ಮರದಿಂದ ಮಾವಿನಹಣ್ಣು ಕಿತ್ತ ಬಾಲಕನ ಗುಂಡಿಟ್ಟು ಹತ್ಯೆ: ಆರೋಪ

Update: 2018-06-22 07:10 GMT

ಪಾಟ್ನಾ, ಜೂ.22: ಮರದಿಂದ ಮಾವಿನಹಣ್ಣುಗಳನ್ನು ಕಿತ್ತ ಕಾರಣಕ್ಕೆ 10 ವರ್ಷದ ಬಾಲಕನೊಬ್ಬನನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಬಿಹಾರದ ಖಗಾರಿಯಾ ಜಿಲ್ಲೆಯ ಪತ್ರಹಾ ಗ್ರಾಮದಲ್ಲಿ ನಡೆದಿದೆ ಎನ್ನಲಾಗಿದೆ.

"ಮಾವಿನಹಣ್ಣುಗಳನ್ನು ಕೊಯ್ದದ್ದಕ್ಕಾಗಿ ತನ್ನ ಪುತ್ರನನ್ನು ಗುಂಡಿಕ್ಕಿ ಕೊಲ್ಲಲಾಯಿತು ಎಂದು ಬಾಲಕ ಸತ್ಯಂ ಕುಮಾರ್ ತಂದೆ ಮಕುನಿ ಯಾದವ್ (38) ಆರೋಪಿಸಿದ್ದಾರೆ. ಸ್ಥಳದಲ್ಲಿದ್ದ ಇತರ ಮಕ್ಕಳು ಪರಾರಿಯಾಗಿದ್ದು, ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ" ಎಂದು ಪೊಲೀಸ್ ಅಧಿಕಾರಿ ದೀಪಕ್ ಕುಮಾರ್ ಯಾದವ್ ಎಂಬವರು ಹೇಳಿದ್ದಾರೆ.

ರಾಮಾಶಿಶ್ ಯಾದವ್ ಎಂಬಾತ ತನ್ನ ಪುತ್ರನಿಗೆ ಗುಂಡಿಕ್ಕಿದ್ದಾನೆ ಎಂದು ಮಕುನಿ ಯಾದವ್ ಆರೋಪಿಸಿದ್ದಾರೆ. "ತನಿಖೆ ನಡೆಯುತ್ತಿದ್ದು, ಶೀಘ್ರವೇ ಸತ್ಯಾಂಶ ಹೊರಬೀಳಲಿದೆ" ಎಂದು ದೀಪಕ್ ಕುಮಾರ್ ಯಾದವ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News