ಕೇರಳ ಪ್ರವಾಹದಲ್ಲಿ 483 ಮಂದಿ ಮೃತ್ಯು, 15 ಮಂದಿ ನಾಪತ್ತೆ: ಪಿಣರಾಯಿ ವಿಜಯನ್

Update: 2018-08-30 08:14 GMT

ಕೊಚ್ಚಿ, ಆ.30: ಕೇರಳ ಭೀಕರ ಪ್ರವಾಹದಲ್ಲಿ 483 ಮಂದಿ ಮೃತಪಟ್ಟಿದ್ದಾರೆ ಹಾಗು 15 ಮಂದಿ ನಾಪತ್ತೆಯಾಗಿದ್ದಾರೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡಿದ ಅವರು, ಶತಮಾನದಲ್ಲೇ ಭೀಕರ ಪ್ರವಾಹ ಇದಾಗಿದ್ದು, 14.50 ಲಕ್ಷ ಮಂದಿ ನಿರಾಶ್ರಿತ ಕೇಂದ್ರದಲ್ಲಿದ್ದರು ಎಂದರು. “305 ನಿರಾಶ್ರಿತ ಶಿಬಿರಗಳಲ್ಲಿ ಇದೀಗ 59,296 ಮಂದಿ ಇದ್ದಾರೆ. 57 ಸಾವಿರ ಹೆಕ್ಟೇರ್ ಕೃಷಿ ನಾಶಗೊಂಡಿದೆ” ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News