ನಕಲಿ ಎನ್‌ಕೌಂಟರ್ ವಿರೋಧಿಸಿ ಸೇನೆಯ ವಿರುದ್ಧ ಏಕಾಂಗಿ ಸಮರ ಸಾರಿದ ಯೋಧ ನಾಪತ್ತೆ!

Update: 2018-08-18 18:38 GMT

ಭಾಗ-1

ಕೇಂದ್ರ ಸರಕಾರಕ್ಕೆ ತಲೆನೋವಾಗಿರುವ ವಿಷಯವೆಂದರೆ ಸದ್ಯ ಸೇನೆಯ ಮೂರನೇ ಉಪವಿಭಾಗದ ಮೇಲೆ ಈ ಆರೋಪವನ್ನು ಹೊರಿಸಲಾಗಿದೆ ಮತ್ತು ಈ ಉಪವಿಭಾಗವು ಭಾರತೀಯ ಗಡಿಯ ಅತ್ಯಂತ ವಿಸ್ತಾರವಾದ ಪ್ರದೇಶದ ಮೇಲೆ ಕಣ್ಗಾವಲು ಇರಿಸಿಕೊಂಡಿದೆ. ಮೂರು ಅಂತರ್‌ರಾಷ್ಟ್ರೀಯ ಗಡಿಗಳು ಸೇರಿದಂತೆ ಈ ಉಪವಿಭಾಗವು ಬಂಡಾಯನಿಗ್ರಹ ಪಡೆಯಾಗಿಯೂ ಕಾರ್ಯಾಚರಿಸುತ್ತದೆ.

ಲೆಫ್ಟಿನೆಂಟ್ ಕರ್ನಲ್ ಧರಮ್‌ವೀರ್ ಸಿಂಗ್ ಭಾರತೀಯ ಸೇನೆಯಲ್ಲಿ ಅತ್ಯಂತ ಕೆಳಮಟ್ಟದಿಂದ ಮೇಲ್ಮಟ್ಟಕ್ಕೆ ಬೆಳೆದು ಬಂದವರು. ಸೇನೆಯ ಮೂರನೇ ಉಪವಿಭಾಗದ ಗುಪ್ತಚರ ಮತ್ತು ಕಣ್ಗಾವಲು ವಿಭಾಗದ ಅಧಿಕಾರಿಯಾಗಿದ್ದ ಸಿಂಗ್ ವಿಶೇಷ ಪಡೆ ಮತ್ತು 1999ರ ಕಾರ್ಗಿಲ್ ಯುದ್ಧದಲ್ಲೂ ಪಾಲ್ಗೊಂಡಿದ್ದಾರೆ. ಸದ್ಯ ತಮ್ಮ 40ರ ಹರೆಯದಲ್ಲಿರುವ ಸಿಂಗ್ ಒಂದು ವಿಷಮ ಪರಿಸ್ಥಿತಿಯಲ್ಲಿ ಸಿಲುಕಿದ್ದು ಕೇವಲ ಅವರ ಮೇಲೆ ಮಾತ್ರವಲ್ಲ ಭಾರತೀಯ ಸೇನೆಯ ಮೇಲೂ ಅದರ ಪರಿಣಾಮ ಬಹಳ ಗುರುತರವಾಗಲಿದೆ.

