ಗೋರಕ್ಷಕರು ಎಲ್ಲಿದ್ದಾರೆ?

Update: 2018-12-11 18:38 GMT

ಮಾನ್ಯರೇ,

 ದೇಶದಲ್ಲಿ ಗೋವಿನ ಹೆಸರಲ್ಲಿ ಅಮಾಯಕರ ಜೀವದ ಜೊತೆ ಚೆಲ್ಲಾಟ ಆಡುತ್ತಿರುವ, ಹಲವಾರು ಅಮಾಯಕರನ್ನು ಹತ್ಯೆ ಮಾಡಿದ, ನಕಲಿ ಗೋರಕ್ಷಕರು, ಬೀದರ್ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಬರದಿಂದ ಜಾನುವಾರುಗಳು ತೊಂದರೆ ಅನುಭವಿಸುತ್ತಿರುವಾಗ ನಾಪತ್ತೆಯಾಗಿದ್ದಾರೆ. ಈ ಜಿಲ್ಲೆಗಳಲ್ಲಿ ಹಸಿಮೇವು ಇರಲಿ, ಒಣಮೇವು ಸಹಸಿಗುತ್ತಿಲ್ಲ.ಜಾನುವಾರುಗಳು ಸೊರಗಿ ಹೋಗಿವೆ. ನೀರು, ಮೇವು ಅರಸಿ ಕೊಪ್ಪಳ ಜಿಲ್ಲೆಯಿಂದ ಜಾನುವಾರುಗಳೊಂದಿಗೆ ಜನರು ಬೇರೆಡೆಗೆ ವಲಸೆ ಹೋಗುತ್ತಿದ್ದಾರೆ.

ಗೋರಕ್ಷಕರೆಂದು ಕೊಳ್ಳುವವರಿಗೆ ನಿಜವಾಗಿಯೂ ಗೋವುಗಳ ಬಗ್ಗೆ ಪ್ರೀತಿ ಇದ್ದರೆ, ಗೋವಿನ ಹೆಸರಲ್ಲಿ ಅಮಾಯಕರನ್ನು ಕೊಲ್ಲ್ಲುವ ಬದಲು, ಬರದಿಂದ ಕಂಗೆಟ್ಟ ಜಾನುವಾರುಗಳನ್ನು ಕಷ್ಟದಿಂದ ಪಾರುಮಾಡಿ.

Similar News