ಟ್ರಕ್ ಗೆ ಢಿಕ್ಕಿ ಹೊಡೆದು ಹೊತ್ತಿ ಉರಿದ ಬಸ್: ನಾಲ್ವರು ಸಜೀವದಹನ

Update: 2018-10-19 09:56 GMT

ಚೆನ್ನೈ, ಅ.19: ಟ್ರಕ್ ಮತ್ತು ಬಸ್ ನಡುವಿನ ಅಪಘಾತದ ನಂತರ ಸಂಭವಿಸಿದ ಅಗ್ನಿ ಅವಘಡದಲ್ಲಿ ನಾಲ್ವರು ಸುಟ್ಟು ಕರಕಲಾಗಿರುವ ಘಟನೆ ತಮಿಳುನಾಡಿನ ವಿಲುಪುರಂ ಜಿಲ್ಲೆಯ ವುಳುಂದರ್ ಪೇಟೆಯಲ್ಲಿ ನಡೆದಿದೆ.

ಚೆನ್ನೈಯಿಂದ ತಿರುಚ್ಚಿಗೆ ಹೊರಟಿದ್ದ ಬಸ್ ನಲ್ಲಿ 23 ಪ್ರಯಾಣಿಕರಿದ್ದರು. ಯು-ಟರ್ನ್ ತೆಗೆಯುತ್ತಿದ್ದ ಸಂದರ್ಭ ಬಸ್ ಟ್ರಕ್ ಗೆ ಢಿಕ್ಕಿ ಹೊಡೆದಿತ್ತು. ಪರಿಣಾಮ ತೈಲ ಟ್ಯಾಂಕ್ ಸ್ಫೋಟಗೊಂಡಿತ್ತು ಎನ್ನಲಾಗಿದೆ.

“ಎರಡು ವಾಹನಗಳ ಚಾಲಕರು, ಬಸ್ ಕ್ಲೀನರ್ ಹಾಗು ಮಹಿಳಾ ಪ್ರಯಾಣಿಕರೊಬ್ಬರು ಸುಟ್ಟು ಕರಕಲಾಗಿದ್ದಾರೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News