ತನ್ನದೇ ಸೇನೆಯ ಕ್ರೂರ ಕೃತ್ಯಗಳನ್ನು ಬಯಲಿ ಗೆಳೆಯು ತ್ತಿರುವ ಸಿಂಗ್‌ರನ್ನು ಅವರು ನಿಯೋಜನೆ ಗೊಂಡಿರುವ ಮಣಿಪುರದ ಇಂಪಾಲ ಕಣಿವೆಯ ಜನರು ಪ್ರಜ್ಞಾವಂತ ಸೈನಿಕ ಎಂದು ಕರೆಯುತ್ತಾರೆ. ಆದರೆ ಅವರದ್ದೇ ವಿಭಾಗಕ್ಕೆ ಸಿಂಗ್ ಖಳನಾಗಿ ಬದಲಾಗಿದ್ದಾರೆ. ಅವರನ್ನು ವಶಕ್ಕೆ ತೆಗೆದು ಕೊಂಡಿರುವ ಸೇನೆ ಅವರ ಮೇಲೆ ಅವಿಧೇಯತೆ ಸೇರಿದಂತೆ ಹಲವು ಆರೋಪಗಳನ್ನು ಹೊರಿಸಿದೆ. ಸಿಂಗ್ ಸದ್ಯ ಎಲ್ಲಿದ್ದಾರೆ ಎಂದು ಯಾರಿಗೂ ತಿಳಿದಿಲ್ಲ ಮತ್ತು ಅವರ ಸ್ನೇಹಿತರಂತೂ ಸಿಂಗ್ ಅವರನ್ನು ಮುಗಿಸಲಾಗಿದೆ ಎಂದೇ ಆತಂಕಪಡುತ್ತಾರೆ.
ಸ್ಫೋಟಕ ಅಫಿದಾವಿತ್
ನಾಗಾಲ್ಯಾಂಡ್‌ನ ದೀಮಾಪುರ ಸಮೀಪದ ರಂಗಪಹರ್‌ನಲ್ಲಿ ಮುಖ್ಯ ಕಚೇರಿ ಹೊಂದಿರುವ ಸೇನೆಯ ಮೂರನೇ ಉಪವಿಭಾಗದ ಗುಪ್ತಚರ ವಿಭಾಗ 2010ರಿಂದ ಮಣಿಪುರದ ತೀವ್ರವಾದಿಗಳನ್ನು ವ್ಯವಸ್ಥಿತ ವಾಗಿ ನಕಲಿ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡುತ್ತಿದೆ ಎಂದು ಲೆ.ಕ. ಸಿಂಗ್ ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ತಮ್ಮ ಉನ್ನತಾಧಿಕಾರಿ ಗಳಿಗೆ ಬರೆದ ಪತ್ರದಲ್ಲಿ ಆರೋಪಿಸುವ ಮೂಲಕ ವಿವಾದ ಸೃಷ್ಟಿಸಿದ್ದರು.
ಅಂದು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಆದರೆ ಜುಲೈ ಒಂದರಂದು ಸಿಂಗ್‌ರನ್ನು ಅವರದ್ದೇ ವಿಭಾಗದ ಅಧಿಕಾರಿಗಳು ಇಂಪಾಲದ ಎಂ ಸೆಕ್ಟರ್‌ನಿಂದ ವಶಕ್ಕೆ ಪಡೆದು ಕೊಂಡಿದ್ದರು. ಅವರು ತಮ್ಮ ಸ್ಥಳದಲ್ಲಿ ನಿಗದಿತ ಸಮಯಕ್ಕೆ ಬಾರದೆ ಅವಿಧೇಯತೆ ತೋರಿದ್ದಾರೆ ಮತ್ತು ತಮ್ಮ ಕುಟುಂಬ ವನ್ನು ತಮ್ಮ ಕರ್ತವ್ಯದ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎಂದು ಅಧಿಕಾರಿಗಳು ಸಿಂಗ್ ವಿರುದ್ಧ ಆಪಾದನೆ ಮಾಡಿದ್ದರು.
ಘಟನೆ ನಡೆದ ಒಂದು ದಿನದ ಮೊದಲು ಮುಂಬೈಯಿಂದ ಇಂಪಾಲಾ ತಲುಪಿದ ಧರಮ್‌ವೀರ್ ಸಿಂಗ್ ಅವರ ಪತ್ನಿ 35ರ ಹರೆಯದ ರಂಜು ಸಿಂಗ್ ಜುಲೈ ಮೂರರಂದು ಪತ್ರಿಕಾ ಗೋಷ್ಠಿ ಕರೆದು ತನ್ನ ಪತಿಯನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದರು. ಜುಲೈ 11ರಂದು ಕಾಣಿಸಿಕೊಂಡ ಸಿಂಗ್ ತಮ್ಮ ವಿಭಾಗದ ವಿರುದ್ಧ ಮತ್ತೆ ಆರೋಪ ಮಾಡಿ ದರು. ಈ ಬಾರಿ ಅವರು ಸೆಪ್ಟಂಬರ್‌ನಲ್ಲಿ ಬರೆದಿದ್ದ ಪತ್ರದಲ್ಲಿ ಉಲ್ಲೇಖಿಸಿದ್ದ ನಕಲಿ ಎನ್‌ಕೌಂಟರ್‌ಗಳ ಆರೋಪವನ್ನು ಮಾಡಿ ಮಣಿಪುರ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿದರು.
ಸಿಂಗ್ ಪುನಃ ನಾಪತ್ತೆಯಾದ ಸಂದರ್ಭದಲ್ಲಿ ಅವರ ಪತ್ನಿ ಜುಲೈ 20ರಂದು ತಮ್ಮ ಪತಿಯನ್ನು ಹುಡುಕಿಕೊಡುವಂತೆ ಮಣಿಪುರ ಉಚ್ಚ ನ್ಯಾಯಾಲಯದಲ್ಲಿ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದರು. ಒಂದು ವಾರದ ನಂತರ ಲೆ. ಕರ್ನಲ್ ಅವರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಯಿತು. ಈ ವೇಳೆ ಮಾತನಾಡಿದ ರಂಜು ಸಿಂಗ್, ನಾನವರ ಕಣ್ಣಲ್ಲಿ ನೋವನ್ನು ಕಂಡೆ. ಅವರನ್ನು ಹಿಂಸಿಸಲಾಗಿದೆ ಎಂಬ ಬಗ್ಗೆ ನನಗೆ ಆತಂಕವಿದೆ ಎಂದು ತಿಳಿಸಿದ್ದಾರೆ.

