ಅಮರ್ತ್ಯಸೇನ್ ಸಾಕ್ಷ್ಯಚಿತ್ರ ಮಾರ್ಚ್ 9ರಂದು ಬಿಡುಗಡೆ

Update: 2018-02-25 16:35 GMT

ರಾಂಚಿ, ಫೆ. 21: ಸೆನ್ಸಾರ್ ಮಂಡಳಿ ಶಿಫಾರಸಿನಂತೆ ‘ಗುಜರಾತ್’ ಶಬ್ದವನ್ನು ತೆಗೆದು ಹಾಕಿದ ಬಳಿಕ ನೋಬೆಲ್ ಪುರಸ್ಕೃತ ಅಮರ್ತ್ಯಸೇನ್ ಕುರಿತ ಸಾಕ್ಷ್ಯಚಿತ್ರವನ್ನು ಮಾರ್ಚ್ 9ರಂದು ಬಿಡುಗಡೆ ಮಾಡಲಾಗುವುದು ಎಂದು ನಿರ್ದೇಶಕ ಸುಮನ್ ಘೋಷ್ ಘೋಷಿಸಿದ್ದಾರೆ.

 9 ಪದ/ಪದ ಸಮುಚ್ಚಯವನ್ನು ಮೌನಗೊಳಿಸುವಂತೆ ಕೋಲ್ಕತ್ತಾದ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಐಫ್‌ಸಿ) ಸೂಚಿಸಿದ ಬಳಿಕ ಒಂದು ಗಂಟೆಯ ಸಾಕ್ಷಚಿತ್ರ ‘ದಿ ಆರ್ಗ್ಯುಮೆಂಟೇಟಿವ್ ಇಂಡಿಯಾ’ ವಿವಾದಕ್ಕೆ ಒಳಗಾಗಿತ್ತು. ಆದರೆ ಮುಂಬೈ ಸಿಬಿಎಫ್‌ಸಿ ಅಂತಿಮವಾಗಿ ‘ಗುಜರಾತ್’ ಎಂಬ ಒಂದು ಶಬ್ದವನ್ನು ಮಾತ್ರ ಮೌನಗೊಳಿಸುವಂತೆ ಸೂಚಿಸಿ 2017 ಜುಲೈ 17ರಂದು ಪ್ರಮಾಣ ಪತ್ರ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News