ಕಾರಿನ ನಾಮ ಫಲಕ ತೆಗೆದ ಅಧಿಕಾರಿಗೆ ಥಳಿಸಿದ ಬಿಜೆಪಿ ನಾಯಕ!

Update: 2018-01-17 17:22 GMT

ಹೊಸದಿಲ್ಲಿ, ಜ. 17: ಲತೇಹಾರ್‌ನಲ್ಲಿ ಕಾರಿನ ನಾಮಫಲಕ ತೆಗೆದಿರುವುದಕ್ಕೆ ಜಿಲ್ಲಾ ಸಾರಿಗೆ ಅಧಿಕಾರಿಗೆ ಜಾರ್ಖಂಡ್‌ನ ಬಿಜೆಪಿ ನಾಯಕ ರಾಜ್‌ಧಾನಿ ಯಾದವ್ ಥಳಿಸಿದ ವೀಡಿಯೊವೊಂದು ಪ್ರಸಾರವಾಗುತ್ತಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಈ ವೀಡಿಯೊ ವೈರಲ್ ಆಗುತ್ತಿದ್ದಂತೆ ರಾಜ್‌ಧಾನಿ ಯಾದವ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

    ತನ್ನ ವಾಹನದಲ್ಲಿ ಅಳವಡಿಸಲಾಗಿದ್ದ ನಾಮಫಲಕ ತೆಗೆದದ್ದಕ್ಕೆ ಆಕ್ರೋಶಗೊಂಡ ಬಿಜೆಪಿ ನಾಯಕ ರಾಜ್‌ಧಾನಿ ಯಾದವ್ ಅಧಿಕಾರಿಗೆ ಥಳಿಸಿರುವುದು ವೀಡಿಯೊದಲ್ಲಿ ದಾಖಲಾಗಿದೆ.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬಿಜೆಪಿಯ ಲತೇಹಾರ್ ಜಿಲ್ಲೆ ಉಪಾಧ್ಯಕ್ಷರಾಗಿರುವ ಯಾದವ್ ಅವರ ವಾಹನವನ್ನು ಜಿಲ್ಲಾ ಸಾರಿಗೆ ಅಧಿಕಾರಿ ಎಫ್. ಬಾರ್ಲಾ ತಡೆದು ನಾಮಫಲಕ ತೆಗೆದ ಸಂದರ್ಭ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾರ್ಲಾ ಅವರಿಗೆ ಗಾಯಗಳಾಗಿವೆ. ಅವರನ್ನು ಸದಾರ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News