ಸದ್ಯ ಪ್ರಕರಣವು ನ್ಯಾಯಾಲಯದ ಮುಂದೆ ಇರುವುದರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಧರಮ್‌ವೀರ್ ಸಿಂಗ್ ಯಾವುದೇ ರೀತಿಯ ಹೇಳಿಕೆಗಳನ್ನು ನೀಡುವಂತಿಲ್ಲ ಎಂದು ನ್ಯಾಯಾಲಯ ಆಗಸ್ಟ್ ಒಂದರಂದು ಆದೇಶ ನೀಡಿರುವ ಹಿನ್ನೆಲೆ ಯಲ್ಲಿ ಮಾಧ್ಯಮಗಳು ಈ ಬಗ್ಗೆ ಹೆಚ್ಚಿನ ವರದಿಯನ್ನು ಪಡೆಯಲು ಸಾಧ್ಯವಾಗಿಲ್ಲ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ಭಾವಚಿತ್ರಗಳನ್ನು ಪ್ರಕಟಿಸದಂತೆಯೂ ನ್ಯಾಯಾಲಯ ಮಾಧ್ಯಮಗಳಿಗೆ ಸೂಚನೆ ನೀಡಿದೆ.
ಇಷ್ಟರವರೆಗೆ ಸೇನೆ ಈ ಪ್ರಕರಣದಲ್ಲಿ ತುಟಿ ಬಿಚ್ಚಿಲ್ಲ. ಆದರೆ ಆಗಸ್ಟ್ 17ರ ಒಳಗಾಗಿ ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಸೇನಾಧಿಕಾರಿಗಳಿಗೆ ನ್ಯಾಯಾಲಯ ಸೂಚನೆ ನೀಡಿದೆ. ಸದ್ಯ ಸಿಂಗ್ ಎಲ್ಲಿದ್ದಾರೆ ಎಂದು ಯಾರಿಗೂ ತಿಳಿದಿಲ್ಲ. ಆದರೆ ಅವರ ಅಫಿದಾವಿತ್ ಇಡೀ ಸೇನಾಪಡೆಯನ್ನೇ ಅಲುಗಾಡಿಸಿದೆ. ಸೇನೆಯ ಮೂರನೇ ಉಪವಿಭಾಗದ ಅಧಿಕಾರಿಗಳು ಯಾವ ರೀತಿ ಮೂವರು ಶಂಕಿತ ಉಗ್ರರನ್ನು ಹತ್ಯೆ ಮಾಡಿದರು ಮತ್ತು ಇತರ ಇಬ್ಬರನ್ನು ಒತ್ತೆಯಾಳುಗಳಾಗಿ ಹಿಡಿದಿಟ್ಟು ನಂತರ ಯಾವ ರೀತಿ ಹತ್ಯೆ ಮಾಡಲಾಯಿತು ಎಂಬ ಕುರಿತು ವಿವರವಾದ ಮಾಹಿತಿಯನ್ನು ಸಿಂಗ್ ತಮ್ಮ ಅಫಿದಾವಿತ್‌ನಲ್ಲಿ ನೀಡಿದ್ದಾರೆ.
ಕೇಂದ್ರ ಸರಕಾರಕ್ಕೆ ತಲೆನೋವಾಗಿರುವ ವಿಷಯವೆಂದರೆ ಸದ್ಯ ಸೇನೆಯ ಮೂರನೇ ಉಪವಿಭಾಗದ ಮೇಲೆ ಈ ಆರೋಪವನ್ನು ಹೊರಿಸಲಾಗಿದೆ ಮತ್ತು ಈ ಉಪವಿಭಾಗವು ಭಾರತೀಯ ಗಡಿಯ ಅತ್ಯಂತ ವಿಸ್ತಾರವಾದ ಪ್ರದೇಶದ ಮೇಲೆ ಕಣ್ಗಾವಲು ಇರಿಸಿಕೊಂಡಿದೆ. ಮೂರು ಅಂತರ್‌ರಾಷ್ಟ್ರೀಯ ಗಡಿಗಳು ಸೇರಿದಂತೆ ಈ ಉಪವಿಭಾಗವು ಬಂಡಾಯನಿಗ್ರಹ ಪಡೆಯಾ ಗಿಯೂ ಕಾರ್ಯಾಚರಿಸುತ್ತದೆ. ಮುಖ್ಯವಾಗಿ ಭಾರತೀಯ ಸೇನೆಯ ಪ್ರತಿಷ್ಠಿತ ಅಧಿಕಾರಿಗಳಾದ ಹಾಲಿ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ನಿವೃತ್ತ ಜನರಲ್ ದಲ್ಬೀರ್ ಸಿಂಗ್ ಸುಹಾಗ್ ಅವರನ್ನು ಈ ಉಪವಿಭಾಗ ನೀಡಿದೆ.
  ರೇಣು ತಕೆಲಂಬಮ್ ಕಾನೂನೇತರ ಹತ್ಯೆಗಳ ಸಂತ್ರಸ್ತರ ಕುಟುಂಬ ಎಂಬ ಸಂಘಟನೆಯ ಅಧ್ಯಕ್ಷರಾಗಿದ್ದಾರೆ. ಓರ್ವ ಶಂಕಿತ ಬಂಡುಕೋರನಾಗಿದ್ದ ಅವರ ಪತಿಯನ್ನು 2007ರಲ್ಲಿ ಭಾರತೀಯ ಸೇನೆ ಗುಂಡು ಹಾರಿಸಿ ಹತ್ಯೆ ಮಾಡಿತ್ತು. ಹೆಚ್ಚಿನ ಸಮಯ ನ್ಯಾಯಾಲಯದಲ್ಲೇ ಕಳೆಯುವ ರೇಣು ಅದರ ಹೊರತಾಗಿ ಕೂದಲು ಮತ್ತು ಚರ್ಮ ರಕ್ಷಣಾ ಪರಿಣತೆಯಾಗಿ ಕೆಲಸ ಮಾಡುತ್ತಾರೆ. ಅವರು ದಾಖಲಿಸಿರುವ ದೂರಿನ ವಿಚಾರಣೆಯ ವೇಳೆ ಈ ವಾರ ಸರ್ವೋಚ್ಚ ನ್ಯಾಯಾಲಯ ಮಾನವಹಕ್ಕುಗಳ ಉಲ್ಲಂಘನೆ ಕುರಿತಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು ತರಾಟೆಗೆ ತೆಗೆದುಕೊಂಡಿದೆ. ಉಗ್ರರ ಜಾಲವನ್ನು ಭೇದಿಸಿ ಬಂಡುಕೋರರ ಚಲನವಲನಗಳನ್ನು ತಿಳಿಯಲು ಕ್ರಿಯಾತ್ಮಕ ಗುಪ್ತಚರ ಜಾಲವನ್ನು ಸ್ಥಾಪಿಸಿದ ಕಾರಣಕ್ಕೆ ಕ್ಯಾಪ್ಟನ್ ರುಬಿನಾ ಕೌರ್ ಕೀರ್ ಅವರಿಗೆ 2010ರಲ್ಲಿ ಸೇನಾ ಮೆಡಲ್ ನೀಡಿ ಗೌರವಿಸಲಾಗಿತ್ತು.
ರುಬಿನಾ ಕೌರ್ ಕೀರ್ ಅವರು ತಮ್ಮ ದೃಢ ನಿಶ್ಚಯ, ನಿರಂತರ ದಣಿವರಿಯದ ಪ್ರಯತ್ನ ಮತ್ತು ತಮ್ಮ ವೈಯಕ್ತಿಕ ಸುರಕ್ಷತೆಯ ಬಗ್ಗೆ ಚಿಂತಿಸದೆ ಬಂಡುಕೋರರ ಹಾವಳಿ ಅತ್ಯಂತ ಹೆಚ್ಚಾಗಿರುವ ಪ್ರದೇಶದಲ್ಲಿ ಉಗ್ರರ ಜಾಲವನ್ನು ಭೇದಿಸಿ ಬಂಡುಕೋರರ ಚಲನವಲನಗಳನ್ನು ತಿಳಿಯಲು ತಮ್ಮದೇ ಕ್ರಿಯಾತ್ಮಕ ಗುಪ್ತಚರ ಜಾಲವನ್ನು ಸ್ಥಾಪಿಸಿದ್ದಾರೆ ಎಂದು ಪ್ರಶಸ್ತಿಪತ್ರದಲ್ಲಿ ಬರೆಯಲಾಗಿತ್ತು.

