ಶಬರಿಮಲೆ ಅಪವಿತ್ರಗೊಳಿಸದಿರಿ: ಶಶಿ ತರೂರ್ ಮನವಿ

Update: 2018-11-09 18:23 GMT

ತಿರುವನಂತಪುರ, ನ. 9: ಶಬರಿಮಲೆಗೆ ಇರುವ ಗೌರವದೊಂದಿಗೆ ರಾಜಕೀಯ ಆಟ ಆಡಬೇಡಿ ಹಾಗೂ ಶಬರಿಮಲೆಯನ್ನು ಅಪವಿತ್ರಗೊಳಿಸಬೇಡಿ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಶಶಿ ತರೂರ್ ಶುಕ್ರವಾರ ಬಿಜೆಪಿ, ಆರ್‌ಎಸ್‌ಎಸ್ ಹಾಗೂ ಸರಕಾರದಲ್ಲಿ ಮನವಿ ಮಾಡಿದ್ದಾರೆ.

ಸಾಂಪ್ರದಾಯಿಕ ಆಧುನಿಕತೆ ಹಾಗೂ ನಮ್ಮ ಜಗತ್ತಿನ ಬದಲಾಗುತ್ತಿರುವ ಸಮಾಜದ ನಡುವಿನ ಮುಖಾಮುಖಯಲ್ಲಿ ಆದ ಬದಲಾವಣೆ ಕುರಿತು ಹೆಚ್ಚು ಆಳವಾದ ಕೆಲವು ವಿಷಯಗಳನ್ನು ಇದು ಎತ್ತಿದೆ ಎಂದು ನಾನು ಭಾವಿಸುತ್ತೇನೆ ಎಂದು ತರೂರ್ ಹೇಳಿದ್ದಾರೆ. ಬಿಜೆಪಿ ನಡೆಸುತ್ತಿರುವ ಹಿಂಸಾಚಾರ ಅದರ ನಡವಳಿಕೆಯನ್ನು ತೋರಿಸುತ್ತದೆ. ಜನರನ್ನು ಉತ್ತೇಜಿಸುವುದು ಸಂಪೂರ್ಣವಾಗಿ ನಾಚಿಕೆಗೇಡಿನ ವಿಚಾರ ಎಂದು ಅವರು ಹೇಳಿದ್ದಾರೆ. ಪವಿತ್ರ ಸ್ಥಳವನ್ನು ರಾಜಕೀಯ ರಂಗಭೂಮಿ ಮಾಡಿ ಇದು ಪಕ್ಷಕ್ಕೆ ಸಿಕ್ಕಿದ ಸುವರ್ಣಾವಕಾಶ ಎಂದು ಬಿಜೆಪಿಯ ಸ್ಥಳೀಯ ನಾಯಕರು ಭಾವಿಸುತ್ತಿರುವುದು ಅವಮಾನಕರ ಎಂದು ಅವರು ಹೇಳಿದರು. ಶಬರಿಮಲೆಯಲ್ಲಿ ಉಂಟಾಗಿರುವ ಪರಿಸ್ಥಿತಿಗೆ ರಾಜ್ಯ ಸರಕಾರ ಕೂಡ ಕಾರಣ ಎಂದು ತರೂರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News