ಕೆಸಿಆರ್ ಸರಕಾರ ಎಲ್ಲಾ ರಂಗಗಳಲ್ಲೂ ವಿಫಲ: ಅಮಿತ್ ಶಾ

Update: 2018-09-15 11:16 GMT

ಹೊಸದಿಲ್ಲಿ, ಸೆ.15: ತೆಲಂಗಾಣದ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಸ್ಪರ್ಧಿಸಲಿದ್ದು, ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

“ಒಂದು ದೇಶ ಒಂದು ಚುನಾವಣೆ ಎಂಬ ಚಿಂತನೆ ಪ್ರಧಾನಿ ಮೋದಿ ಅವರದ್ದು. ಈ ಚಿಂತನೆಗೆ ಕೆಲ ಸಮಯ ಬೆಂಬಲ ಸೂಚಿಸಿದ್ದ ಕೆಸಿಆರ್ ಈಗ ತಮ್ಮ ನಿಲುವನ್ನು ಬದಲಿಸಿದ್ದಾರೆ. ಇದರಿಂದಾಗಿ ಸಣ್ಣ ರಾಜ್ಯ ಎರಡು ಚುನಾವಣೆಗಳ ವೆಚ್ಚ ಭರಿಸಬೇಕಾಗಿದೆ” ಎಂದವರು ಕೆಸಿಆರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಾನೂನು ಸುವ್ಯವಸ್ಥೆ, ಅಭಿವೃದ್ಧಿ ಹೀಗೆ ಎಲ್ಲಾ ರಂಗಗಳಲ್ಲೂ ತೆಲಂಗಾಣ ಸರಕಾರ ವಿಫಲವಾಗಿದೆ ಎಂದವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News