ಮಂಗಳೂರು ವಿಮಾನ ನಿಲ್ದಾಣಕ್ಕೆ 'ಭಾರತದ ಅತ್ಯಂತ ಸ್ವಚ್ಛ ಏರ್ಪೋರ್ಟ್' ಗೌರವ
Update: 2018-04-02 09:49 GMT
ಹೊಸದಿಲ್ಲಿ, ಎ.2: ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದೇಶದ ಅತ್ಯಂತ ಸ್ವಚ್ಛ ಏರ್ಪೋರ್ಟ್ ಎಂಬ ಗೌರವಕ್ಕೆ ಪಾತ್ರವಾಗಿದೆ. ಏರ್ಪೋರ್ಟ್ ಡೈರೆಕ್ಟರ್ ವಿ.ವಿ. ರಾವ್ ಹೊಸದಿಲ್ಲಿಯಲ್ಲಿ ರವಿವಾರ ನಡೆದ ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರದ(ಎಎಐ) 23ನೇ ವಾರ್ಷಿಕ ದಿನಾಚರಣೆಯ ವೇಳೆ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಎಎಐ ದೇಶಾದ್ಯಂತದ 53 ಏರ್ಪೋಟ್ಗಳಲ್ಲಿ ನಡೆಸಿರುವ ಸರ್ವೇಯಲ್ಲಿ ಮಂಗಳೂರು ಏರ್ಪೋರ್ಟ್ ಸ್ವಚ್ಛತೆಯಲ್ಲಿ ಮೊದಲ ಸ್ಥಾನ ಪಡೆದಿದೆ. ಎಎಐ ಅಧಿಕಾರಿಗಳ ತಂಡ ಸರ್ವೇಯ ವೇಳೆ ಏರ್ಪೋರ್ಟ್ ಟರ್ಮಿನಲ್, ಪಾರ್ಕಿಂಗ್ ಪ್ರದೇಶ, ಶೌಚಾಲಯಗಳು, ವಾಣಿಜ್ಯ ಮಳಿಗೆಗಳು, ಏರ್ಪೋರ್ಟ್ಗೆ ಹೋಗುವ ಮಾರ್ಗ ಹಾಗೂ ಪ್ರಯಾಣಿಕರ ಕೋಣೆಯನ್ನು ಪರೀಕ್ಷೆ ನಡೆಸಿದೆ.
ದುರ್ಗಾ ಫೆಲಿಸಿಟಿ ಮ್ಯಾನೇಜ್ಮೆಂಟ್ ಸರ್ವಿಸಸ್ ಪ್ರೈ.ಲಿ.ಮಂಗಳೂರಿನ ಏರ್ಪೋರ್ಟ್ ಸ್ವಚ್ಛತೆಯ ಉಸ್ತುವಾರಿವಹಿಸಿಕೊಂಡಿದೆ.