ಅಂದಿನ ಕಮಾಂಡಿಂಗ್ ಅಧಿಕಾರಿಯಾಗಿದ್ದ ಕರ್ನಲ್ ಶ್ರೀಕುಮಾರ್, ಕ್ಯಾ. ಕೌರ್ ಅವರಿಗೆ ಶೌರ್ಯ ಪ್ರಶಸ್ತಿ ನೀಡುವಂತೆ 2010ರ ಜೂನ್‌ನಲ್ಲಿ ಶಿಫಾರಸು ಮಾಡಿದ್ದರು. ಕರ್ನಲ್ ಶ್ರೀಕುಮಾರ್ ಅವರ ಪ್ರಕಾರ, ಕ್ಯಾ.ಕೌರ್ ಅವರ ಅವಿರತ ಪ್ರಯತ್ನದಿಂದ ಮಣಿಪುರದ ನಿಷೇಧಿತ ಮೀತಯಿ ಬಂಡುಕೋರ ಸಂಘಟನೆ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ)ಯ ಮೂರು ಸದಸ್ಯರನ್ನು ಹತ್ಯೆ ಮಾಡಲು ಸಾಧ್ಯವಾಗಿತ್ತು. ಬಂಡುಕೋರರಾದ ಆರ್.ಕೆ ರೋಶನ್, ತೌನಜಮ್ ಪ್ರೇಮ್ ಮತ್ತು ಟಿ.ಎಚ್ ನವೊಬಿ ಸಿಂಗ್ ಹತ್ಯೆಯಿಂದ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರಗಳು, ಆಯುಧಗಳು ಮತ್ತು ಇತರ ಯುದ್ಧ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲೂ ಸಾಧ್ಯವಾಗಿತ್ತು. ಆದರೆ ಲೆ.ಕರ್ನಲ್ ಸಿಂಗ್ ಪ್ರಕಾರ ಅಲ್ಲಿ ನಡೆದಿರುವುದೇ ಬೇರೆ. ಸಿಂಗ್ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅಫಿದಾವಿತ್‌ನಲ್ಲಿ ಸೇನಾಧಿಕಾರಿಗಳು ನೀಡಿರುವ ಹೇಳಿಕೆಗೆ ವಿರುದ್ಧವಾದ ವಾದವನ್ನು ಮಂಡಿಸಿದ್ದಾರೆ.

