‘ಹಂಸಕಾವ್ಯ’ ಪ್ರಶಸ್ತಿಗೆ ಆಹ್ವಾನ

Update: 2018-07-16 18:32 GMT

 ಮಾನ್ಯರೇ,

ಕಾವ್ಯ ಸಾಹಿತ್ಯವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮಂಗಳೂರಿನ ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನವು ಪ್ರತಿವರ್ಷ ಕೊಡುತ್ತಾ ಬಂದಿರುವ ‘ಹಂಸಕಾವ್ಯ’ ರಾಷ್ಟ್ರೀಯ ಪ್ರಶಸ್ತಿಗೆ ಪ್ರಕಟಿತ ಕವನ ಸಂಕಲನಗಳನ್ನು ಆಹ್ವಾನಿಸಲಾಗಿದೆ.
ಪ್ರಶಸ್ತಿಯು 10,000 ರೂ. ನಗದು, ಚಿನ್ನದ ಪದಕ, ಪ್ರಶಸ್ತಿ ಫಲಕ ಹಾಗೂ ಗೌರವ ಸನ್ಮಾನಗಳನ್ನು ಒಳಗೊಂಡಿದೆ.
ಆಸಕ್ತ ಹಿರಿಯ, ಕಿರಿಯ ಕವಿಗಳು ತಮ್ಮ 2008ರ ಜೂನ್ ಅಥವಾ ಅದರ ನಂತರ ಪ್ರಕಟವಾಗಿರುವ ಕವನ ಸಂಕಲನಗಳ 5 ಪ್ರತಿಗಳನ್ನು
ಕಾ. ವೀ. ಕೃಷ್ಣದಾಸ್, ಅಧ್ಯಕ್ಷರು,
ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನ,
 ನಂ.107, ಮೊದಲನೇ ಮಹಡಿ, ಶಿವಪ್ರಸಾದ್ ಗೋಲ್ಡ್ ವಸತಿ ಸಮುಚ್ಚಯ, ಲ್ಯಾಂಡ್‌ಲಿಂಕ್ಸ್ ಮುಖ್ಯ ರಸ್ತೆ, ದೇರೆಬೈಲ್, ಕೊಂಚಾಡಿ, ಮಂಗಳೂರು-575006 ಈ ವಿಳಾಸಕ್ಕೆ ಸೆಪ್ಟಂಬರ್ 6ನೇ ತಾರೀಖಿನೊಳಗೆ ತಲುಪುವಂತೆ ಕಳುಹಿಸಿಕೊಡಲು ತಿಳಿಸಲಾಗಿದೆ. ಹೆಚ್ಚಿನ ವಿವರಗಳಿಗೆ ಫೋನ್: 8310388415ಕ್ಕೆ ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News