ಕಾಶ್ಮೀರ: ಗುಂಡಿಕ್ಕಿ ವಿದ್ಯಾರ್ಥಿಯ ಹತ್ಯೆ

Update: 2018-09-08 17:26 GMT

ಶ್ರೀನಗರ, ಸೆ. 8: ಸೋಪೊರೆಯಲ್ಲಿ ಶನಿವಾರ ಮಧ್ಯಾಹ್ನ ಅಪರಿಚಿತ ಬಂದೂಕುಧಾರಿ ಹುರಿಯತ್ ಕಾರ್ಯಕರ್ತನನ್ನು ಹತ್ಯೆಗೈದ ಕೆಲವು ಗಂಟೆಗಳ ಬಳಿಕ ಶ್ರೀನಗರದಲ್ಲಿ ವಿದ್ಯಾರ್ಥಿಯೊಬ್ಬನನ್ನು ಹತ್ಯೆಗೈಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದ ಹಝ್ರತ್‌ಬಾಲ್ ಪ್ರದೇಶದಲ್ಲಿ ಇಸ್ಲಾಮಿಕ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಇಷ್ಫಾಕ್ ಅಹ್ಮದ್ ಅವರನ್ನು ಸಂಜೆ ಗುಂಡು ಹಾರಿಸಿ ಹತ್ಯೆಗೈಯಲಾಗಿದೆ. ವಿದ್ಯಾರ್ಥಿಯ ಗುರುತು ದೃಢಪಡಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಆತನ ವಶದಲ್ಲಿದ್ದ ಪಿಸ್ತೂಲ್‌ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಶ್ರೀನಗರದ ಹಿರಿಯ ಪೊಲೀಸ್ ಅಧೀಕ್ಷಕ ಇಮ್ತಿಯಾಝ್ ಇಸ್ಮಾಯಿಲ್ ಪಾರೇ ತಿಳಿಸಿದ್ದಾರೆ.

ನಸೀಮ್‌ಬಾಗ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕೊಲೆಗಾರರನ್ನು ಬಂಧಿಸಲು ಭದ್ರತಾ ಪಡೆ ಈ ಪ್ರದೇಶವನ್ನು ಸುತ್ತುವರಿದಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News