ಕರ್ನಲ್ ಸಿಂಗ್ ಹೇಳಿಕೆಯ ಪ್ರಕಾರ, ಕರ್ನಲ್ ಶ್ರೀಕುಮಾರ್ ತಮ್ಮ ಹೇಳಿಕೆಯಲ್ಲಿ ಹತ್ಯೆಗೀಡಾದ ಓರ್ವ ಬಂಡುಕೋರನ ಹೆಸರನ್ನೂ ತಪ್ಪಾಗಿ ತಿಳಿಸಿದ್ದಾರೆ. ಶ್ರೀಕುಮಾರ್ ತಿಳಿಸಿರುವ ಆರ್.ಕೆ ರೋಶನ್‌ನ ನಿಜವಾದ ಹೆಸರು ಆರ್.ಕೆ ರನೆಲ್ ಎಂದಾಗಿದೆ ಮತ್ತು ಈ ಮೂವರನ್ನು ಸೇನೆಯು ದೀಮಾಪುರದಲ್ಲಿರುವ ಅವರ ನಿವಾಸದಿಂದ ಬಂಧಿಸಿ ಕೊಂಡೊಯ್ದಿತ್ತು.
ಈ ಮೂವರನ್ನು ಸೇನಾ ಉಪವಿಭಾಗದ ಮುಖ್ಯಕಚೇರಿಗೆ ಕರೆತಂದು ಅಲ್ಲಿ ಕಚೇರಿಯ ಹಿಂದೆ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಮೃತದೇಹಗಳನ್ನು ಅಸ್ಸಾಂನ ಆಂಗ್ಲೊಂಗ್‌ಗೆ ಸಾಗಿಸುವುದಕ್ಕೂ ಮುನ್ನ ಅವುಗಳನ್ನು ಕಚೇರಿಯ ಹಿಂದೆ ಹೂಳಲಾಗಿತ್ತು.
ಸತೀಶ್ ಎಂಬ ವಿದ್ಯಾರ್ಥಿ ಮತ್ತು ಇನ್ನೋರ್ವ ವ್ಯಕ್ತಿಯನ್ನು ಶಿಲ್ಲಾಂಗ್‌ನಲ್ಲಿ ಬಂಧಿಸಿ ಇದೇ ರೀತಿ ಹತ್ಯೆ ಮಾಡಲಾಗಿದೆ ಎಂದು ಕರ್ನಲ್ ಸಿಂಗ್ ತಮ್ಮ ಅಫಿದಾವಿತ್‌ನಲ್ಲಿ ಆರೋಪಿಸಿದ್ದಾರೆ.
ಪಿಎಲ್‌ಎಯಲ್ಲಿ ಸಹಾಯಕ ಸಾರ್ವಜನಿಕ ಕಾರ್ಯದರ್ಶಿಯಾಗಿದ್ದ ಜಿ.ಜಿತೇಶ್ವರ ಅಲಿಯಾಸ್ ಜಿಪ್ಸಿ ಎಂಬಾತನನ್ನೂ ಇದೇ ರೀತಿ ಹತ್ಯೆ ಮಾಡಲಾಗಿದೆ ಎಂದು ಸಿಂಗ್ ಆರೋಪಿಸಿದ್ದಾರೆ.
ದಿ ಪ್ರಿಂಟ್ ಜೊತೆ ಮಾತನಾಡಿದ ಜಿಪ್ಸಿ ಸಹೋದರ ಸತ್ಯೆಬ್ರತ, ಈ ಅಫಿದಾವಿತ್‌ನಲ್ಲಿರುವ ನಿಜಾಂಶಗಳನ್ನು ಪರಿಗಣಿಸಿ ನ್ಯಾಯಾಲಯ ನಮಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.
ಆತ ಒಬ್ಬ ಗೆರಿಲ್ಲಾ ಆಗಿದ್ದರೂ ಭಾರತೀಯ ಸಂವಿಧಾನ ಆತನಿಗೂ ಮಾನವ ಹಕ್ಕುಗಳನ್ನು ನೀಡಿದೆ. ತನ್ನನ್ನು ದೀಮಾಪುರದಲ್ಲಿ ಬಂಧಿಸಲಾಗಿದೆ ಎಂದು ಜಿಪ್ಸಿ ಕೊನೆಯ ಬಾರಿ ಮೊಬೈಲ್ ಸಂದೇಶ ರವಾನಿಸಿದ್ದ. ನಂತರ ಆತ ಎಲ್ಲಿದ್ದಾನೆ, ಹೇಗಿದ್ದಾನೆ ಎಂಬ ಬಗ್ಗೆ ನಮಗೆ ಏನೂ ತಿಳಿದಿಲ್ಲ ಎಂದು ದುಃಖ ವ್ಯಕ್ತಪಡಿಸಿದ್ದಾರೆ.

