ಬಸವಣ್ಣನ ಹೋರಾಟ ನಮಗೆ ಮಾದರಿಯಾಗಲಿ

Update: 2018-12-09 03:02 GMT

        ಬಿ.ಶ್ರೀಪಾದ ಭಟ್

ಬಳ್ಳಾರಿ ಜಿಲ್ಲೆಯ ಸಿರಗುಪ್ಪದಲ್ಲಿ 1966ರಲ್ಲಿ ಜನಿಸಿದ ಇವರು, ಸಿರಗುಪ್ಪ, ಹೊಸಪೇಟೆ, ಬಳ್ಳಾರಿಯಲ್ಲಿ ಆರಂಭಿಕ ಶಿಕ್ಷಣ ಪಡೆದು, ರಾಯಚೂರಿನಲ್ಲಿ ಬಿಇ ಪದವಿ ಪಡೆದವರು. ವೃತ್ತಿಯಲ್ಲಿ ಇಂಜಿನಿಯರ್ ಆದರೂ, ಸಾಮಾಜಿಕ ಮತ್ತು ಪ್ರಗತಿಪರ ಚಳವಳಿಗಳೊಂದಿಗೆ ಗುರುತಿಸಿಕೊಂಡು, ಸಮಾಜಪರ ಚಿಂತನೆಯಲ್ಲಿ ತೊಡಗಿಸಿಕೊಂಡವರು. ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ ಸಂಘಟನೆಯಲ್ಲಿ ತೊಡಗಿಸಿಕೊಂಡದ್ದು, ದಲಿತ ಉದ್ಯಮಶೀಲತೆ ಶಿಬಿರಗಳನ್ನು ಸಂಘಟಿಸುವಲ್ಲಿಯೂ ಆಸಕ್ತರು. ‘ವಿಮೋಚಕಿಯ ಕನಸುಗಳು: ಸಾವಿತ್ರಿಬಾಯಿ ಫುಲೆ ಬದುಕುಹೋರಾಟ’, ‘ಹುಲಿಯ ನೆರಳಿನೊಳಗೆ: ನಾಮದೇವ್ ನಿಂಗಾಡೆ ಅವರ ಆತ್ಮಕಥೆ’, ‘ಬಹುಸಂಖ್ಯಾತವಾದ’ ಇವರ ಅನುವಾದ ಕೃತಿಗಳು. ‘ಹಿಂದುತ್ವರಾಜಕಾರಣ’, ‘ಬಿಸಿಲ ಬಯಲು ನೆಳಲು’ ಎಂಬ ಚಿಂತನಾರ್ಹ ಕೃತಿಗಳನ್ನು ನೀಡಿರುವ ಇವರು ಸಿನೆಮಾ, ಸಂಗೀತ ಮತ್ತು ಪುಸ್ತಕಗಳ ಅಧ್ಯಯನದಲ್ಲಿ ಆಸಕ್ತಿ ಇರಿಸಿಕೊಂಡವರು. ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಜನತೆಯಲ್ಲಿ ಜಾಗೃತಿಯನ್ನುಂಟು ಮಾಡುತ್ತಿರುವವರು. ಆರ್ಯ ಸಮಾಜದ ಬೆಳಕಿನ ಕಿಡಿಯಾಗಿ ಹೊರಹೊಮ್ಮಿದ ಸ್ವಾಮಿ ಅಗ್ನಿವೇಶ ಅವರನ್ನು ಇಲ್ಲಿ ಮುಖಾಮುಖಿಯಾಗಿಸಿದ್ದಾರೆ. ತಮ್ಮ ಪ್ರಶ್ನೆಗಳ ಮೂಲಕ ಅಗ್ನಿವೇಶರ ತಾತ್ವಿಕ ನೆಲೆಗಳ ಆಳವನ್ನು ತಲುಪುವ ಪ್ರಯತ್ನವನ್ನು ಮಾಡಿದ್ದಾರೆ.

