ದಲಿತರ ಕೂದಲು ಕತ್ತರಿಸಿದ್ದಕ್ಕಾಗಿ ಕ್ಷೌರಿಕನಿಗೆ ಥಳಿಸಿದ ಮೇಲ್ಜಾತಿಯ ಗುಂಪು: ಆರೋಪ

Update: 2018-06-26 10:06 GMT
ಸಾಂದರ್ಭಿಕ ಚಿತ್ರ

ಅಹ್ಮದಾಬಾದ್, ಜೂ.26: ದಲಿತರ ಕೂದಲು ಕತ್ತರಿಸಿದ್ದಕ್ಕಾಗಿ ಕ್ಷೌರಿಕನೊಬ್ಬನಿಗೆ ಮೇಲ್ಜಾತಿಯ ಗುಂಪೊಂದು ಥಳಿಸಿದ ಘಟನೆ ಇಲ್ಲಿನ ಮೆಹ್ಸಾನ ಜಿಲ್ಲೆಯ ಉಮ್ರೇಚಾ ಗ್ರಾಮದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

ಗ್ರಾಮದಲ್ಲಿ ಕ್ಷೌರದಂಗಡಿ ನಡೆಸುತ್ತಿರುವ ತನ್ನ ಪುತ್ರ ಜಿಗಾರ್ ಮೇಲೆ ನಾಲ್ವರು ದಾಳಿ ನಡೆಸಿದ್ದಾರೆ ಎಂದು ಜಾಸಿಬೆನ್ ಭಗವಾನ್ ದಾಸ್ ಎಂಬ ಮಹಿಳೆ ಸತ್ಲಾಸ್ನಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಗೋವಿಂದ್ ಚೌಧರಿ, ನಂಜಿ ಚೌಧರಿ, ರಾಜೇಶ್ ಚೌಧರಿ ಹಾಗು ವಸಂತ್ ಚೌಧರಿ ತನ್ನ ಪುತ್ರನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ದಲಿತರ ಕೂದಲು ಕತ್ತರಿಸದಂತೆ 10 ದಿನಗಳ ಮೊದಲು ತನ್ನ ಪುತ್ರನಿಗೆ ಆರೋಪಿಗಳು ಎಚ್ಚರಿಸಿದ್ದರು. ಆದರೆ ಜಿಗಾರ್ ಇದಕ್ಕೆ ಕಿವಿಗೊಡಲಿಲ್ಲ. ದಲಿತರು ಆತನ ಅಂಗಡಿಗೆ ಪ್ರವೇಶ ಮಾಡಿದ್ದನ್ನೇ ನೆಪವಾಗಿರಿಸಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News