ಆತ್ಮಸಾಕ್ಷಿಯಿರುವ ಸೈನಿಕ
ನ್ಯಾಯಾಲಯದಲ್ಲಿ ಅಫಿದಾವಿತ್ ಸಲ್ಲಿಸುವ ಮೂಲಕ ಕರ್ನಲ್ ಧರಮ್‌ವೀರ್ ಸಿಂಗ್, ರಾಜ್ಯದಲ್ಲಿ ತಮ್ಮದೇ ಸೇನೆಯ ವಿರುದ್ಧ ತಿರುಗಿಬಿದ್ದ ಭದ್ರತಾ ಪಡೆಯ ತನಜೊಮ್ ಹೆರೊಜಿತ್ ಮತ್ತು ಕಿರಿಯ ಅಧಿಕಾರಿ ರಮೇಶ್ ಚಂದ್ ಶರ್ಮಾ ಅವರ ಸಾಲಿನಲ್ಲಿ ನಿಂತಿದ್ದಾರೆ.
ಮಣಿಪುರ ಪೊಲೀಸ್ ಇಲಾಖೆಯಲ್ಲಿ ಮುಖ್ಯ ಪೇದೆಯಾಗಿರುವ ಹೆರೊಜಿತ್ ತಾನು ಕಾನೂನೇತರ ಹತ್ಯೆಗಳನ್ನು ನಡೆಸಿರುವುದಾಗಿ 2016ರ ಜನವರಿಯಲ್ಲಿ ಒಪ್ಪಿಕೊಂಡಿದ್ದರು ಮತ್ತು ಇಂಥ ಹತ್ಯೆಗಳು ರಾಜ್ಯದಲ್ಲಿ ವ್ಯಾಪಕವಾಗಿ ನಡೆಯುತ್ತಿವೆ ಎಂದು ತಿಳಿಸಿದ್ದರು.
30 ಅಸ್ಸಾಂ ರೈಫಲ್‌ನಲ್ಲಿ ಸುಬೇದಾರ್ ಆಗಿರುವ ಶರ್ಮಾ, ಈ ವರ್ಷದ ಎಪ್ರಿಲ್‌ನಲ್ಲಿ ಇಂಪಾಲದಲ್ಲಿರುವ ಪತ್ರಿಕಾ ಕಚೇರಿಗೆ ತೆರಳಿ, ಪಶ್ಚಿಮ ಇಂಪಾಲದ ಕುಕ್ರುಲ್ ಮಿಲ್ಸ್‌ನಲ್ಲಿ ಐದು ಶಂಕಿತ ತೀವ್ರವಾದಿಗಳನ್ನು ಹತ್ಯೆ ಮಾಡಿದ ಸಂದರ್ಭದಲ್ಲಿ ತಾನೂ ಸ್ಥಳದಲ್ಲಿದ್ದೆ ಎಂದು ಒಪ್ಪಿಕೊಂಡಿದ್ದರು. ಅದು ಎನ್‌ಕೌಂಟರ್ ಆಗಿರಲಿಲ್ಲ. ನಾವು ಅವರನ್ನು ಅಲ್ಲಿಗೆ ಕರೆದೊಯ್ದು ಹತ್ಯೆ ಮಾಡಿದ್ದೆವು ಎಂದು ಶರ್ಮಾ ತಪ್ಪೊಪ್ಪಿಕೊಂಡಿದ್ದರು.
ಆದರೆ ಕರ್ನಲ್ ಧರಮ್‌ವೀರ್ ಸಿಂಗ್ ಉಳಿದಿಬ್ಬರಿಗಿಂತಲೂ ಉನ್ನತ ಹುದ್ದೆಯಲ್ಲಿರುವವರಾಗಿದ್ದಾರೆ. ಸೇನಾಧಿಕಾರಿಯಾಗಿ ಅದರಲ್ಲೂ ವಿಶೇಷ ಪಡೆಯಲ್ಲಿದ್ದು ತಮ್ಮದೇ ವಿಭಾಗದ ವಿರುದ್ಧ ಮಾತನಾಡುವುದು ಬಹಳ ವಿರಳ.
ಧರಮ್‌ವೀರ್ ಸಿಂಗ್ ಅವರನ್ನು ಸೇನೆಯಲ್ಲಿ ಜವಾನರಾಗಿ ನೇಮಿಸಲಾಗಿತ್ತು. ನಂತರ ಭಾರತೀಯ ಸೇನಾ ಅಕಾಡಮಿಗೆ (ಐಎಂಎ) ಆಯ್ಕೆಯಾಗುವುದಕ್ಕೂ ಮುನ್ನ ಅವರು ಡೆಹ್ರಾಡೂನ್‌ನಲ್ಲಿರುವ ಸೇನಾ ಕಾಲೇಜಿನಲ್ಲಿ ತರಬೇತಿ ಪಡೆದಿದ್ದರು.
ವಿಶೇಷ ಪಡೆಯಲ್ಲಿ ಸೇವೆ ಸಲ್ಲಿಸಿದ ನಂತರ ಸಿಂಗ್ ಅವರನ್ನು ಗುಪ್ತಚರ ವಿಭಾಗದಲ್ಲಿ ಅಧಿಕಾರಿಯಾಗಿ ನೇಮಿಸಲಾಗಿತ್ತು. ಎರಡೂವರೆ ವರ್ಷಗಳ ಹಿಂದೆ ಅವರನ್ನು ನಾಗಲ್ಯಾಂಡ್‌ನಲ್ಲಿ ನಿಯೋಜಿಸಲಾಗಿತ್ತು.
ಸಿಂಗ್ ನಿಯೋಜನೆಗೊಂಡಿದ್ದ ಇಂಪಾಲದ ಎಂ ಸೆಕ್ಟರ್ ಅಥವಾ ಸೇನಾ ಸೆಕ್ಟರ್‌ನಲ್ಲಿರುವ ಅವರ ಗೆಳೆಯರಿಗೆ, ತಾವು ಪ್ರೀತಿಯಿಂದ ವೀರ್ ಎಂದು ಕರೆಯುವ ಕರ್ನಲ್ ಧರಮ್‌ವೀರ್ ಸಿಂಗ್ ತನ್ನದೇ ಜನರ ವಿರುದ್ಧ ತಿರುಗಿಬೀಳಲು ಕಾರಣವೇನು ಎಂಬುದಕ್ಕೆ ಇನ್ನೂ ಸರಿಯಾದ ಉತ್ತರ ಸಿಕ್ಕಿಲ್ಲ.
ಎಂ ಸೆಕ್ಟರ್‌ನಲ್ಲಿ ಸೇನಾ ಕಚೇರಿಗಳು ಮತ್ತು ವಸತಿನಿಲಯಗಳಿವೆ. ಅದು ಇಂಪಾಲದ ರಾಜ್ಯಪಾಲರ ನಿವಾಸ ರಾಜಭವನದ ಹತ್ತಿರವೇ ಇದೆ. ಜೊತೆಗೆ ಮಣಿಪುರದ ರಾಜಮನೆತನದ ನಿವಾಸ ಕಾಂಗ್ಲಾ ಕೋಟೆಯ ಸಮೀಪವಿದೆ.