ಮಹರ್ಷಿ ದಯಾನಂದರು ಕೇವಲ ಗೋವಿನ ಬಗ್ಗೆ ಮಾತನಾಡಲಿಲ್ಲ. ಅವರು ಗೋವು, ಇತ್ಯಾದಿ ಪಶುಗಳ ರಕ್ಷಣೆ ಕುರಿತು ಮಾತನಾಡುತ್ತಾರೆ. ಅವರು ಎಲ್ಲಾ ಜೀವಿಗಳನ್ನು ರಕ್ಷಿಸಬೇಕೆಂದು ಹೇಳುತ್ತಾರೆ. ಇಲ್ಲಿ ಅವರು ಗೋವನ್ನು ಕೇವಲ ಸಾಂಕೇತಿಕವಾಗಿ ಬಳಸುತ್ತಾರೆ. ಇಲ್ಲಿ ಗೋವನ್ನು ಸಂಕೇತವಾಗಿ ಬಳಸಿ ಅದರಲ್ಲಿ ಎಲ್ಲ ಪಶು, ಪಕ್ಷಿಗಳನ್ನು ಒಳಗೊಂಡವು. ದಯಾನಂದರು ತಮ್ಮ ‘ಗೋ ಕರುಣಾನಿಧಿ’ ಎನ್ನುವ ಜನಪ್ರಿಯ ಪುಸ್ತಕದಲ್ಲಿ ಪದೇ ಪದೇ ಗೋವು, ಇತ್ಯಾದಿ ಪಶು ಎಂದೇ ಸಂಬೋಧಿಸುತ್ತಾರೆ. ‘ಒಮ್ಮೆಯೂ ಗೋಮಾತೆ’ ಎನ್ನುವ ಶಬ್ದ ಬಳಸುವುದಿಲ್ಲ. ಅವರು ಗೋವಿನ ಬಗ್ಗೆ ಎಲ್ಲಿಯೂ ಭಾವಾವೇಶಕ್ಕೆ ಒಳಗಾಗುವುದಿಲ್ಲ.

 

►ವಾರ್ತಾಭಾರತಿ ದಿನಪತ್ರಿಕೆಯ ಪರವಾಗಿ ನಿಮಗೆ ಸ್ವಾಗತ. ಈ ದಿನ (5.9.2018) ನೀವು ಗೌರಿ ಲಂಕೇಶ್‌ರ ನೆನಪಿನ ಕಾರ್ಯಕ್ರಮಕ್ಕೆ ಬಂದಿದ್ದೀರಿ. ನಿರಂಕುಶ ಪ್ರಭುತ್ವದ ದಮನಕಾರಿ ನೀತಿಗಳ ವಿರುದ್ಧ ಹೋರಾಡಿದ ಗೌರಿಯವರ ಹತ್ಯೆಯಾಗಿ ಇಂದಿಗೆ ಒಂದು ವರ್ಷವಾಯಿತು. ಇದೇ ಪ್ರಭುತ್ವದ ದೌರ್ಜನ್ಯದ ಬಲಿಪಶುವಾಗಿರುವ ನಿಮ್ಮ ಜೊತೆ ‘ವಾರ್ತಾಭಾರತಿ’ ಕೆಲ ವಿಷಯಗಳ ಕುರಿತಾಗಿ ಚರ್ಚಿಸಲು ಬಯಸಿದೆ.

- ಇಂದು ಹೊಸ ವಿಚಾರವನ್ನು ನಾವು ಬೆಳೆಸಬೇಕು. ಇಲ್ಲಿ ನಮ್ಮನ್ನು ಒಡೆಯಬೇಡಿರಿ. ಬಹಳಷ್ಟು ಕಾಲದಿಂದ ನಡೆಯುತ್ತಿರುವ ಈ ಆತಂಕಕಾರಿ ಘಟನೆಗಳು ತುಂಬ ಅಪಾಯಕಾರಿಯಾಗಿವೆ. ನಾವು ಇದರ ವಿರುದ್ಧ ಮಾಡಬೇಕಾದ ಕೆಲಸಗಳನ್ನು ಮಾಡುತ್ತಿಲ್ಲ.

►ಅಂದರೆ ಐಕ್ಯತೆಯ ಕೊರತೆ? ಪ್ರಜ್ಞಾವಂತರಲ್ಲಿ ಏಕತೆಯ ಬಿಕ್ಕಟ್ಟು ಇದೆಯಲ್ಲವೇ?

