ತ್ರಿವಳಿ ತಲಾಖ್ ರದ್ದತಿ ಸುಗ್ರೀವಾಜ್ಞೆಗೆ ವಿರೋಧ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಸಮಸ್ತ ಕೇರಳ ಜಮೀಯ್ಯತುಲ್ ಉಲಮಾ
Update: 2018-09-25 17:38 GMT
ಹೊಸದಿಲ್ಲಿ, ಸೆ.25: ಕೇಂದ್ರ ಸಚಿವ ಸಂಪುಟದಿಂದ ಅನುಮೋದನೆಗೊಂಡಿದ್ದ ತ್ರಿವಳಿ ತಲಾಖ್ ರದ್ದತಿ ಸುಗ್ರೀವಾಜ್ಞೆ ಪ್ರಶ್ನಿಸಿ ಕೇರಳದ ಮುಸ್ಲಿಂ ಸಂಘಟನೆಯೊಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಕೇರಳದ ಸಮಸ್ತ ಕೇರಳ ಜಮೀಯ್ಯತುಲ್ ಉಲಮಾ ತ್ರಿವಳಿ ತಲಾಖನ್ನು ಅಪರಾಧವನ್ನಾಗಿಸುವ ಸುಗ್ರೀವಾಜ್ಞೆಯನ್ನು ವಿರೋಧಿಸಿ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದೆ. ಸೆಪ್ಟಂಬರ್ 19ರಂದು ತ್ರಿವಳಿ ತಲಾಖ್ ಶಿಕ್ಷಾರ್ಹ ಅಪರಾಧ ಎಂಬ ಅಧ್ಯಾದೇಶಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತ್ತು.