‘ದುರ್ಗಂಧಮಯ’ ಹೇಳಿಕೆ

Update: 2018-06-22 18:56 GMT

ಮಾನ್ಯರೇ,

ಮಂಗಳೂರಿನ ಪಬ್ ದಾಳಿ ಪ್ರಕರಣ, ಸಿಂದಗಿಯಲ್ಲಿ ಪಾಕ್ ಧ್ವಜ ಹಾರಾಟ, ಹುಬ್ಬಳ್ಳಿ ನ್ಯಾಯಾಲಯಗಳ ಆವರಣದಲ್ಲಿ ಬಾಂಬ್ ಸ್ಫೋಟ ಮುಂತಾದ ದೇಶದ್ರೋಹಿ ಪ್ರಕರಣಗಳಲ್ಲಿ ಆರೋಪಿಯಾಗಿ ದೇಶಾದ್ಯಂತ ಕುಖ್ಯಾತಿ ಗಳಿಸಿರುವಂತಹ ಶ್ರೀರಾಮ ಸೇನೆ ಎಂಬ ಸಂಘ ಪರಿವಾರದ ಒಂದು ತುಂಡು ಸಂಘಟನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಂಬವರು ಗೌರಿ ಹತ್ಯೆಗೆ ಸಂಬಂಧಿಸಿದಂತೆ ಇತ್ತೀಚೆಗೆ ನೀಡಿದ ‘‘ಗೌರಿ ಹತ್ಯೆಗೂ ಮೋದಿಗೂ ಯಾವ ಸಂಬಂಧ, ರಾಜ್ಯದಲ್ಲಿ ನಾಯಿ ಸತ್ತರೆ ಅವರೇಕೆ ಉತ್ತರ ಕೊಡಬೇಕು?’’ ಎಂಬ ಸಾರ್ವಜನಿಕ ಹೇಳಿಕೆಯ ನಂತರದಲ್ಲಿ ಹರಿದಾಡುತ್ತಿರುವ ಇತ್ತೀಚಿನ ವರದಿಗಳ ಪ್ರಕಾರ ಕಳೆದ ನಾಲ್ಕು ವರ್ಷಗಳಿಂದೀಚೆಗೆ ಎಗ್ಗಿಲ್ಲದೆ ಹೊರಬೀಳುತ್ತಿರುವ ಇಂತಹ ಹೇಳಿಕೆಗಳಿಂದಾಗಿ ದೇಶವಿಡೀ ದುರ್ಗಂಧಮಯವಾಗುವುದರೊಂದಿಗೆ ಬಯಲುಶೌಚಮುಕ್ತ ಭಾರತದ ಕನಸು ನುಚ್ಚುನೂರಾಗುತ್ತಿದೆಯಲ್ಲಾ ಎಂದು ಅದರ ರೂವಾರಿಗೆ ಭಾರೀ ಚಿಂತೆಯಾಗಿಲ್ಲವಂತೆ! 

Writer - -ಸುರೇಶ್ ಭಟ್, ಬಾಕ್ರಬೈಲ್

contributor

Editor - -ಸುರೇಶ್ ಭಟ್, ಬಾಕ್ರಬೈಲ್

contributor

Similar News