ತನ್ನ ಪುತ್ರನ ವಿರುದ್ಧ ದಾಖಲಾದ ಎಫ್ ಐಆರ್ ‘ಕಸದ ತುಂಡು’ ಎಂದ ಕೇಂದ್ರ ಸಚಿವ ಚೌಬೆ!

Update: 2018-03-26 07:50 GMT

ಹೊಸದಿಲ್ಲಿ, ಮಾ.26: ಬಿಹಾರದಲ್ಲಿ ಕೋಮು ಗಲಭೆಗೆ ಪ್ರಚೋದನೆ ನೀಡಿರುವ ಆರೋಪದಲ್ಲಿ ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆಯವರ ಪುತ್ರ ಅರ್ಜಿತ್ ಶಾಶ್ವತ್ ವಿರುದ್ಧ ಬಂಧನ ವಾರಂಟ್ ಜಾರಿಯಾಗಿದೆ. ಈ ಬಗ್ಗೆ ಅರ್ಜಿತ್ ನಾನೇನೂ ತಲೆಮರೆಸಿಕೊಂಡಿಲ್ಲ. ಆದ್ದರಿಂದ ಶರಣಾಗುವ ಅಗತ್ಯವಿಲ್ಲ ಎಂದು ಹೇಳಿದ್ದಾನೆ.

“ನಾನು ನ್ಯಾಯಾಲಯದ ಆಶ್ರಯದಲ್ಲೇ ಇದ್ದೇನೆ. ತಲೆಮರೆಸಿಕೊಂಡವರನ್ನು ಮಾತ್ರ ಪೊಲೀಸರು ಹುಡುಕಬೇಕು. ನಾನು ಸಮಾಜದಲ್ಲೇ ಇದ್ದೇನೆ” ಎಂದು ಅರ್ಜಿತ್ ಹೇಳಿದ್ದಾನೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ, ಅರ್ಜಿತ್ ರ ತಂದೆ ಅಶ್ವಿನಿ ಕುಮಾರ್ ಚೌಬೆ ತನ್ನ ಪುತ್ರನ ವಿರುದ್ಧ ದಾಖಲಾಗಿರುವ ಎಫ್ ಐಆರ್ ಕಸದ ತುಂಡು ಎಂದಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ತನ್ನ ಪುತ್ರನ ವಿರುದ್ಧ ದಾಖಲಾಗಿರುವ ಎಫ್ ಐಆರ್ ಕಸದ ತುಂಡು. ಆ ಪ್ರದೇಶದಲ್ಲಿನ ಭ್ರಷ್ಟ ಅಧಿಕಾರಿಗಳು ಅದನ್ನು ದಾಖಲಿಸಿದ್ದಾರೆ. ತನ್ನ ಪುತ್ರ ಯಾವುದೇ ತಪ್ಪು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News