ಕುಪ್ವಾರದಲ್ಲಿ ಐವರು ಉಗ್ರರ ಹತ್ಯೆ

Update: 2018-06-10 06:17 GMT

ಶ್ರೀನಗರ, ಜೂ.10: ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ಭದ್ರತಾ ಪಡೆದ ಪಡೆಗಳು ರವಿವಾರ ನಡೆಸಿದ ಕಾರ್ಯಾಚರಣೆಯಲ್ಲಿ ಐವರು ಉಗ್ರರನ್ನು ಹೊಡೆದುರುಳಿಸಿದ್ದಾರೆ.

ಕುಪ್ವಾರ ಜಿಲ್ಲೆಯ ಕರನ್ ಸೆಕ್ಟರ್ ನ ಗಡಿ ನಿಯಂತ್ರಣಾ ರೇಖೆಯ ಬಳಿ ಉಗ್ರರು ಭಾರತದೊಳಕ್ಕೆ ನುಸುಳಲು ಯತ್ನಿಸಿದಾಗ ಭದ್ರತಾ ಪಡೆಗಳು  ಗುಂಡು ಹಾರಿಸಿ ಉಗ್ರರನ್ನು ಹೊಡೆದುರುಳಿಸಿದರು ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ. 

ಕಳೆದ ಮೇ 16ರಿಂದ ಈ ತನಕ 16 ಉಗ್ರರನ್ನು ಕೊಲ್ಲಲಾಗಿದೆ     ಎಂದು ಅವರು ಮಾಹಿತಿ ನೀಡಿದ್ದಾರೆ.                                    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News