ಆಂಧ್ರದಲ್ಲಿ ಭೀಕರ ರಸ್ತೆ ಅಪಘಾತ ; ಐವರು ಮೃತ್ಯು

Update: 2018-02-13 07:41 GMT

ಹೈದರಾಬಾದ್, ಫೆ.13: ಆಂಧ್ರದ  ಚಿತ್ತೂರು ಜಿಲ್ಲೆಯ ಬಿ.ಎಸ್ ಕಂದ್ರಿಗ ಬಳಿ ಆಟೋ ರಿಕ್ಷಾಕ್ಕೆ ಟಿಪ್ಪರ್ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ   ಐವರು ಮೃತಪಟ್ಟಿದ್ದಾರೆ.

ಪಶ್ಚಿಮ ಗೋದಾವರಿ ಜಿಲ್ಲೆಯ ಕಂದ್ರಿಗ ಎಂಬಲ್ಲಿ ಆಟೋ ರಿಕ್ಷಾ ಮತ್ತು  ಟಿಪ್ಪರ್ ಡಿಕ್ಕಿ ಹೊಡೆದು ಐವರು ಮೃತಪಟ್ಟರು. ಮೂವರು ಗಾಯಗೊಂಡರು ಎಂದು ತಿಳಿದು ಬಂದಿದೆ.

ಆಟೋ ರಿಕ್ಕಾದಲ್ಲಿದ್ದ ಪಾಲಕೊಲ್ಲುವಿನ ನಿವಾಸಿಗಳಾದ ರಾಮದಾಸ್, ಬಿಂದು, ಕುಮಾರಿ, ಅನಂತ್ ಮತ್ತು ಚಾಲಕ ವೆಂಕಟ್ರಮಣ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು ಎನ್ನಲಾಗಿದೆ.ಇವರು ಕಾಳಹಸ್ತಿಗೆ ಭೇಟಿ ನೀಡಿ   ಆಟೋದಲ್ಲಿ ಹೋಗಿ ಬರುತ್ತಿದ್ದಾಗ ಈ  ಘಟನೆ ನಡೆದಿದೆ.

,,,,,,,,,,,,,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News