ಇಂಥ ಅಭೂತಪೂರ್ವ ಸೇನಾ ನಿಯೋಜನೆ ಹೊಂದಿರುವ ನಗರದಲ್ಲಿ ಯೋಧರು ವಿವಿಧ ಬಣ್ಣಗಳ ಸಮವಸ್ತ್ರಗಳೊಂದಿಗೆ ಕಾಣಲು ಸಿಗುತ್ತಾರೆ. ಎಂ ಸೆಕ್ಟರ್‌ನಲ್ಲಿ ಭದ್ರತೆಯ ಜವಾಬ್ದಾರಿಯನ್ನು ಅರೆಸೇನಾ ಪಡೆ ಅಸ್ಸಾಂ ರೈಫಲ್ಸ್‌ಗೆ ನೀಡಲಾಗಿದೆ. ಅಲ್ಲಿರುವ ದೇವಸ್ಥಾನದಲ್ಲಿ ಹಾಕಿರುವ ಫಲಕದಲ್ಲಿ 2016ರಂದು ಈ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಧರಮ್‌ವೀರ್ ಸಿಂಗ್ ಕೂಡಾ ಭಾಗಿಯಾಗಿದ್ದರು ಎಂಬುದನ್ನು ಉಲ್ಲೇಖಿಸಲಾಗಿದೆ.

