ಸ್ವಾಮಿ ಅಗ್ನಿವೇಶ್‌ಗೆ ಹಲ್ಲೆ ನಾಚಿಕೆಗೇಡಿನ ವಿಚಾರ: ಬಾಬಾ ರಾಮ್‌ದೇವ್

Update: 2018-07-19 18:17 GMT

ಭೋಪಾಲ, ಜು. 19: ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿರುವ ಯೋಗ ಗುರು ಬಾಬಾ ರಾಮ್ ದೇವ್, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ತಮ್ಮ ನಿಲುವು ವ್ಯಕ್ತಪಡಿಸಿವ ಹಕ್ಕು ಇದೆ. ಆದರೆ, ಅವರ ಮೇಲೆ ದಾಳಿ ನಡೆಸುವುದು ನಾಚಿಕೆಗೇಡಿನ ವಿಚಾರ ಎಂದಿದ್ದಾರೆ.

ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಲು ಜಾರ್ಖಂಡ್‌ನ ಪಾಕೂರ್‌ಗೆ ಮಂಗಳವಾರ ಆಗಮಿಸಿದ ಸಂದರ್ಭ ಅಗ್ನಿವೇಶ್ ಅವರ ಮೇಲೆ ಗುಂಪೊಂದು ಹಲ್ಲೆ ನಡೆಸಿತ್ತು. ಜೀತ ಕಾರ್ಮಿಕರ ವಿರುದ್ಧ ಹೋರಾಟ ನಡೆಸುತ್ತಿದ್ದ ಸ್ವಾಮಿ ಅಗ್ನಿವೇಶ್ ಅವರನ್ನು ಗುಂಪು ನಿಂದಿಸಿತು ಹಾಗೂ ಥಳಿಸಿತ್ತು. ತಾನು ಹಿಂದೂಗಳ ವಿರುದ್ಧ ಮಾತನಾಡುತ್ತೇನೆ ಎಂದು ಆರೋಪಿಸಿ ಬಿಜೆಪಿಯ ಸಹ ಸಂಸ್ಥೆಯ ಕಾರ್ಯಕರ್ತರ ತನ್ನ ಮೇಲೆ ದಾಳಿ ನಡೆಸಿದ್ದಾರೆ ಎಂದು ಅಗ್ನಿವೇಶ್ ಆಪಾದಿಸಿದ್ದರು. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕು ಇದೆ. ಯಾರೊಬ್ಬರ ನಿಲುವುಗಳ ಕಾರಣಕ್ಕೆ ಹಲ್ಲೆ ನಡೆಸುವುದು ನಾಚಿಕೆಗೇಡಿನ ವಿಚಾರ ಎಂದು ರಾಮ್‌ದೇವ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News