ಕಾಶ್ಮೀರದಲ್ಲಿ ‘ಭಾರತೀಯ ದೌರ್ಜನ್ಯ’ ನಿಲ್ಲಿಸಿ: ಖಾಕನ್

Update: 2018-04-11 17:49 GMT

ಬೀಜಿಂಗ್, ಎ. 11: ಚೀನಾದಲ್ಲಿ ಮಂಗಳವಾರ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟರಸ್‌ರನ್ನು ಭೇಟಿಯಾದ ಪಾಕಿಸ್ತಾನದ ಪ್ರಧಾನಿ ಶಾಹಿದ್ ಖಾಕನ್ ಅಬ್ಬಾಸಿ, ಕಾಶ್ಮೀರದಲ್ಲಿ ‘ಭಾರತೀಯ ದೌರ್ಜನ್ಯ’ಗಳನ್ನು ನಿಲ್ಲಿಸಲು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು.

ಭಾರತ ಅಪ್ರಚೋದಿತವಾಗಿ ಯುದ್ಧವಿರಾಮ ಉಲ್ಲಂಘನೆಗಳನ್ನು ನಡೆಸುತ್ತಿದೆ ಎಂಬುದಾಗಿ ಈ ಸಂದರ್ಭದಲ್ಲಿ ಆರೋಪಿಸಿದ ಅವರು, ಇದು ನಿಯಂತ್ರಣ ರೇಖೆಯಲ್ಲಿನ ಪರಿಸ್ಥಿತಿ ಬಿಗಡಾಯಿಸಲು ಕಾರಣವಾಗಬಹುದಾಗಿದೆ ಎಂದು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News