ ನಟ ದಿಲೀಪ್‌ನನ್ನು ವಿಶೇಷ ತನಿಖಾ ತಂಡ ಬಂಧಿಸಿತ್ತು. ನಟಿ ಶೂಟಿಂಗ್ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಪ್ರಧಾನ ಆರೋಪಿಯಾಗಿದ್ದ ಸುನೀಲ್ ಕುಮಾರ್ ಆಲಿಯಾಸ್ ಪಲ್ಸರ್ ಸುನಿ ನಟಿಯನ್ನು ಅಪಹರಿಸಿದ್ದ ಹಾಗೂ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿತ್ತು. ಈ ಪಿತೂರಿಯಲ್ಲಿ ದಿಲೀಪ್ ಭಾಗಿಯಾಗಿದ್ದಾರೆ ಎಂದು ಹೇಳಲಾಗಿತ್ತು. ಅನಂತರ ದಿಲೀಪ್ ಜಾವಿುೀನಿನ ಮೇಲೆ ಬಿಡುಗಡೆಯಾಗಿದ್ದರು.

ಗುರ್ಮಿತ್‌ಗೆ 20 ವರ್ಷ ಕಾರಾಗೃಹ

ಅತ್ಯಾಚಾರ ಅಪರಾಧಕ್ಕೆ ಸಂಬಂಧಿಸಿ ಡೆೇರಾ ಸಚ್ಚಾ ಸೌದಾದ ವರಿಷ್ಠ ಹಾಗೂ ಸ್ವಘೋಷಿತ ದೇವ ಮಾನವ ಬಾಬಾ ಗುರ್ಮಿತ್‌ಗೆ ವಿಶೇಷ ಸಿಬಿಐ ನ್ಯಾಯಾಲಯ 20 ವರ್ಷ ಕಾರಾಗೃಹ ಶಿಕ್ಷೆ ಹಾಗೂ 30 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿತು. 

ಗುಜರಾತ್: ಬಿಜೆಪಿಗೆ ಲಘು ಕಂಪನ

ನರೇಂದ್ರ ಮೋದಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಮಿಸಿದ್ದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಯಾಸದ ವಿಜಯ ಸಾಧಿಸಿದೆ. ರಾಹುಲ್‌ಗಾಂಧಿಯವರ ಬಿರುಸಿನ ಚುನಾವಣಾ ಪ್ರಚಾರ, ಪಟೇಲ್ ಹೋರಾಟದ ಕಾವು, ಜಿಎಸ್‌ಟಿ ಬಿಸಿ ಕಾಂಗ್ರೆಸ್ ಪಕ್ಷವು ಬಿಜೆಪಿಗೆ ಪ್ರಬಲವಾದ ಹೋರಾಟವನ್ನು ನೀಡಲು ಬಲತುಂಬಿತು. ಚುನಾವಣೆಯಲ್ಲಿ ಬಿಜೆಪಿ 99 ಸ್ಥಾನಗಳ ಸರಳ ಬಹುಮತದಲ್ಲಿ ತೃಪ್ತಿಪಟ್ಟುಕೊಂಡರೆ, ಕಾಂಗ್ರೆಸ್ 79 ಸ್ಥಾನಗಳನ್ನು ಪಡೆದು ಪ್ರಬಲ ಪೈಪೋಟಿ ನೀಡಿದೆ. ದಲಿತ ನಾಯಕ ಜಿಗ್ನೇಶ್ ಮೇವಾನಿ, ಒಬಿಸಿ ಮುಖಂಡ ಅಲ್ಪೇಶ್ ಠಾಕೂರ್ ವಿಧಾನಸಭೆಗೆ ಆಯ್ಕೆಯಾಗಿರುವುದು ಈ ಚುನಾವಣೆಯ ಇನ್ನೊಂದು ವಿಶೇಷವಾಗಿದೆ. ವಿಜಯ್ ರೂಪಾನಿಗೆ ಮುಖ್ಯಮಂತ್ರಿ ಪಟ್ಟ ಮತ್ತೊಮ್ಮೆ ಒಲಿದಿದೆ.

ರಾಹುಲ್‌ಗೆ �

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