ಗಡಿಯಲ್ಲಿ ಓರ್ವ ಯೋಧ ಹುತಾತ್ಮ

Update: 2018-09-25 04:27 GMT

ಶ್ರೀನಗರ, ಸೆ.26:ಜಮ್ಮು ಮತ್ತು  ಕಾಶ್ಮೀರದ ತಂಗ್ ಧಾರ್ ಸೆಕ್ಟರ್ ನಲ್ಲಿ ಉಗ್ರರ ಗುಂಡಿಗೆ ಯೋಧರೊಬ್ಬರು ಹುತಾತ್ಮರಾದ ಘಟನೆ ಮಂಗಳವಾರ ನಡೆದಿದೆ.

ಲಾನ್ಸ್ ನಾಯಕ್ ಸಂದೀಪ್ ಸಿಂಗ್  ಉಗ್ರರ ಗುಂಡಿನ ದಾಳಿಗೆ ಸಿಲುಕಿ ಹುತಾತ್ಮರಾದವರು.

ಸಂದೀಪ್ ಸಿಂಗ್ ಅವರು  ಗಡಿಯಲ್ಲಿ ಒಳನುಸುಳುವ ಯತ್ನದಲ್ಲಿದ್ದ  ಉಗ್ರರನ್ನು ತಡೆಯಲು ನಡೆಸಿದ ಕಾರ್ಯಾಚರಣೆಯ ವೇಳೆ ಉಗ್ರರು ಅವರತ್ತ  ಗುಂಡಿನ ದಾಳಿ ನಡೆಸಿದರು. ಇದರಿಂದಾಗಿ  ಸಂದೀಪ್ ಸಿಂಗ್  ಗಂಭೀರ ಗಾಯಗೊಂಡು ಕೊನೆಯುಸಿರೆಳೆದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News