ಪ್ರಚಾರಕ್ಕಾಗಿ ‘ಮೀ ಟೂ ಅಭಿಯಾನ’ ಸರಿಯಲ್ಲ: ಚಿತ್ರನಟಿ ಹರ್ಷಿಕಾ

Update: 2018-10-26 13:21 GMT

ಬೆಂಗಳೂರು, ಅ. 26: ಕೇವಲ ಪ್ರಚಾರಕ್ಕಾಗಿ ‘ಮೀ ಟೂ ಅಭಿಯಾನ’ ಬಳಸಿ ಯಾರೊಬ್ಬರ ಹೆಸರಿಗೂ ಮಸಿ ಬಳಿಯುವ ಕೆಲಸ ಸರಿಯಲ್ಲ ಎಂದು ಚಿತ್ರನಟಿ ಹರ್ಷಿಕಾ ಪೂಣಚ್ಚ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಒಂದು ಕೈಯಿಂದ ಚಪ್ಪಾಳೆ ಹೊಡೆಯಲು ಸಾಧ್ಯವಿಲ್ಲ. ಎರಡು ಕೈ ಸೇರಿದರೆ ಮಾತ್ರ ಚಪ್ಪಾಳೆ ಸಪ್ಪಳ ಕೇಳುತ್ತದೆ. ಆದರೆ, ಪ್ರಚಾರಕ್ಕಾಗಿ ಯಾರೊಬ್ಬರ ಹೆಸರಿಗೂ ಮಸಿ ಬಳಿಯಬಾರದು ಎಂದರು.

ಚಿತ್ರರಂಗದಲ್ಲಿ ತೊಂದರೆಯಾದರೆ ಚಿತ್ರೋದ್ಯಮ ಬಿಟ್ಟು ಹೋಗಬೇಕು. ಆದರೆ, ಒಂದಂತೂ ಸತ್ಯ. ಚಿತ್ರರಂಗದಲ್ಲಿ ಹೆಸರು ಮಾಡಲು ಕನಿಷ್ಠ 15 ವರ್ಷ ಬೇಕು. ಆದರೆ ಹೆಸರು ಹಾಳಾಗಲು ಒಂದು ಕ್ಷಣ ಸಾಕು. ನನಗೂ ಈ ಹಿಂದೆಯೂ ಚಿತ್ರವೊಂದರಲ್ಲಿ ಅಂತಹ ಸಂದರ್ಭ ಎದುರಾಗಿತ್ತು, ಬಳಿಕ ನಾನೇ ಆ ಚಿತ್ರದಲ್ಲಿ ನಟಿಸಲು ನಿರಾಕರಿಸಿದ್ದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News