ಎಂ ಸೆಕ್ಟರ್‌ನಲ್ಲಿ ನೆಲೆಸಿರುವ ಮತ್ತು ಅಲ್ಲೇ ನಿಯೋಜನೆಗೊಂಡಿರುವ ಸೇನಾ ಅಧಿಕಾರಿಯೊಬ್ಬರ ಪ್ರಕಾರ, ಮಣಿಪುರ ಒಂದು ಅತ್ಯಂತ ಕಠಿಣ ಪ್ರದೇಶ. ಬಾಹ್ಯವಾಗಿ ಅದು ಬಹಳ ಶಾಂತಿಯುತವಾಗಿದೆ. ಮಣಿಪುರಿಗಳು, ಮುಖ್ಯವಾಗಿ ಮೇತಿಗಳು ಶಾಂತಿಪ್ರಿಯ ಜನರಾಗಿದ್ದಾರೆ. ಆದರೆ ಇಲ್ಲಿನ ಅನೇಕ ಘಟನೆಗಳ ಬಗ್ಗೆ ಎಲ್ಲರಿಗೂ ಗೊಂದಲವಿದೆ. ಇಂಪಾಲದಲ್ಲಿ ಬಹಳಷ್ಟು ಸಮಯ ಕಳೆದಿರುವ ಧರಮ್‌ವೀರ್ ಸಿಂಗ್ ಅಲ್ಲಿನ ಸ್ಥಳೀಯ ಭಾಷೆಯನ್ನೂ ಕಲಿತುಕೊಂಡಿದ್ದರು ಮತ್ತು ಬಹಳ ಕರಾರುವಾಕ್ ಗುಪ್ತಚರ ಮಾಹಿತಿಯನ್ನು ನೀಡುತ್ತಿದ್ದರು ಎಂದು ಅಧಿಕಾರಿ ತಿಳಿಸುತ್ತಾರೆ.
ಸುಖಾಸುಮ್ಮನೆ ಗೊಂದಲ ಉಂಟು ಮಾಡಿದ್ದಾನೆ ಎಂದು ಅಭಿಪ್ರಾಯಪಡುತ್ತಾರೆ ಸಿಂಗ್ ಜೊತೆ ಇಂಪಾಲದ ಎಂ ಸೆಕ್ಟರ್‌ನಲ್ಲಿ ಕಾರ್ಯನಿರ್ವಹಿಸಿರುವ ಇನ್ನೋರ್ವ ಅಧಿಕಾರಿ.
ಈ ಅಧಿಕಾರಿಯ ಪ್ರಕಾರ, ತನಗಿಷ್ಟದ ಪ್ರದೇಶಕ್ಕೆ ವರ್ಗಾವಣೆಗೊಳಿಸದ ಕಾರಣದಿಂದ ಧರಮ್‌ವೀರ್ ಸಿಂಗ್ ಕೋಪಗೊಂಡಿದ್ದರು. ಅವರನ್ನು ಬೆಳಗಾಂಗೆ ವರ್ಗಾವಣೆ ಮಾಡಲಾಗಿತ್ತು. ಆದರೆ ಸಿಂಗ್ ಮುಂಬೈಗೆ ತೆರಳಲು ಬಯಸಿದ್ದರು.

ತನ್ನದೇ ವಿಭಾಗದ ಅಧಿಕಾರಿಗಳ ಮೇಲೆ ಸಿಂಗ್ ಯಾಕೆ ಯುದ್ಧ ಘೋಷಿಸಿದ್ದಾರೆ ಎಂಬುದಕ್ಕೆ ನಿಖರವಾದ ಕಾರಣವನ್ನು ಅವರ ಪತ್ನಿ ಕೂಡಾ ನೀಡಿಲ್ಲ. ನನ್ನ ಪತಿಗೆ ಸೇನೆಯೇ ಧರ್ಮವಾಗಿತ್ತು ಮತ್ತು ನಾವಿಬ್ಬರೂ ಈ ಪ್ರತಿಷ್ಠಿತ ಸಂಘಟನೆಯ ಬಗ್ಗೆ ಗೌರವ ಹೊಂದಿದ್ದೇವೆ. ನಾವೆಂದೂ ವ್ಯವಸ್ಥೆಯ ವಿರುದ್ಧ ಹೋಗುತ್ತೇವೆ ಎಂದು ಯೋಚಿಸಿರಲಿಲ್ಲ ಎಂದು ಮಣಿಪುರ ಉಚ್ಚ ನ್ಯಾಯಾಲಯ ಯಾವುದೇ ಹೇಳಿಕೆ ನೀಡಬಾರದು ಎಂದು ಆದೇಶ ನೀಡುವುದಕ್ಕೂ ಮುನ್ನ ಆಕೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕೃಪೆ: theprint.in

Writer - ಸುಜನ್ ದತ್ತಾ

contributor

Editor - ಸುಜನ್ ದತ್ತಾ

contributor

Similar News

ಜಗದಗಲ
ಜಗ ದಗಲ