- ಐಕ್ಯತೆಯೂ ಇಲ್ಲ. ರಾಜಕೀಯವಾಗಿಯೂ ಹೊಂದಾಣಿಕೆ ಸಾಧ್ಯವಾಗುತ್ತಿಲ್ಲ. ನಾವು ಮತ್ತಷ್ಟ್ಟು ಹಿಂದಕ್ಕೆ ಸಾಗುತ್ತಿದ್ದೇವೆ. ಜಾತಿ ಆಧಾರಿತ, ಮತೀಯತೆ ಆಧಾರಿತ ರಾಜಕಾರಣ ಮೇಲುಗೈ ಸಾಧಿಸಿದೆ. ಎಲ್ಲರೂ ಜಾತಿ, ಕೋಮುವಾದದ ರಾಜಕಾರಣ ಮಾಡುತ್ತಿದ್ದಾರೆ. ಕೆಲವು ಜಾಸ್ತಿ, ಕೆಲವು ಕಡಿಮೆ, ಅಷ್ಟೇ ವ್ಯತ್ಯಾಸ. ಜಾಸ್ತಿ ಮಾಡುವವರನ್ನು ಕೆಟ್ಟವರು ಎಂದು ಕರೆಯುತ್ತೇವೆ, ಕಡಿಮೆ ಮಾಡುವವರನ್ನು ಪರವಾಗಿಲ್ಲ ಎಂದು ಸಮಾಧಾನ ಪಡುತ್ತಿದ್ದೇವೆ.

►ಇದಕ್ಕೆ ನಾವು ಏನು ಮಾಡಬೇಕು? ನೀವು ಕಳೆದ ಐವತ್ತು ವರ್ಷಗಳಿಂದ ಸೌಹಾರ್ದ ಸಮಾಜಕ್ಕಾಗಿ ಶ್ರಮಿಸುತ್ತಿದ್ದೀರಿ, ಈಗ ಕೂಡಲೇ ಮಾಡಬೇಕಾದ ಕಾರ್ಯವೇನು?

-ನಾವು ಮಕ್ಕಳ ಬಳಿ, ಶಾಲೆ, ಕಾಲೇಜು, ವಿಶ್ವವಿದ್ಯಾನಿಲಯಗಳ ಬಳಿ ಹೋಗಬೇಕು. ಅವರು ತಮ್ಮ ಶಾಖೆಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದಾರೆ. ಆದರೆ ನಾವು ಅದನ್ನು ಮಾಡಬೇಕಾಗಿಲ್ಲ. ಶಾಲೆಯಲ್ಲಿ ಮಕ್ಕಳಿರುತ್ತಾರೆ. ಇವರಿಗೆ ಈ ಹೊಸ ವಿಚಾರಗಳ ಕುರಿತು ಅರಿವು ಮೂಡಿಸಬೇಕು.

►ಸರ್, ನಾನು ಈಗ ಮುಖ್ಯ ವಿಷಯಕ್ಕೆ ಬರುತ್ತೇನೆ. ನನ್ನಲ್ಲಿ ಕೆಲವು ಪ್ರಶ್ನೆಗಳಿವೆ. ನಿಮಗೆ ಈ ಪ್ರಶ್ನೆಗಳನ್ನು ಅನೇಕ ಬಾರಿ ಕೇಳಿರಬಹುದೇನೊ. ಆದರೂ ಮತ್ತೆ ಕೇಳುವ ಅನಿವಾರ್ಯ ಇದೆ. ನೀವು ಮೂಲಭೂತವಾಗಿ ಆರ್ಯ ಸಮಾಜದ ಸಂಘಟಕ, ಪ್ರಚಾರಕರು. ಹಿಂದೂಯಿಸಂ ತತ್ವಗಳನ್ನು, ಪಠ್ಯವನ್ನು ಬೋಧಿಸುತ್ತೀರಿ. ನಿಮ್ಮನ್ನು ಹಿಂದೂ ಸ್ವಾಮಿ ಯೆಂದೇ ಪರಿಗಣಿಸಲಾಗುತ್ತದೆ. ನೀವು ಕೇಸರಿ ಬಟ್ಟೆಯನ್ನು ತೊಡುತ್ತೀರಿ. ಆದರೂ ಹಿಂದುತ್ವವಾದಿ ಸಮರ್ಥಕರು ನಿಮ್ಮ ಮೇಲೆ ಯಾಕೆ ಹಲ್ಲೆ ನಡೆಸಿದರು?

