ಬುಧವಾರ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಲಿರುವ ಅಮಿತ್ ಶಾ

Update: 2018-06-05 15:33 GMT

ಹೊಸದಿಲ್ಲಿ, ಜೂ. 5: ಸಾರ್ವತ್ರಿಕ ಚುನಾವಣೆಯ ಪೂರ್ವಭಾವಿಯಾಗಿ ಪ್ರಮುಖ ಬೆಳವಣಿಗೆಯೊಂದರಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮುಂಬೈಯಲ್ಲಿ ಬುಧವಾರ ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಲಿದ್ದಾರೆ.

ಪಾಲ್ಘಾರ್ ಉಪಚುನಾವಣೆಯಲ್ಲಿ ಎರಡು ಮಿತ್ರ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದ ಬಳಿಕ ಈ ಭೇಟಿ ನಡೆಯಲಿರುವುದರಿಂದ ಮಹತ್ವದ್ದೆಂದು ಹೇಳಲಾಗಿದೆ. ‘‘ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಲು ಅಮಿತ್ ಶಾ ಅವರು ಸಮಯ ಕೇಳಿದ್ದಾರೆ. ಅವರಿಗೆ ಬುಧವಾರ ಸಂಜೆ 6 ಗಂಟೆಗೆ ಸಮಯ ಅವಕಾಶ ನೀಡಲಾಗಿದೆ’’ ಎಂದು ಸೇನಾ ಸಂಸದ ರಾವತ್ ತಿಳಿಸಿದ್ದಾರೆ. ಅಮಿತ್ ಶಾ ಅವರು ಉದ್ಧವ್ ಠಾಕ್ರೆ ಅವರನ್ನು ಬುಧವಾರ ಬೆಳಗ್ಗೆ 6 ಗಂಟೆಗೆ ‘ಮಾತೋಶ್ರೀ’ಯಲ್ಲಿ ಭೇಟಿಯಾಗಲಿದ್ದಾರೆ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News