ತ್ರಿವಳಿ ತಲಾಕ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಶಾಯರಾ ಬಾನೊ ಬಿಜೆಪಿ ಸೇರಲು ಸಜ್ಜು
Update: 2018-07-06 16:56 GMT
ಹೊಸದಿಲ್ಲಿ, ಜು.6: ತ್ರಿವಳಿ ತಲಾಕ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಉತ್ತರಾಖಂಡದ ಮಹಿಳೆ ಶಾಯರಾ ಬಾನೊ ಬಿಜೆಪಿ ಸೇರಲು ಸಜ್ಜಾಗಿದ್ದಾರೆ ಎಂದು hindustantimes.com ವರದಿ ಮಾಡಿದೆ.
ತನ್ನ ತಂದೆ ಇಕ್ಬಾಲ್ ಅಹ್ಮದ್ ಜೊತೆ ಬಿಜೆಪಿ ರಾಜ್ಯ ಅಧ್ಯಕ್ಷ ಅಜಯ್ ಭಟ್ ರನ್ನು ಭೇಟಿಯಾದ ಅವರು ಪಕ್ಷ ಸೇರುವ ಇಂಗಿತ ವ್ಯಕ್ತಪಡಿಸಿದರು ಎನ್ನಲಾಗಿದೆ. "ಅವರು ಇಂದು ನಮ್ಮನ್ನು ಭೇಟಿಯಾಗಿದ್ದಾರೆ. ಅವರು ಇಂದು ಜಾಗತಿಕ ವ್ಯಕ್ತಿತ್ವವಾಗಿದ್ದು, ನಮ್ಮ ಪಕ್ಷಕ್ಕೆ ಅವರನ್ನು ಸ್ವಾಗತಿಸಲು ನಮಗೆ ಸಂತೋಷವಾಗಿದೆ" ಎಂದು ಭಟ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ,
ತ್ರಿವಳಿ ತಲಾಕ್ ವಿಷಯಕ್ಕೆ ಸಂಬಂಧಿಸಿ ಶಾಯರಾ ಬಾನೊ ಕೋರ್ಟ್ ಮೆಟ್ಟಿಲೇರಿದ್ದರು. "ನಾನು ಇಂದು ಬಿಜೆಪಿ ನಾಯಕರನ್ನು ಭೇಟಿಯಾಗಿ ಪಕ್ಷ ಸೇರುವ ಬಗ್ಗೆ ಮಾತನಾಡಿದ್ದೇನೆ" ಎಂದು ಶಾಯರಾ ಹೇಳಿದ್ದಾರೆ. "ಪ್ರಧಾನಿ ನರೇಂದ್ರ ಮೋದಿಯವರ ಸಹಕಾರದಿಂದ ನಮಗೆ ನ್ಯಾಯ ದೊರಕಿದೆ" ಎಂದು ಅವರು ಇದೇ ಸಂದರ್ಭ ಹೇಳಿದರು.