ಕೆಲವೇ ನಿಮಿಷಗಳಲ್ಲಿ ತಮಿಳುನಾಡಿಗೆ ಅಪ್ಪಳಿಸಲಿರುವ ‘ಗಜ’: 26 ಸಾವಿರ ಜನರ ಸ್ಥಳಾಂತರ

Update: 2018-11-15 16:39 GMT

ಚೆನ್ನೈ, ನ.15: ಇಂದು ರಾತ್ರಿ ಚಂಡಮಾರುತ ಗಜ ತಮಿಳುನಾಡಿಗೆ ಅಪ್ಪಳಿಸಲಿದ್ದು, 26 ಸಾವಿರ ಜನರನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ. ಸ್ಥಳಾಂತರಗೊಂಡ ಜನರನ್ನು 164 ಕ್ಯಾಂಪ್ ಗಳಲ್ಲಿ ಇರಿಸಲಾಗಿದೆ.

ನಾಗಪಟ್ಟಿಣಂ ಜಿಲ್ಲೆಗೆ ರಾತ್ರಿ 11 ಗಂಟೆಯ ಸುಮಾರಿಗೆ ಚಂಡಮಾರುತ ಅಪ್ಪಳಿಸಲಿದೆ ಎಂದು ತಮಿಳುನಾಡು ವಿಕೋಪ ನಿರ್ವಹಣಾ ಪ್ರಾಧಿಕಾರವು ಟ್ವೀಟ್ ನಲ್ಲಿ ತಿಳಿಸಿದೆ. ಚಂಡಮಾರುತದ ಸಂದರ್ಭ ಗಂಟೆಗೆ 80ರಿಂದ 100 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದು, ಭಾರೀ ಮಳೆ ಸುರಿಯಲಿದೆ ಎಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News