ಕೇರಳ ಪ್ರವಾಹ ಸಂತ್ರಸ್ತರ ನೆರವಿಗೆ ಅಫ್ಘಾನ್ ಕ್ರಿಕೆಟಿಗ ರಶೀದ್ ಖಾನ್

Update: 2018-08-20 16:43 GMT

ಹೊಸದಿಲ್ಲಿ, ಆ.20: ಪ್ರವಾಹಪೀಡಿತ ಕೇರಳಕ್ಕೆ ದೇಶಾದ್ಯಂತ ಮಾತ್ರವಲ್ಲದೆ, ಅಂತಾರಾಷ್ಟ್ರೀಯ ಮಟ್ಟದಿಂದಲೂ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ನ ಪ್ರಸಿದ್ಧ ಬೌಲರ್, ಅಫ್ಘಾನಿಸ್ತಾನದ ರಶೀದ್ ಖಾನ್ ಕೇರಳದ ಜೊತೆ ಕೈಜೋಡಿಸಿದ್ದಾರೆ.

“ಇಡೀ ಕೇರಳವೇ ಸಂಕಷ್ಟದಲ್ಲಿರುವುದು ನಿಮಗೆಲ್ಲಾ ಈಗಾಗಲೇ ಗೊತ್ತಿದೆ. ಕೇರಳವನ್ನು ಮರುಸ್ಥಾಪಿಸಲು ಮುಂದಾಗಿರುವ ಕೇರಳ ಕ್ರಿಕೆಟ್ ಅಸೋಸಿಯೇಶನ್ ಜೊತೆ ಕೈಜೋಡಿಸಬೇಕು ಹಾಗು ಕೊಡುಗೆ ಸಲ್ಲಿಸಬೇಕು. ನಾನೂ ಇದರ ಜೊತೆಗಿದ್ದೇನೆ” ಎಂದು ಎಂದವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದರಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News