ಮೋದಿ ಸಂವಾದಕ್ಕೆ ಭಾರತೀಯ ವಿದ್ಯಾರ್ಥಿಗಳ ಒಕ್ಕೂಟದ ಪ್ರತಿನಿಧಿಗಳಿಗೆ ಆಹ್ವಾನವಿಲ್ಲ

Update: 2018-04-19 17:43 GMT

ಲಂಡನ್‌, ಎ 19: ಲಂಡನ್‌ನಲ್ಲಿ ಬುಧವಾರ ನಡೆದ ಪ್ರಧಾನಿ ಮೋದಿ ಜೊತೆಗಿನ ಸಂವಾದ ಕಾರ್ಯಕ್ರಮ ‘ಭಾರತ್ ಕಿ ಬಾತ್ ಸಬ್ ಕೆ ಸಾಥ್’ ಕಾರ್ಯಕ್ರಮದಲ್ಲಿ ತಮ್ಮ ಪ್ರತಿನಿಧಿಗಳು ಭಾಗವಹಿಸುವಿಕೆ ದೃಢೀಕರಿಸಲ್ಪಟ್ಟಿದ್ದರೂ, ಆಯೋಜಕರು ಅವರಿಗೆ ಪ್ರವೇಶಪತ್ರಗಳನ್ನು ಕಳುಹಿಸಿರಲಿಲ್ಲವೆಂದು ಬ್ರಿಟನ್‌ನಲ್ಲಿನ ನ್ಯಾಶನಲ್ ಇಂಡಿಯನ್ ಸ್ಟೂಡೆಂಟ್ಸ್ ಹಾಗೂ ಆಲುಮ್ನಿ ಯೂನಿಯನ್ (ಎನ್‌ಐಎಸ್‌ಎಯು) ಆಪಾದಿಸಿದೆ. ಕಾರ್ಯಕ್ರಮಕ್ಕೆ ಮುನ್ನ ತಾವು ಭಾರತದಲ್ಲಿ ವರದಿಯಾಗಿರುವ ಅತ್ಯಾಚಾರ ಪ್ರಕರಣಗಳಲ್ಲಿ ನ್ಯಾಯದಾನವನ್ನು ಖಾತರಿಪಡಿಸಲು ಕ್ಷಿಪ್ರ ಹಾಗೂ ಅಸಾಧಾರಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾಗಿ ಅದು ಹೇಳಿದೆ. ತಮ್ಮ ಹೇಳಿಕೆಗಳನ್ನು ಹಿಂತೆಗೆದುಕೊಳ್ಳಬೇಕೆಂಬ ಒತ್ತಡವನ್ನೂ ತಮ್ಮ ಮೇಲೆ ಹೇರಲಾಗಿತ್ತೆಂದು ಸಂಘಟನೆ ಆಪಾದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News