- ನಿಮ್ಮ ಈ ಪ್ರಶ್ನೆಗೆ ನಾನು ಮತ್ತೊಂದು ಪ್ರಶ್ನೆ ಕೇಳ ಬಯಸುತ್ತೇನೆ. ಈಗ ಹೇಳಲಾಗುತ್ತಿರುವ ಹಿಂದೂ ಸಮಾಜದ ಬಲು ದೊಡ್ಡ ಸುಧಾರಕ, ಆರ್ಯ ಸಮಾಜದ ಸ್ಥಾಪಕ ದಯಾನಂದ ಸ್ವಾಮಿಗಳು ಯಾಕೆ ಹತ್ಯೆಗೀಡಾದರು? ಅವರನ್ನು ಯಾಕೆ ಕೊಲೆ ಮಾಡಲಾಯಿತು? ಅವರ 59ನೇ ವಯಸ್ಸಿನಲ್ಲಿ ವಿಷ ನೀಡಿ ಕೊಲ್ಲಲಾಯಿತು. ಅವರ ಮೇಲೆ ಹಿಂದೆ 16 ಬಾರಿ ಕೊಲೆ ಯತ್ನ ನಡೆಸಲಾಯಿತು. ಆದರೆ 17ನೇ ಪ್ರಯತ್ನದಲ್ಲಿ ಕೊಲೆ ಮಾಡುವಲ್ಲಿ ಯಶಸ್ವಿಯಾದರು. ತೀವ್ರವಾದಿ ಹಿಂದೂ ಶಕ್ತಿಗಳು ಈ ಕೊಲೆಯನ್ನು ಮಾಡಿವೆ. ಈ ಶಕ್ತಿಗಳಿಗೆ ಸಮಾನತೆ ಬೇಕಾಗಿರಲಿಲ್ಲ. ಅವರಿಗೆ ಜಾತಿ ಪದ್ಧತಿ ಮುಂದುವರಿಯಬೇಕಿತ್ತು. ವಿಧವಾ ಪದ್ಧತಿ, ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿಗಳನ್ನು ಧರ್ಮದ ಹೆಸರಿನಲ್ಲಿ, ವೇದಗಳ ಹೆಸರಿನಲ್ಲಿ ಮುಂದುವರಿಸಿಕೊಂಡು ಹೋಗಬೇಕಾಗಿತ್ತು. ಆದರೆ ತಮ್ಮ ಸಂಕುಚಿತ ಕೋಮುವಾದಿ ಹಿತಾಸಕ್ತಿಗಾಗಿ ಈ ಶಕ್ತಿಗಳು ನಮ್ಮ ಭವ್ಯ ಪರಂಪರೆಯನ್ನು ಸಾರುವ ವೇದಗಳನ್ನು ಹೈಜಾಕ್ ಮಾಡಿದವು. ಸ್ವಾಮಿ ದಯಾನಂದ ಬಂದು ಇದನ್ನು ವಿರೋಧಿಸಿದ್ದರು.

►ದಯಾನಂದ ಸ್ವಾಮಿಗಳು ಬ್ರಾಹ್ಮಣ್ಯದ ವಿರುದ್ಧ ಹೋರಾಡಿದರಾ?

