ಸೈಕಲ್ ತೆಗೆಯಲು 4 ವರ್ಷದಿಂದ ಕೂಡಿಟ್ಟ ಹಣವನ್ನು ಕೇರಳಕ್ಕೆ ನೀಡಿದ 9 ವರ್ಷದ ಬಾಲಕಿ

Update: 2018-08-20 15:52 GMT

ವಿಲ್ಲ್ಲುಪುರಂ (ತಮಿಳುನಾಡು), ಆ.20: ತನ್ನ ಆಸೆಯ ಸೈಕಲ್ ಖರೀದಿಸಲು ಕಳೆದ ನಾಲ್ಕು ವರ್ಷಗಳಿಂದ ಹಣ ಸಂಗ್ರಹಿಸುತ್ತಿದ್ದ ತಮಿಳುನಾಡಿನ ವಿಲ್ಲಾಪುರಂನ 9 ವರ್ಷದ ಬಾಲಕಿ ಆ ಹಣವನ್ನು ಕೇರಳ ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾಳೆ.

ಕೇರಳದ ಮಹಾಮಳೆ ಹಾಗೂ ಜಲಪ್ರವಾಹದ ಬಗ್ಗೆ ಟಿವಿಯಲ್ಲಿ ವೀಕ್ಷಿಸಿದ್ದ ವಿಲ್ಲುಪುರಂನ ಬಾಲಕಿ ಅನುಪ್ರಿಯ ಸೈಕಲ್ ಖರೀದಿಸಲು ಕಳೆದ ನಾಲ್ಕು ವರ್ಷಗಳಿಂದ ಸಂಗ್ರಹಿಸಿದ 9 ಸಾವಿರ ರೂಪಾಯಿಯನ್ನು ಕೇರಳದ ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ನೀಡಿದ್ದಾಳೆ. ‘‘ಸೈಕಲ್ ಖರೀದಿಸಲು ನಾನು ಕಳೆದ 4 ವರ್ಷಗಳಿಂದ ಹಣ ಕೂಡಿಡುತ್ತಿದ್ದೆ. ಕೇರಳದ ನೆರೆಯ ಬಗ್ಗೆ ಟಿವಿಯಲ್ಲಿ ನೋಡಿದೆ. ಬಳಿಕ ಹಣವನ್ನು ನಿಧಿಗೆ ನೀಡಲು ನಿರ್ಧರಿಸಿದೆ’’ ಎಂದು ಅನುಪ್ರಿಯ ತಿಳಿಸಿದ್ದಾಳೆ. ಅನುಪ್ರಿಯಳ ಈ ಮಾನವೀಯತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇದನ್ನು ಗಮನಿಸಿರುವ ಹಿರೋ ಸೈಕಲ್ ಕಂಪೆನಿ ಮೆಚ್ಚುಗೆ ವ್ಯಕ್ತಪಡಿಸಿ ಟ್ಟೀಟ್ ಮಾಡಿದೆ ಹಾಗೂ ನೂತನ ಸೈಕಲ್ ನೀಡುವ ಭರವಸೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News