ಮುಸ್ಲಿಂ ಲೀಗ್ 44 ಮಂದಿಯನ್ನು ಕೊಂದ ಪಕ್ಷ: ವಿಧಾನಸಭೆಯಲ್ಲಿ ಸಿಪಿಎಂ ಸಚಿವ ಜಲೀಲ್
Update: 2018-03-14 11:19 GMT
ತಿರುವನಂತಪುರಂ,ಮಾ.14: ಕೇರಳದ ಸಚಿವ ಕೆಟಿ ಜಲೀಲ್ ಅಲ್ಲಿನ ವಿಧಾನಸಭೆಯಲ್ಲಿ ಮಾಡಿದ ಭಾಷಣ ವಿವಾದಕ್ಕೀಡಾಗಿದೆ. ಸೋಮವಾರ ಅವರು ವಿಧಾನಸಭೆಯಲ್ಲಿ ಮಾತಾಡುತ್ತಾ ಮುಸ್ಲಿಮ್ ಲೀಗ್ 44 ಮಂದಿಯನ್ನು ಕೊಲೆ ಮಾಡಿರುವ ಪಕ್ಷವಾಗಿದೆ ಎಂದಿದ್ದರು.
ಸಚಿವರು ತಮ್ಮ ಆರೋಪಕ್ಕೆ ಸಂಬಂಧಿಸಿದ ಅಧಿಕೃತ ದಾಖಲೆಯನ್ನು ಹಾಜರು ಪಡಿಸಿ ಆರೋಪವನ್ನು ಸಾಬೀತುಪಡಿಸಲಿ. ಇಲ್ಲದಿದ್ದರೆ ಸದನ ಕಲಾಪಗಳ ಕಡತದಿಂದ ಈ ಅಂಶವನ್ನು ತೆಗೆಯಬೇಕು ಎಂದು ಪ್ರತಿಪಕ್ಷ ಆಗ್ರಹಿಸಿತು. ವಿ.ಕೆ. ಇಬ್ರಾಹಿಂ ಕುಂಞಿ ನಿನ್ನೆ ಪುನಃ ಈ ವಿಷಯವನ್ನು ವಿಧಾನಸಭೆಯಲ್ಲಿ ಎತ್ತಿದರು.
ವಿ.ಕೆ. ಇಬ್ರಾಹಿಂ ಕುಂಞಿ ಮಾತಾಡದಂತೆ ಆಡಳಿತ ಪಕ್ಷದ ಸದಸ್ಯರು ಯತ್ನಿಸುತ್ತಿದ್ದಂತೆ ಪ್ರತಿಪಕ್ಷ ಮಧ್ಯಪ್ರವೇಶಿಸಿದಾಗ ಗದ್ದಲ ಏರ್ಪಟ್ಟಿತ್ತು. ನಂತರ ಈವಿಷಯದಲ್ಲಿ ಏನಾದರೂ ಇದ್ದರೆ ಪರಿಶೀಲಿಸಿ ಕ್ರಮಕೈಗೊಳ್ಳೂವೆ ಎಂದು ಸ್ಪೀಕರ್ ಭರವಸೆ ನೀಡಿದ ನಂತರ ಪ್ರತಿಪಕ್ಷ ತಣ್ಣಗಾಯಿತು.