- ವೇದಗಳನ್ನು ಎಲ್ಲರಿಗೂ ಕಲಿಸಬೇಕು. ಕೇವಲ ಬ್ರಾಹ್ಮಣರು ಮಾತ್ರವಲ್ಲ. ಎಲ್ಲರೂ ಅಧ್ಯಯನ ಮಾಡಬೇಕು. ಆ ಕಾಲದಲ್ಲಿ ಈ ವೇದಗಳ ಅಧ್ಯಯನವನ್ನು ಬ್ರಾಹ್ಮಣರು ತಮಗೆ ಮಾತ್ರ ಸೀಮಿತಗೊಳಿಸಿಕೊಂಡಿದ್ದರು. ಮಹಿಳೆಯರು, ಶೂದ್ರರಿಗೂ ಈ ಅವಕಾಶ ಕೊಡಲಿಲ್ಲ. ಸ್ವಾಮಿ ದಯಾನಂದರು ಈ ಬಾಗಿಲನ್ನು ಎಲ್ಲರಿಗೂ ತೆರೆದರು. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಪ್ರತಿಯೊಬ್ಬರಿಗೂ ಅವಕಾಶ ಕಲ್ಪಿಸಿದರು. ಈ ಅಧ್ಯಯನವನ್ನು ಹಿಂದಿ ಭಾಷೆಯಲ್ಲಿ ಅನುವಾದಿಸಿದರು. ಬೋಧಿಸಿದರು. ಅದಕ್ಕೂ ಹಿಂದೆ ಈ ಜನರ ಭಾಷೆ(ಹಿಂದಿ)ಯನ್ನು ಬಳಸುತ್ತಿರಲಿಲ್ಲ. ಅವರ ಸುಧಾರಣೆಯು ಕ್ರಾಂತಿಕಾರಿಯಾಗಿದೆ. ಇದರ ಮೂಲಕ ಹುಟ್ಟಿನ ಆಧಾರದ ಮೇಲೆ ಜಾತಿ ಪದ್ಧತಿಯನ್ನು ನಿರಾಕರಿಸಿದರು. ಮಹಿಳೆಯರ ಬಗ್ಗೆ ಅಸಮಾನತೆ ಇರಬಾರದು ಎಂದು ಬೋಧಿಸಿದರು. ಎಲ್ಲವನ್ನೂ ವೈಜ್ಞಾನಿಕವಾಗಿ, ತರ್ಕಬದ್ಧವಾಗಿ ಅಧ್ಯಯನ ಮಾಡಿದರು. ಅರಬಿಂದೊರಂತಹ ದಾರ್ಶನಿಕರು ಸ್ವಾಮಿ ದಯಾನಂದರನ್ನು ಪ್ರಶಂಸಿದರು. ಆದರೆ ಈ ಜಾತಿ ಪದ್ಧತಿ, ಅಸಮಾನತೆಯನ್ನು ತಮ್ಮ ಹೊಟ್ಟೆಪಾಡು ಮಾಡಿಕೊಂಡವರು, ಪೂಜಿಸಿದವರು, ಆಚರಿಸಿದವರು ಇದನ್ನು ವಿರೋಧಿಸಿದರು.

   ಸ್ವಾಮಿ ದಯಾನಂದ ಸರಸ್ವತಿ

►ಅಧಿಕಾರದ ಮೆಟ್ಟಿಲುಗಳಾಗಿ, ಶಕ್ತಿ ಕೇಂದ್ರಗಳನ್ನಾಗಿ ಮಾಡಿಕೊಂಡವರು ಸಹ ಇದನ್ನು ಬೆಂಬಲಿಸಿದರಲ್ಲವೇ? ಇದು ಈಗಲೂ ಮುಂದುವರಿಯುತ್ತಿದೆ?

