2014ರಲ್ಲಿ ಸೇಲ್ ಆದ ‘ಪ್ರಾಮಿಸ್’ ಟೂತ್ ಪೇಸ್ಟ್ ರೈತರ, ನಿರುದ್ಯೋಗಿಗಳ ಮುಖದಲ್ಲಿ ನಗು ತಂದಿಲ್ಲ
Update: 2018-02-05 11:26 GMT
ಬೆಂಗಳೂರು, ಫೆ.5: ನಗರದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ನಟ, ನಿರ್ದೇಶಕ ಪ್ರಕಾಶ್ ರೈ ತಿರುಗೇಟು ನೀಡಿದ್ದಾರೆ.
“2014ರಲ್ಲಿ ಸೇಲ್ ಆದ ಪ್ರಾಮಿಸ್ ಟೂತ್ ಪೇಸ್ಟ್ ಸಂಕಷ್ಟದಲ್ಲಿರುವ ರೈತರ, ನಿರುದ್ಯೋಗಿ ಯುವಕರ ಮುಖದಲ್ಲಿ ನಗು ತರಿಸುವಲ್ಲಿ ವಿಫಲವಾಗಿದೆ. ನಿನ್ನೆ ಮಾರಾಟವಾದ ಪ್ರಾಮಿಸ್ ಟೂತ್ ಪೇಸ್ಟನ್ನು ನೀವು ನಂಬುತ್ತೀರಾ” ಎಂದು ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ.
ನಿನ್ನೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, “ಕರ್ನಾಟಕದಲ್ಲಿ ಕೇಸರಿ ಅಲೆಯಿದೆ. ಸಬ್ಕಾ ಸಾಥ್ ಸಬ್ಕಾ ವಿಕಾಸ್ ಎನ್ನುವ ಧ್ಯೇಯದೊಂದಿಗೆ ಬಿಜೆಪಿಯು ಕರ್ನಾಟಕವನ್ನು ಅಭಿವೃದ್ಧಿಯ ದಿಕ್ಕಿನತ್ತ ಕೊಂಡೊಯ್ಯಲಿದೆ” ಎಂದು ಹೇಳಿದ್ದರು.
ಪ್ರಕಾಶ್ ರೈಯವರ #justasking ಟ್ವಿಟರ್ ಆಂದೋಲನದಲ್ಲಿ ಅವರು ಈ ‘ಪ್ರಾಮಿಸ್’ ಟ್ವೀಟ್ ಮಾಡಿದ್ದಾರೆ.