- ಹೌದು ಶಕ್ತಿಕೇಂದ್ರಗಳು ಈ ಸುಧಾರಣೆಯನ್ನು ವಿರೋಧಿಸಿದರು. ದಯಾನಂದ ಸರಸ್ವತಿಯವರು ಈ ಸಾಂಪ್ರದಾಯಿಕತೆಯನ್ನು ವಿರೋಧಿಸಿದಾಗ ಈ ಸಂಪ್ರದಾಯವಾದಿಗಳು ಅವರ ಮೇಲೆ 17 ಬಾರಿ ಹಲ್ಲೆ ಮಾಡಿದರು. ಕೊನೆಗೂ ಕೊಲೆ ಮಾಡಿದರು. ಒಂದನ್ನು ನೀವು ನೆನಪಿಟ್ಟುಕೊಳ್ಳಬೇಕು. ಮಹಾತ್ಮಾ ಗಾಂಧಿಯವರ ಇಡೀ ಬದುಕು ಶಾಂತಿಯನ್ನು ಒಳಗೊಂಡಿತ್ತು. ಗಾಂಧಿ ತಮ್ಮನ್ನು ಹಿಂದೂ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಆದರೆ ಅದೇ ಸಮಯದಲ್ಲಿ ಮುಸ್ಲಿಂ, ಕ್ರಿಶ್ಚಿಯನ್‌ರನ್ನು ಪ್ರೀತಿಸುತ್ತಿದ್ದರು. ಅವರ ಹಕ್ಕಗಳಿಗಾಗಿ ಹೋರಾಡಿದರು. ಮಾನವೀಯತೆಯ ಜೊತೆ ಜೊತೆಗೆ ಬೆಳೆಯುತ್ತ ಹೋದರು. ಅವರ ಮೇಲೆಯೂ ಹಲ್ಲೆ ಮಾಡಲಾಯಿತು. ಅವರನ್ನು ಹತ್ಯೆ ಮಾಡಲಾಯಿತು. ಯಾಕೆ? ಅದೇ ಹಿಂದುತ್ವ ಶಕ್ತಿಗಳು ಕೊಲೆ ಮಾಡಿದವು. ನಾಥುರಾಂ ಗೋಡ್ಸೆ ತಾನು ಹಿಂದೂ ಎಂದು ಹೇಳಿಕೊಂಡಿದ್ದ.

►ಹೌದು. 1993ರಲ್ಲಿ ನಾಥುರಾಮ್ ಗೋಡ್ಸೆ ಬರೆದ ಪುಸ್ತಕ ‘ನಾನೇಕೆ ಗಾಂಧಿಯನ್ನು ಕೊಂದೆ’ಅನ್ನು ಬಿಡುಗಡೆಗೊಳಿಸಿದ ನಂತರ ಆತನ ಸಹೋದರ ಗೋಪಾಲ್ ಗೋಡ್ಸೆ (ಗಾಂಧಿ ಹತ್ಯೆಯಲ್ಲಿ 15 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ) ಫ್ರಂಟ್‌ಲೈನ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ (ಫ್ರಂಟ್‌ಲೈನ್ 28, ಜವರಿ, 1994) ಗೋಡ್ಸೆ ಸಹೋದರರಾದ ನಾವೆಲ್ಲ ಆರೆಸ್ಸೆಸ್‌ನಲ್ಲಿ ಇದ್ದವರು. ನಾಥುರಾಮ್ ಆರೆಸ್ಸೆಸ್‌ನಲ್ಲಿ ಬೌದ್ಧಿಕ ಕಾರ್ಯಕರ್ತನಾಗಿದ್ದ. ನಂತರ ತಾನು ಆರೆಸ್ಸೆಸ್ ತೊರೆದಿರುವುದಾಗಿ ಒಂದು ಹೇಳಿಕೆ ಕೊಟ್ಟಿದ್ದ. ಏಕೆ ಹಾಗೆ ಹೇಳಿದನೆಂದರೆ ಗಾಂಧಿ ಹತ್ಯೆಯ ನಂತರ ಗೋಳ್ವಾಲ್ಕರ್ ಮತ್ತು ಆರೆಸ್ಸೆಸ್ ತುಂಬಾ ಒತ್ತಡದಲ್ಲಿತ್ತು. ಆದರೆ ನಿಜ ಹೇಳಬೇಕೆಂದರೆ ನಾಥುರಾಮ್ ಆರೆಸ್ಸೆಸ್ ತೊರೆದಿರಲಿಲ್ಲ ಎಂದು ಹೇಳಿದ್ದ.

- ಮೂಲಭೂತವಾಗಿ ಆರೆಸ್ಸೆಸ್ ಮಾತೃಸಂಸ್ಥೆ. ಅದು ಅತೀತ ತಲೆಗಳ ಪೆಡಂಭೂತ. ಅದಕ್ಕೆ ಹಲವಾರು ಬೇರೆ ಬೇರೆ ಹೆಸರುಗಳಿವೆ. ತನಗೆ ಸೂಕ್ತವೆನಿಸಿದಾಗ ಆ ಹೆಸರನ್ನು ಬಳಸಿಕೊಳ್ಳುತ್ತದೆ.

               ಸ್ವಾಮಿ ಶ್ರದ್ಧಾನಂದ

►ಸರ್, ನನ್ನ ಪ್ರಶ್ನೆ ಏನೆಂದರೆ 20ನೇ ಶತಮಾನದ ಆರಂಭದಲ್ಲಿ ಆರ್ಯ ಸಮಾಜವು ‘ಶುದ್ಧಿ ಚಳವಳಿ’ಯನ್ನು ಆರಂಭಿಸಿತು. ಸ್ವಾಮಿ ಶ್ರದ್ಧಾನಂದ ಅವರು ಇದರ ನೇತೃತ್ವ ವಹಿಸಿದ್ದರು. ಈ ಶುದ್ಧ್ದಿ ಚಳವಳಿಯಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿದವರನ್ನು ಶುದ್ಧೀಕರಿಸಿ ಮರಳಿ ಹಿಂದೂ ಧರ್ಮಕ್ಕೆ ಕರೆತರಲಾಗುತ್ತಿತ್ತು. ಇಂದು ಸಂಘ ಪರಿವಾರವು ‘ಘರ್ ವಾಪಸಿ’ ಹೆಸರಿನಲ್ಲಿ ಇದೇ ಪ್ರಕ್ರಿಯೆಯನ್ನು ಮಾಡುತ್ತಿದೆ. ಮುಸ್ಲಿಮರನ್ನು ಶುದ್ಧೀಕರಿಸಿ ಹಿಂದೂ ಧರ್ಮಕ್ಕೆ ಮರಳಿ ಕರೆ ತರುತ್ತಿದೆ. ಅಂದರೆ ಮತಾಂತರದ ವಿಷಯದಲ್ಲಿ ಆರೆಸ್ಸೆಸ್ ಮತ್ತು ಆರ್ಯ ಸಮಾಜದ ತತ್ವಗಳಲ್ಲಿ ಸಾಮ್ಯತೆ ಇದೆ. ಮರಳಿ ಹಿಂದೂ ಧರ್ಮಕ್ಕೆ ಬರಬೇಕು ಎನ್ನುವುದರಲ್ಲಿ ಇಬ್ಬರಲ್ಲಿ ಯಾವುದೇ ಭೇದವಿಲ್ಲ. ಸಂಘ ಪರಿವಾರ ಮಾಡುತ್ತಿರುವ ಈ ‘ಘರ್ ವಾಪಸಿ’ ಧ್ವಂಸಕಾರಿ ಪ್ರವೃತ್ತಿಯನ್ನು ಮೈಗೂಡಿಸಿಕೊಂಡಿದೆ. ಇದು ಕೋಮುವಾದವನ್ನು ಪ್ರಚೋದಿಸುತ್ತದೆ. ಆದರೆ ಆರ್ಯ ಸಮಾಜದ ಶುದ್ಧ್ದಿ ಚಳವಳಿ ಇದಕ್ಕಿಂತ ಹೇಗೆ ಭಿನ್ನ? ಇಲ್ಲಿ ಯೋಚನೆಯಲ್ಲಿ ಒಂದೇ ಇದ್ದರೂ ಕಾರ್ಯ ರೂಪದಲ್ಲಿ ಬೇರೆಯೇ?

- ಹೌದು. 20ನೇ ಶತಮಾನದಲ್ಲಿ ಆರ್ಯ ಸಮಾಜವು ಶುದ್ಧ್ದಿ ಚಳವಳಿಯನ್ನು ಪ್ರಾರಂಭಿಸಿತು. ಇದರ ನೇತೃತ್ವವನ್ನು ಸ್ವಾಮಿ ಶ್ರದ್ಧಾನಂದ ವಹಿಸಿದ್ದರು. ಅವರು ಸಾವಿರಾರು ಮುಸ್ಲಿಮರನ್ನು ಮರಳಿ ಹಿಂದೂ ಧರ್ಮಕ್ಕೆ ಕರೆತಂದರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಗಾಂಧೀಜಿ